ಮಂಗಳವಾರ, ಮೇ 7, 2024
ಟಿ-20 ವಿಶ್ವಕಪ್ ಗೆ ಪ್ರಕಟಗೊಂಡ ಎಲ್ಲಾ ತಂಡದಲ್ಲಿ ಯಾರೆಲ್ಲಾ ಆಟಗಾರರಿದ್ದಾರೆ? ಬಲಿಷ್ಠ ತಂಡ ಯಾವುದು?-ಕರ್ನಾಟಕದಲ್ಲಿ ಸಂಜೆ 5 ಗಂಟೆವರೆಗೆ ಶೇಕಡಾ 66.05 ರಷ್ಟು ಮತದಾನ..!-ಕಳೆದ ಐದು ತಿಂಗಳಿಂದ ರಿಜಿಸ್ಟ್ರೇಷನ್ ಸರ್ವರ್ ಸಮಸ್ಯೆ ಮುಗಿಯದ ಕಥೆ!10 ನಿಮಿಷದ ಡಾಕ್ಯೂಮೆಂಟ್ಗೆ ಅಪ್ಲೋಡೆಗೆ ಬೇಕು ಮೂರರಿಂದ ನಾಲ್ಕು ದಿನ!!-ಮಂಜೇಶ್ವರ: ಕಾರು ಮತ್ತು ಅಂಬುಲೆನ್ಸ್ ನಡುವೆ ಭೀಕರ ಅಪಘಾತ; ಮೂವರು ಸಾವು.!-ಬಂಟ್ವಾಳ: ಮದುವೆ ಸಭಾಂಗಣವೊಂದರ ಆವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ..!-Rain Alert: ರಾಜ್ಯದಲ್ಲಿ ಇಂದಿನಿಂದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ.!-ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಲೀಕ್ ಆಗಲು ನನ್ನ ಪಾತ್ರವಿಲ್ಲ; ದೇವರಾಜೆಗೌಡರಿಂದ ಸುಳ್ಳು ಆರೋಪವೆಂದ ಡಿಕೆ ಶಿವಕುಮಾರ್-ಕೋವಿಡ್ ಲಸಿಕೆಯಿಂದಲೇ ನನಗೆ ಹೃದಯಾಘಾತ ಸಂಭವಿಸಿರಬಹುದು? ನಟ ಶ್ರೇಯಸ್ ತಲ್ಪಾಡೆ-ಆಘಾತಕಾರಿ ಘಟನೆ; ಕ್ರಿಕೆಟ್‌ ಆಡುತ್ತಿದ್ದಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು ಬಾಲಕ ಸಾವು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ತಂದೆ ಮಾಡಿದ ಸಾಲಕ್ಕೆ ಮುದ್ದು ಕಂದಮ್ಮನ ದುರಂತ ಅಂತ್ಯ; ತನಿಖೆಗೆ ಇಳಿದಾಗ ಪ್ರಕರಣಕ್ಕೆ ಸಿಕ್ತು ಸ್ಫೋಟಕ ತಿರುವು

Twitter
Facebook
LinkedIn
WhatsApp
ತಂದೆ ಮಾಡಿದ ಸಾಲಕ್ಕೆ ಮುದ್ದು ಕಂದಮ್ಮನ ದುರಂತ ಅಂತ್ಯ; ತನಿಖೆಗೆ ಇಳಿದಾಗ ಪ್ರಕರಣಕ್ಕೆ ಸಿಕ್ತು ಸ್ಫೋಟಕ ತಿರುವು

ಕೋಲಾರ: ಟೆಕ್ಕಿಯೊಬ್ಬನು ಅನುಮಾನಾಸ್ಪದವಾಗಿ ಕಾಣಿಯಾಗಿ ಆತನ ಮೂರು ವರ್ಷದ ಮಗು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ನಾಪತ್ತೆಯಾಗಿದ್ದ ಟೆಕ್ಕಿ ತಮಿಳುನಾಡಿನಲ್ಲಿರುವುದಾಗಿ ತಿಳಿದು ಬಂದಿದ್ದು, ಪ್ರಕರಣ ಜಾಡು ಹಿಡಿದಿರುವ ಪೊಲೀಸರು ಟೆಕ್ಕಿಯ ಹುಡುಕಾಟ ಚುರುಕುಗೊಳಿಸಿದ್ದಾರೆ. ಮಗುವಿನ ಶವ ಕೆರೆಯಲ್ಲಿ ಸಿಕ್ಕ ನಂತರ ದಡದಲ್ಲಿ ಕಾರು ಕೂಡ ಪತ್ತೆಯಾಗಿತ್ತು. ಹೀಗಾಗಿ ಮಗುವಿನ ತಂದೆ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿ ಕೆರೆಯಲ್ಲಿ ಎರಡು ದಿನಗಳ ತೀವ್ರ ಶೋಧ ನಡೆಸಲಾಗಿತ್ತು. ಹಾಗಿದ್ದರೆ ಈ ಪ್ರಕರಣವು ಹೊಸ ತಿರುವುದು ಪಡೆದುಕೊಂಡಿದ್ದು ಹೇಗೆ ಎಂಬುದು ಇಲ್ಲಿದೆ ನೋಡಿ.

ನವೆಂಬರ್​ 15 ರ ರಾತ್ರಿ ಕೋಲಾರ ತಾಲ್ಲೂಕು ಕೆಂದಟ್ಟಿ ಗ್ರಾಮದ ಕೆರೆಯಲ್ಲಿ ಮೂರು ವರ್ಷದ ಪುಟ್ಟ ಮಗುವಿನ ಶವವೊಂದು ಪತ್ತೆಯಾಗಿತ್ತು, ಜೊತೆಗೆ ಅದಕ್ಕೆ ಪೂರಕ ಎಂಬಂತೆ ಕೆರೆಯ ದಡದಲ್ಲಿ ಒಂದು ನೀಲಿ ಬಣ್ಣದ ಐ20 ಕಾರ್​ ಕೂಡಾ ಪತ್ತೆಯಾಗಿತ್ತು. ಈ ವಿಷಯ ತಿಳಿದು ಸ್ಥಳಕ್ಕೆ ಬೇಟಿ ನೀಡಿದ್ದ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದರು.

ಕೆರೆ ದಡದಲ್ಲಿ ಪತ್ತೆಯಾದ ಕಾರು​​ ಹಾಗೂ ಮೃತ ಮಗು ಯಾರದ್ದು ಎಂದು ವಿಚಾರಣೆ ಮಾಡಿದಾಗ ಪತ್ತೆಯಾಗಿದ್ದ ಮಗು ಗುಜರಾತ್​ ಮೂಲದ ಬೆಂಗಳೂರಿನ ಚಾಕ್ಲೆಟ್​ ಬಾಗಲೂರಿನ ರಾಗಾ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ ರಾಹುಲ್​ ಹಾಗೂ ಭವ್ಯ ದಂಪತಿಯ ಮೂರು ವರ್ಷದ ಮಗು ಜಿಯಾ ಅನ್ನೋದು ತಿಳಿದು ಬಂದಿತ್ತು. ಇನ್ನು ಸ್ಥಳಕ್ಕೆ ಬಂದಿದ್ದ ರಾಹುಲ್​ ಪತ್ನಿ ಭವ್ಯ ಪೊಲೀಸರಿಗೆ ನವೆಂಬರ್​ 15ರ ಬೆಳಿಗ್ಗೆಯಿಂದ ತನ್ನ ಪತಿ ಹಾಗೂ ಮಗು ಇಬ್ಬರು ನಾಪತ್ತೆಯಾಗಿದ್ದಾರೆ ಅನ್ನೋ ಮಾಹಿತಿ ನೀಡಿದ್ದರು.

ನವೆಂಬರ್​ 15 ರಂದು ಮಗುವನ್ನು ಶಾಲೆಗೆ ಬಿಟ್ಟು ಬರುವುದಾಗಿ ಹೇಳಿ ಮಗುವಿನೊಂದಿಗೆ ಹೊರಟಿದ್ದ ರಾಹುಲ್​ ಮದ್ಯಾಹ್ನ ಸುಮಾರಿಗೆ ರಾಹುಲ್​ ಪೋನ್​ ಸ್ವಿಚ್​ ಆಫ್​ ಆಗಿತ್ತು. ಈ ಬಗ್ಗೆ ಭವ್ಯ ಬಾಗಲೂರು ಪೊಲೀಸರಿಗೆ ದೂರು ಸಹ ನೀಡಿದ್ದರು. ಆದರೆ ಅದೇ ದಿನ ಸಂಜೆ ವೇಳೆ ನಾಪತ್ತೆಯಾಗಿದ್ದ ಭವ್ಯ ಪತಿ ರಾಹುಲ್ ಕಾರು ಮತ್ತು ಮಗುವಿನ ಶವ ಕೋಲಾರ ತಾಲ್ಲೂಕು ರಾಷ್ಟ್ರೀಯ ಹೆದ್ದಾರಿ-75ರ ಕೆಂದಟ್ಟಿ ಗ್ರಾಮದ ಕೆರೆಯ ಬಳಿ ಪತ್ತೆಯಾಗಿತ್ತು.

ಪತ್ತೆಯಾದ ಕಾರಿ​ನಲ್ಲಿ ರಾಹುಲ್ ಮೊಬೈಲ್​, ಪರ್ಸ್​, ಮಗುವಿನ ಸ್ಕೂಲ್​ ಬ್ಯಾಗ್​ ಸೇರಿದಂತೆ ಎಲ್ಲವೂ ಕಾರಿ​ನಲ್ಲಿತ್ತು. ಎಲ್ಲರೂ ಕೂಡಾ ರಾಹುಲ್​ ಮಗುವನ್ನು ಕೊಂದು ತಾನು ಕೂಡಾ ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿ, ಸತತವಾಗಿ ಎರಡು ದಿನಗಳ ಕಾಲ ರಾಹುಲ್​ ಶವಕ್ಕಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಆದರೆ ಶವ ಪತ್ತೆಯಾಗಿರಲಿಲ್ಲ.

ಇನ್ನು ಪೊಲೀಸರ ತನಿಖೆ ವೇಳೆಯಲ್ಲಿ ರಾಹುಲ್​ ತನ್ನ ಮಗುವನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿತ್ತು. ಅದಕ್ಕೆ ಕಾರಣ ಏನು ಎಂದು ನೋಡಿದಾಗ, ರಾಹುಲ್​ ಹಾಗೂ ಭವ್ಯ ಮದುವೆಯಾಗಿ ಆರು ವರ್ಷವಾಗಿತ್ತು. ಎರಡು ವರ್ಷಗಳ ಹಿಂದಷ್ಟೇ ಬೆಂಗಳೂರಿನ ರಾಗಾ ಅಪಾರ್ಟ್​​ಮೆಂಟ್​ನಲ್ಲಿ ಬಂದು ನೆಲೆಸಿದ್ದರು. ಸಾಪ್ಟ್​ವೇರ್​ ಕಂಪನಿಯ ಉದ್ಯೋಗಿಯಾಗಿದ್ದ ರಾಹುಲ್​ ಕಳೆದ ಆರು ತಿಂಗಳಿಂದ ಕೆಲಸ ಇರಲಿಲ್ಲ ಸಾಲದ ಸುಳಿಗೆ ಸಿಲುಕಿದ್ದರು ಅನ್ನೋದು ತಿಳಿದು ಬಂದಿದೆ.

ಅಷ್ಟೇ ಅಲ್ಲದೆ, ಕಳೆದ ಒಂದು ವಾರದ ಹಿಂದಷ್ಟೇ ರಾಹುಲ್​ ತನ್ನನ್ನು ಯಾರೋ ರಾಬರಿ ಮಾಡಿ ತನ್ನ ಬಳಿ ಇದ್ದ ಚಿನ್ನದ ಒಡವೆಗಳನ್ನು ಕಸಿದುಕೊಂಡು ಹೋಗಿದ್ದಾರೆಂದು ಬಾಗಲೂರು ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ದೂರು ನೀಡಿದ ನಂತರ ರಾಹುಲ್​ ಪದೇ ಪದೇ ಪೊಲೀಸ್​ ಠಾಣೆಗೆ ತೆರಳಿ ತಮ್ಮ ದೂರಿನ ಪರಿಶೀಲನೆ ನಡೆಸುವಂತೆ ಒತ್ತಾಯ ಮಾಡಿದ್ದರಂತೆ. ಆಗ ಪರಿಶೀಲನೆ ನಡೆಸಿದ ಪೊಲೀಸರಿಗೆ ರಾಹುಲ್​ ತಾನೇ ತನ್ನ ಒಡವೆಗಳನ್ನು ಡವಿಟ್ಟು ಸುಳ್ಳು ದೂರು ನೀಡಿರುವುದು ತಿಳಿದು ಬಂದ ಹಿನ್ನೆಲೆ ಠಾಣೆಗೆ ಬರುವಂತೆ ನ.15ರಂದು ಪೊಲೀಸರು ರಾಹುಲ್​ಗೆ ತಿಳಿಸಿದ್ದಾರೆ.

ಅಂದು ಪೊಲೀಸ್​ ಠಾಣೆಗೆ ಹೋಗಬೇಕಿದ್ದ ರಾಹುಲ್​ ಮಗುವನ್ನು ಶಾಲೆಗೆ ಬಿಟ್ಟು ಬರಲು ಹೋದವನು ನಾಪತ್ತೆಯಾಗಿದ್ದರು. ಸಾಲ ಮತ್ತು ಪೊಲೀಸರಿಗೆ ಭಯಪಟ್ಟು ಮಗುವನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು ನಾಪತ್ತೆಯಾಗಿದ್ದ ರಾಹುಲ್ ತನ್ನ ಪತ್ನಿ ಭವ್ಯ ತಂದೆಗೆ ಪೋನ್​ ಕರೆ ಮಾಡಿ​ ತಾನು ತಮಿಳುನಾಡಿನ ವೆಲ್ಲೂರಿನಲ್ಲಿದ್ದು, ತನ್ನನ್ನು ಹಾಗೂ ತನ್ನ ಮಗಳನ್ನು ಯಾರೋ ಕಿಡ್ನಾಫ್​ ಮಾಡಿ ತನ್ನ ಮಗಳನ್ನು ಕೊಂದು ತನ್ನನ್ನು ತಮಿಳುನಾಡಿಗೆ ಕೆರೆದುಕೊಂಡು ಬಂದು ಬಿಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ.

“ರಾಹುಲ್ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂಬ ಶಂಕೆ ಇತ್ತು. ಈ ನಡುವೆ ರಾಹುಲ್ ತಮಿಳುನಾಡಿನಲ್ಲಿ ಇರುವ ಮಾಹಿತಿ ತಿಳಿದುಬಂದಿದೆ. ರಾಹುಲ್ ತನ್ನ ಮಾವನಿಗೆ ಕರೆ ಮಾಡಿ ಮಗುವನ್ನು ಕೊಂದಿರುವ ಹಾಗೂ ತನ್ನನ್ನು ಅಪಹರಣ ಮಾಡಿ ತಮಿಳುನಾಡಿಗೆ ತಂದು ಬಿಟ್ಟಿದ್ದಾರೆ ಎಂದಿದ್ದಾರೆ. ವಾಪಸ್ ಬರುವಂತೆ ಮಾವ ಸೂಚಿಸಿದಾಗ ಎರಡು ದಿನದ ನಂತರ ಬರುವುದಾಗಿ ರಾಹುಲ್ ಹೇಳಿದ್ದಾರೆ. ಪ್ರಕರಣ ಸಂಬಂಧ ರಾಹುಲ್​ನನ್ನು ಪತ್ತೆಹಚ್ಚಿ ವಿಚಾರಣೆ ನಡೆಸಲಾಗುವುದು. ನಂತವರೇ ಪ್ರಕರಣದ ಸತ್ಯಾಸತ್ಯತೆ ತಿಳಿದುಬರಲಿದೆ” – ಡಿ.ದೇವರಾಜ್,​ ಪೊಲೀಸ್ ಅಧೀಕ್ಷಕ, ಕೋಲಾರ

ಸದ್ಯ ಬಾಗಲೂರು ಪೊಲೀಸರು ಹಾಗೂ ಕೋಲಾರ ಗ್ರಾಮಾಂತರ ಪೊಲೀಸರು ತಮಿಳುನಾಡಿನಲ್ಲಿ ರಾಹುಲ್​ಗಾಗಿ ಹುಡುಕಾಟ ಶುರುಮಾಡಿದ್ದು ರಾಹುಲ್​ ಸಿಕ್ಕ ನಂತರವಷ್ಟೇ ಪ್ರಕರಣದ ಅಸಲಿಯತ್ತು ಬಯಲಾಗಲಿದೆ. ರಾಹುಲ್​ ನಿಜವಾಗಲೂ ಕಿಡ್ನಾಪ್​ ಆಗಿದ್ದಾರಾ? ರಾಹುಲ್​ ಹೇಳುತ್ತಿರುವ ಮಾತಿನಲ್ಲಿರುವ ಅಸಲಿಯತ್ತೇನು? ಎಂಬಿತ್ಯಾದಿ ವಿಚಾರಗಳು ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ