
ದೆಹಲಿ: ಸಿಖ್ ಧರ್ಮದ 9 ನೇ ಗುರು, ಗುರು ತೇಗ್ ಬಹಾದೂರ್ (Guru Tegh Bahadur) ಅವರ 400 ಜಯಂತ್ಯುತ್ಸವ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ರಾಜಧಾನಿಯ ಕೆಂಪುಕೋಟೆಯ (Red Fort) ಆವರಣದಿಂದ ದೇಶವನ್ನು ಉದ್ದೇಶಿಸಿ ಮಾತಾಡಿದರು. ಸೂರ್ಯಾಸ್ತದ ಬಳಿಕ ಕೆಂಪುಕೋಟೆಯಿಂದ ಭಾಷಣ ಮಾಡಿದ ಭಾರತದ ಮೊಟ್ಟ ಮೊದಲ ಪ್ರಧಾನಿ ಮೋದಿ ಅವರಾಗಿದ್ದಾರೆ. ಗುರು ತೇಗ್ ಬಹಾದೂರ ಅವರನ್ನು ಗಲ್ಲಿಗೇರಿಸುವಂತೆ ಮೊಘಲ್ ಸಾಮ್ರಾಟ ಔರಂಗಜೇಬ್ ಇದೇ ಕೋಟೆಯಿಂದ ಆಜ್ಞೆ ಹೊರಡಿಸಿದ್ದರಿಂದ ಪ್ರಧಾನಿ ಮೋದಿ ಈ ಸ್ಥಳವನ್ನು ತಮ್ಮ ಭಾಷಣಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.
‘ಈ ಪವಿತ್ರ ಸಂದರ್ಭದಲ್ಲಿ ಎಲ್ಲ ಹತ್ತು ಸಿಖ್ ಗುರುಗಳ ಪಾದಗಳಿಗೆ ವಂದಿಸುತ್ತೇನೆ,’ ಎಂದು ಮಾತು ಆರಂಭಿಸಿದ ಪ್ರಧಾನಿಗಳು, ‘ಭಾರತ ದೇಶವು ನಮ್ಮ ಗುರುಗಳು ತೋರಿಸಿದ ಮಾರ್ಗದಲ್ಲಿ ಸಂಪೂರ್ಣ ಸಂಕಲ್ಪ ಮತ್ತು ಬದ್ಧತೆಯೊಂದಿಗೆ ಮುನ್ನಡೆಯುತ್ತಿರುವುದು ನನ್ನಲ್ಲಿ ಆನಂದವನ್ನುಂಟು ಮಾಡಿದೆ. ಎಲ್ಲರಿಗೂ ಪ್ರಕಾಶ ಪೂರಬ್ನ ಹಾರ್ದಿಕ ಶುಭಾಶಯಗಳು,’ ಎಂದರು.
‘ಕೆಂಪು ಕೋಟೆಯನ್ನು ನೋಡುತ್ತಿದ್ದರೆ ನನಗೆ ಗುರು ತೇಗ್ ಬಹಾದೂರ್ ಅವರ ಬಲಿದಾನ ನೆನೆಪಿಗೆ ಬರುತ್ತವೆ. ಔರಂಗಜೇಬನ ದಮನಕಾರಿ ನೀತಿಗಳ ನಡುವೆ ಗುರು ತೇಗ್ ಬಹಾದೂರ ಅವರು ಹಿಂದ್ ಕಾ ಚಾದರ್ ಆಗಿ ಉದ್ಭವಿಸಿದರು ಮತ್ತು ಅವನ ವಿರುದ್ಧ ಅಚಲ ಬಂಡೆಯಂತೆ ನಿಂತರು. ಔರಂಗಜೇಬ ಅನೇಕ ಭಾರತೀಯರ ತಲೆಗಳನ್ನು ಕಡಿದು ಹಾಕಿದ್ದಕ್ಕೆ ಈ ಕೆಂಪುಕೋಟೆ ಸಾಕ್ಷಿಯಾಗಿದೆ, ಆದರೆ ಅವನ ಕ್ರೌರ್ಯ, ನರಮೇಧ ನಮ್ಮ ವಿಶ್ವಾಸವನ್ನು ಕದಡುವಲ್ಲಿ ವಿಫಲವಾಗಿದೆ, ಎಂದು ಪ್ರಧಾನಿ ಮೋದಿ ಹೇಳಿದರು.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist