ಕೋಪದ ಭರದಲ್ಲಿ ಮಲಗಿದ್ದ ಸ್ನೇಹಿತನನ್ನು ಕೊಲೆಗೈದ
ಮುಂಬೈ: ಕೋಪದ ಭರದಲ್ಲಿ ವ್ಯಕ್ತಿಯೊಬ್ಬ ನಿದ್ದೆಯಲ್ಲಿದ್ದ (Sleep) ಸ್ನೇಹಿತನನ್ನು (Friend) ಹತ್ಯೆಗೈದ ಘಟನೆ ಮುಂಬೈನಲ್ಲಿ (Mumbai) ನಡೆದಿದೆ.
ದಕ್ಷಿಣ ಮುಂಬೈನ ಕುಂಬಾರವಾಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತನನ್ನು ಸಂದೀಪ್ ಸೋನಾವಾನೆ ಎಂದು ಗುರುತಿಸಲಾಗಿದ್ದು, ಗಣೇಶ್ ಶಿವಂಕರ್ ಬಂಧಿತ ಆರೋಪಿ ಆಗಿದ್ದಾನೆ. ಗಣೇಶ್ ಶಿವಂಕರ್ ಮದ್ಯದ ಅಮಲಿನಲ್ಲಿದ್ದ. ಈ ವೇಳೆ ಸಂದೀಪ್ ಜೊತೆ ಗಣೇಶ್ ಜಗಳ ಮಾಡಿಕೊಂಡಿದ್ದ.
ಅದಾದ ಬಳಿಕ ಗಣೇಶ್ ಶಿವಂಕರ್ ಸ್ನೇಹಿತ ಮಲಗಿದ್ದಾಗ ಆತನ ಮೇಲೆ ಸೇಡು ತೀರಿಸಬೇಕು ಎಂದು ಯೋಜನೆ ರೂಪಿಸಿದ್ದ. ತನ್ನ ಯೋಜನೆಯಂತೆ ಭಾರವಾದ ಗ್ರಾನೈಟ್ ಅನ್ನು ಸಂದೀಪ್ ತಲೆಯ ಮೇಲೆ ಹಾಕಿದ್ದಾನೆ. ಅದಾದ ಬಳಿಕ ಅಲ್ಲಿದ್ದ ಸ್ಥಳೀಯರು ಸಂದೀಪ್ನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ವೇಳೆ, ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಗಣೇಶ್ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಗೆಳೆಯರು ಗಾಡಿ ಎಳೆಯುವ ಕೆಲಸ ಮಾಡುತ್ತಿದ್ದರು ಎನ್ನುವುದು ಪೊಲೀಸ್ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.