ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ತೆಂಗಿನಕಾಯಿ ಭಾರತದ ಅಡುಗೆಗೆ ಅಗತ್ಯವಾಗಿರುವ ಒಂದು ಪ್ರಮುಖ ಕಚ್ಚಾವಸ್ತು. ತೆಂಗಿನಕಾಯಿ ಎಣ್ಣೆಗೂ ಉಪಯೋಗವಾಗುತ್ತದೆ.
ಈ ತೆಂಗಿನಕಾಯಿ ಉತ್ಪಾದನೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನವನ್ನು ಕೇರಳ ರಾಜ್ಯ ಪಡೆದುಕೊಂಡಿದೆ. ಮೂರನೇ ಸ್ಥಾನವನ್ನು ತಮಿಳುನಾಡು ಪಡೆದುಕೊಂಡಿದೆ. ದೇಶದ ಸುಮಾರು 35 ಶೇಕಡ ತೆಂಗಿನಕಾಯಿ ಉತ್ಪಾದನೆ ಕೇರಳ ರಾಜ್ಯದಲ್ಲಿ ಆಗುತ್ತದೆ. ಕರ್ನಾಟಕದಲ್ಲಿ ಸುಮಾರು 26 ಶೇಕಡ ತೆಂಗಿನಕಾಯಿ ಉತ್ಪಾದನೆಯಾಗುತ್ತದೆ. ತಮಿಳುನಾಡಿನಲ್ಲಿ ಶೇಕಡ 25ರಷ್ಟು ತೆಂಗಿನಕಾಯಿ ಉತ್ಪಾದನೆಯಾಗುತ್ತದೆ. ದೇಶದ ತೆಂಗಿನಕಾಯಿ ಉತ್ಪಾದನೆಯ ಶೇಕಡ 75ರಷ್ಟು ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲಿ ಆಗುತ್ತದೆ.
ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಒರಿಸ್ಸಾ ರಾಜ್ಯಗಳಲ್ಲಿ ತೆಂಗಿನಕಾಯಿಯನ್ನು ಬೆಳೆಯಲಾಗುತ್ತದೆ. ಕೇರಳ ರಾಜ್ಯದ ಬಹುತೇಕ ಪ್ರದೇಶಗಳು ತೆಂಗಿನಕಾಯಿಯನ್ನು ಬೆಳೆಯುತ್ತವೆ. ತೆಂಗಿನಕಾಯಿಯ ಉಪಉತ್ಪನ್ನಗಳನ್ನು ಬೆಳೆಯುವಲ್ಲಿ ಕೇರಳ ರಾಜ್ಯ ನಂಬರ್ ಒನ್ ಸ್ಥಾನದಲ್ಲಿದೆ.
ಕಲ್ಪವೃಕ್ಷ ಎಂದು ಕರೆಯಲಾಗುವ ತೆಂಗಿನಕಾಯಿ ಕೇರಳ ರಾಜ್ಯಕ್ಕೆ ಉತ್ತಮವಾದ ಆನೆಯನ್ನು ತಂದುಕೊಡುವ ಪ್ರಮುಖ ಬೆಳೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೇರಳ ರಾಜ್ಯದಲ್ಲಿ ಉತ್ಪಾದನೆಯ ಕುಸಿತ ಆರಂಭವಾಗಿದೆ. ಅದಕ್ಕೆ ವಿವಿಧ ಕಾರಣಗಳು ಇವೆ. ಅನಿಯಮಿತ ಮಳೆ ಹಾಗೂ ಪ್ರವಾಹದ ಕಾರಣದಿಂದಾಗಿ ಕೇರಳದಲ್ಲಿ ತೆಂಗಿನಕಾಯಿಯ ಉತ್ಪಾದನೆಗೆ ಸ್ವಲ್ಪ ಹೊಡೆತ ಬಿದ್ದಿದೆ.
ಕರ್ನಾಟಕದಲ್ಲಿ ತುಮಕೂರು, ಕೋಲಾರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ತೆಂಗಿನಕಾಯಿ ಬೆಳೆಯಲಾಗುತ್ತದೆ. ತುಮಕೂರು ತೆಂಗಿನಕಾಯಿ ಬೆಳೆಗೆ ಬಹಳಷ್ಟು ಹೆಸರುವಾಸಿ. ದಕ್ಷಿಣ ಕನ್ನಡ ಮತ್ತು ಉಡುಪಿಯ ಕರಾವಳಿ ಪ್ರದೇಶಗಳಲ್ಲಿ ತೆಂಗಿನಕಾಯಿಯನ್ನು ಬಹಳಷ್ಟು ಬೆಳೆಯಲಾಗುತ್ತದೆ. ಕೇರಳ ಮತ್ತು ಕರ್ನಾಟಕದಲ್ಲಿ ತೆಂಗಿನಕಾಯಿ ವ್ಯಾಪಕವಾಗಿ ಬೆಳೆಯುವುದರಿಂದ ಹಲವಾರು ತೆಂಗಿನಕಾಯಿ ಎಣ್ಣೆ ಯ ಉದ್ದಿಮೆಗಳು ಆರಂಭಗೊಂಡಿವೆ. ಇದು ಬಹಳಷ್ಟು ಜನರಿಗೆ ಉದ್ಯೋಗದ ಅವಕಾಶಗಳನ್ನು ಸೃಷ್ಟಿ ಮಾಡಿವೆ.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?