ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ತಾಯಿಗೆ ಕಚ್ಚಿದ ನಾಗರಹಾವು-ಬಾಯಿಯಿಂದ ವಿಷವನ್ನು ಹೀರಿ ತೆಗೆದು ಬದುಕಿಸಿದ ಮಗಳು!

Twitter
Facebook
LinkedIn
WhatsApp
WhatsApp Image 2023 03 21 at 4.07.13 PM

ಪುತ್ತೂರು : ನಾಗರ ಹಾವು ಕಡಿತಕ್ಕೊಳಗಾದ ತಾಯಿಗೆ ಪುತ್ರಿಯೇ ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಿದ ಅಪರೂಪದ ಪ್ರಸಂಗ ಪುತ್ತೂರಿನ ಕೆಯ್ಯೂರಿನಲ್ಲಿ ನಡೆದಿದೆ.

ಪುತ್ತೂರು ವಿವೇಕಾನಂದ ಕಾಲೇಜಿನ ದ್ವಿತೀಯ ಬಿಸಿಎ ವಿದ್ಯಾರ್ಥಿನಿ, ಸ್ಕೌಟ್ಸ್ ಮತ್ತು ಗೈಡ್ಸ್ ರೇಂಜರ್‍ ಶ್ರಮ್ಯಾ ರೈ ತಾಯಿಯನ್ನು ರಕ್ಷಿಸಿದ ಮಗಳು. ಕಳೆದೈದು ದಿನಗಳ ಹಿಂದೆ ಈಕೆಯ ತಾಯಿಗೆ ನಾಗರಹಾವು ಕಡಿದಿದ್ದು, ಕೂಡಲೇ ಪುತ್ರಿ ಶ್ರಮ್ಯಾ ತಮ್ಮ ಬಾಯಿಯಿಂದ ವಿಷವನ್ನು ಹೀರಿ ತೆಗೆದು ತಾಯಿಯನ್ನು ರಕ್ಷಿಸಿದ್ದಾರೆ.

 

ಏನಿದು ಘಟನೆ?
ಶ್ರಮ್ಯಾಳ ತಾಯಿ ಮನೆ ಕೆಯ್ಯೂರಿನ ತಮ್ಮ ಮನೆಯ ಸಮೀಪವೇ ಇದ್ದು, ಅಲ್ಲಿಗೆ ಶ್ರಮ್ಯಾ ಹಾಗೂ ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯೆಯಾಗಿರುವ ಆಕೆಯ ತಾಯಿ ಮಮತಾ ರೈ ಹೋಗಿದ್ದರು. ಮನೆಯಲ್ಲಿ ಪಂಪ್ ಸ್ವಿಚ್ ಹಾಕುವುದಕ್ಕೆಂದು ಮಮತಾ ಅವರು ತೋಟಕ್ಕೆ ಹೋಗಿದ್ದಾರೆ. ಸ್ವಿಚ್ ಹಾಕಿ ತೋಟದಿಂದ ವಾಪಸ್ಸಾಗುವಾಗ ಕೆರೆಯ ಬಳಿ ನಾಗರಹಾವು ಇರುವುದು ಗೊತ್ತಾಗದೇ ಅದನ್ನು ತುಳಿದಿದ್ದಾರೆ. ಈ ವೇಳೆ ಹಾವು ಅವರಿಗೆ ಕಚ್ಚಿದೆ. ಕೂಡಲೇ ಮನೆಗೋಡಿ ಬಂದ ಮಮತಾ ರೈ, ವಿಷ ಮೇಲೇರದಂತೆ ಕೆಲಸದಾಳಿನ ಸಹಾಯದಿಂದ ಆ ಜಾಗಕ್ಕೆ ಬೈ ಹುಲ್ಲು ಕಟ್ಟಿದ್ದಾರೆ. ಆದರೆ ಇದು ಪ್ರಯೋಜನವಾಗದು ಎಂದು ಅರಿತುಕೊಂಡ ಶ್ರಮ್ಯಾ ಸಮಯಪ್ರಜ್ಞೆ ಮೆರೆದು ಹಾವು ಕಚ್ಚಿದ ಸ್ಥಳಕ್ಕೆ ತಮ್ಮ ಬಾಯಿಯೂರಿ ಹೀರಿ ವಿಷ ತೆಗೆದಿದ್ದಾರೆ.

ಶ್ರಮ್ಯಾಳ ಪ್ರಥಮ ಚಿಕಿತ್ಸೆ ಬಳಿಕ ಮಮತಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ವೈದ್ಯರು ಕೂಡಾ ವಿಷ ತೆಗೆದಿದ್ದು ಒಳ್ಳೆಯದಾಯಿತು, ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ ಎಂದಿದ್ದಾರೆ. ಮಗಳ ಸಮಯಪ್ರಜ್ಞೆ ತಾಯಿಯ ಜೀವ ಕಾಪಾಡಿರುವುದಕ್ಕೆ ಶ್ರಮ್ಯಾಳಿಗೆ ಪ್ರಶಂಸೆ ವ್ಯಕ್ತವಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಶ್ರಮ್ಯಾ, ಬೈಹುಲ್ಲು ಕಟ್ಟಿದರೆ ವಿಷ ಏರುವುದಿಲ್ಲ ಎಂಬುದರಲ್ಲಿ ನನಗೆ ವಿಶ್ವಾಸ ಇರಲಿಲ್ಲ. ಹೀಗಾಗಿ ಸಿನಿಮಾಗಳಲ್ಲಿ ನೋಡಿದ, ಇತತರಿಂದ ಕೇಳಿದ ಅನುಭವಗಳ ಮೇರೆಗೆ ನಾನೇ ಬಾಯಿಯೂರಿ ವಿಷ ಹೀರಿ ತೆಗೆದೆ ಎಂದಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist