ಗುರುವಾರ, ಫೆಬ್ರವರಿ 6, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ನಾನಿನ್ನು ಬದುಕಿದ್ದೀನಿ, ನೋಡ್ತೀನಿ, ಹೋರಾಟ ಮಾಡ್ತೀನಿ: ಹೆಚ್​.ಡಿ.ದೇವೇಗೌಡ

Twitter
Facebook
LinkedIn
WhatsApp
ನಾನಿನ್ನು ಬದುಕಿದ್ದೀನಿ, ನೋಡ್ತೀನಿ, ಹೋರಾಟ ಮಾಡ್ತೀನಿ: ಹೆಚ್​.ಡಿ.ದೇವೇಗೌಡ

ತುಮಕೂರು: ನನಗೆ ಕಾಲು ನೋವು ಇದೆ ಅಂತ ಪ್ರಧಾನಮಂತ್ರಿಗಳೇ ಕರೆದುಕೊಂಡು ಹೋಗುತ್ತಾರೆ. ಇಂತಹ ಗೌರವವನ್ನ ಸಂಪಾದನೆ ಮಾಡೋ ಯೋಗ್ಯತೆ ಅವರಿಗೆ ಇದೆಯಾ ಎಂದು ವಿರೋಧ ಪಕ್ಷದ ನಾಯಕರ ವಿರುದ್ಧ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರು ಕಿಡಿಕಾರಿದ್ದಾರೆ.
ಹೇರೂರಿನಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಹೆಚ್​ಡಿಡಿ, ನಮ್ಮ ಸಮಾಜವನ್ನ‌ ಒಡೆದು, ನಮ್ಮ ಶಕ್ತಿಯನ್ನ‌ ನಾಶ ಮಾಡಲಿಕ್ಕೆ‌ ಹೊರಟಿದ್ದಾರೆ. ನಾನು‌ ಜೀವಂತವಾಗಿರುವವರೆಗೂ ಅದು ಆಗಬಾರದು. ನನ್ನ‌ ಸಮಾಜ ಒಡೆಯುತ್ತಿರೋದಕ್ಕೆ ನೋವಿದೆ. ಬೇರೆಯವರ ಉದ್ದಾರಕ್ಕೆ ನಮ್ಮ ಶಕ್ತಿ ಹಾಕುತ್ತಿದ್ದೇವೆ. ಸಾಮಾನ್ಯವಾದ ಬುಡುಬುಡುಕೆ, ದೊಂಬಿದಾಸನೂ ಸಹ ಜಿ.ಪಂ. ಸದಸ್ಯನಾಗಿದ್ದಾನೆ. ಎಲ್ಲಾ ಸಮಾಜಕ್ಕೂ ನಾನು ಶಕ್ತಿ ತುಂಬಿದೆ. ಒಬ್ಬ ರೈತನ ಮಗ 15 ಸ್ಥಾನ‌ ಗೆದ್ದಿದ್ದಾನೆ ಅಂದರೆ ಅದು ಜನರಿಂದಲೇ.

ನಿಮ್ಮ‌ ಮುಂದೆ ಮತ್ತೆ ಬಂದು ಅನಿಲ್​ನ ನಿಲ್ಲಿಸಿದ್ದೇನೆ. ಅವನನ್ನ‌ ಸೋಲಿಸಲುn ಏನೇನೂ ಷಡ್ಯಂತ್ರ ನಡೆಯುತ್ತಿದೆ, ನಿಮಗೆಲ್ಲಾ ಗೊತ್ತಿದೆ. ಇಲ್ಲಿಗೆ ಬಿಡಲ್ಲ. ದೇವೇಗೌಡ ಮಂಡಿನೋವು ಅಂತ ಸುಮ್ಮನೇ ಕೂರಲ್ಲ. ಈ ದೇಶದ ರಾಜಕಾರಣವನ್ನ ಬಿಡಲ್ಲ. ಯಾರ್ಯಾರು ಏನೇನು ಮಾಡುತ್ತಾರೆಂದು ನನಗೆ ಗೊತ್ತು. ಅವರ ಗರ್ವ, ಅಹಂಕಾರವನ್ನ ಮುರಿಯೋದಕ್ಕೆ ನಿಮ್ಮ ಮುಂದೆ ನಿಂತು ಮಾತನಾಡ್ತಿದ್ದೀನಿ. ವೀರಣ್ಣಗೌಡನನ್ನ ಗೆಲ್ಲಿಸಿದ ಪುಣ್ಯಾತ್ಮರು ಗುಬ್ಬಿಯವರು. ನಿಮ್ಮನ್ನ ನಾನೂ ಮರೆಯುತ್ತೇನಾ..? ಎಂದರು.
ಈ ದೇಶದಲ್ಲಿ ದೇವೇಗೌಡರು ಏನಾದ್ರೂ ಹಣ ಮಾಡಿದ್ದಾನೆ ಅಂದರೆ, ನಾನು ಈ ರಾಷ್ಟ್ರದಲ್ಲಿ ತಲೆಯೆತ್ತಿ ನಿಲ್ಲೋದಿಲ್ಲ. ನನ್ನ ಸೋಲಿಗೆ ನನ್ನನ್ನು ಅಣಕ ಮಾಡುತ್ತಾರೆ, ನನಗೆ ನೋವಿದೆ. ಪಕ್ಷ ಕಟ್ಟಿ ಮತ್ತೆ ಅಧಿಕಾರಕ್ಕೆ ಬರುತ್ತೇನೆ. ಒಂದು ಬ್ಯಾಂಕಿನ ಮುಖ್ಯಸ್ಥರಾಗಿದ್ದೀರಾ? ಅಲ್ಲಿ ಏನೇನು ನಡೆದಿದೆ ಅನ್ನೋ ಪ್ರಶ್ನೆ ನಮಗೆ ಬೇಡ. ನಾನಿನ್ನು ಬದುಕಿದ್ದೀನಿ, ನೋಡ್ತೀನಿ, ಹೋರಾಟ ಮಾಡ್ತೀನಿ. ಎಂತೆಂತವರನ್ನೋ ಜಯಿಸಿದ್ದೀನಿ. ನನ್ನ ಸೋಲಿಸಲು ನೀರು ಬಿಡಲ್ಲ ಅನ್ನೋ ಕೀಳುಮಟ್ಟದ ಅಪಪ್ರಚಾರ ನಡೆಯಿತು. ನನಗೆ ಅವತ್ತು ಏನು ಅವಮಾನ ಆಯಿತು.
ನಮ್ಮ ಮುಖಂಡರಿಗೆ ಹೇಳುತ್ತೇನೆ ಬರಿ ಹಣ ಮುಖ್ಯ ಅಲ್ಲ. ದೇವೇಗೌಡರಿಗೆ 89 ವರ್ಷ ಅಂತ ಯೋಚನೆ ಮಾಡಬೇಡಿ. ನಾನು ಮತ್ತೆ ಇಡೀ ರಾಜ್ಯದಲ್ಲಿ ಹೋರಾಟ ಮಾಡಿ ಪಕ್ಷವನ್ನ ಅಧಿಕಾರಕ್ಕೆ ತರುತ್ತೇನೆ. ತುಮಕೂರಿನಲ್ಲಿ ಅನಿಲ್ ಗೆಲ್ಲಿಸೋ ಮುಖಾಂತರ ಪಕ್ಷ ಉಳಿಸಿ, ಕೈಮುಗಿದು ಕೇಳಿಕೊಳ್ಳುತ್ತೇನೆ. ದೇವೇಗೌಡರು ನೀರು ಕೊಡಲ್ಲ ಅಂತಾ ಅಪಪ್ರಚಾರ ಮಾಡಿದರೂ ನಾವು ಬಿಡುವುದಿಲ್ಲ. ಮತ್ತೆ ಈ ತುಮಕೂರಿನಲ್ಲಿ ಎದ್ದು ನಿಲ್ತೇವೆ. ದೇವೇಗೌಡರಿಗೆ ಈ ಕ್ಷೇತ್ರ ಪಣವಾಗಿದೆ ಎಂದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು