ಹಾಸನ ನಗರಸಭಾ ಸದಸ್ಯ ಪ್ರಶಾಂತ್ (Prasanth) ಅವರನ್ನು ಬುಧವಾರ ಸಾಯಂಕಾಲ ನಗರದ ಲಕ್ಷ್ಮಿ ನಗರದಲ್ಲಿ ಮಚ್ಚು, ಲಾಂಗುಗಳಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಲಾಯಿತು.
ಜೆಡಿ(ಎಸ್) ಪಕ್ಷದ ಪ್ರಶಾಂತ್ (42) ಹಾಸನ ನಗರಸಭೆಯ (Hassan city corporation) 16ನೇ ವಾರ್ಡ್ನಿಂದ ಆಯ್ಕೆಯಾಗಿದ್ದರು. ಕೊಲೆಗೆ ಹಳೆ ವೈಷಮ್ಯವೇ ಕಾರಣ ಅಂತ ಹೇಳಲಾಗುತ್ತಿದೆ. 2006ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಅವರು ಅರೋಪಿಯಾಗಿದ್ದರು. ವಿಡಿಯೋನಲ್ಲಿ ಪಕ್ಷದ ಪ್ರಮುಖ ಮುಖಂಡ ಮತ್ತು ಮಾಜಿ ಸಚಿವ ಹೆಚ್ ಡಿ ರೇವಣ್ಣನವರು (HD Revanna) ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸುತ್ತಿರುವುದು ಕಾಣಿಸುತ್ತದೆ. ಅವರೆಲ್ಲ ನಿಂತಿರೋದು ಜೆಡಿ(ಎಸ್) ಪಕ್ಷದ ಸಂಸದ ಮತ್ತು ರೇವಣ್ಣನವರ ಪುತ್ರ ಪ್ರಜ್ವಲ್ ಅವರು ಮನೆಯ ಮುಂದೆ. ರೇವಣ್ಣನವರು ಪ್ರಶಾಂತ್ ದೇಹ ಮರಣೋತ್ತರ ಪರೀಕ್ಷೆ ನಡೆಸಲು ತೆಗೆದುಕೊಂಡು ಹೋಗುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ.
ಸಿಪಿಐ ರೇಣುಕಾಪ್ರಸಾದ ಮತ್ತು ಪ್ರಶಾಂತ್ ಕೊಲೆ ನಡುವೆ ಏನು ಸಂಬಂಧ ಅಂತ ರೇವಣ್ಣನವರೇ ಮಾಧ್ಯಮದವರಿಗೆ ತಿಳಿಸಬೇಕು. ಯಾಕೆಂದರೆ, ಅವರನ್ನು ಕೆಲಸದಿಂದ ವಜಾ ಮಾಡಿ ಅಂತ ರೇವಣ್ಣ, ಹಾಸನದ ಪೊಲೀಸ್ ವರಿಷ್ಟಾಧಿಕಾರಿ ಶ್ರೀನಿವಾಸ ಗೌಡರನ್ನು ಒತ್ತಾಯಿಸುತ್ತಿದ್ದಾರೆ. ರೇಣುಕಾಪ್ರಸಾದರನ್ನು ವಜಾ ಮಾಡಿದ ಆದೇಶದ ಪ್ರತಿ ತೋರಿಸಿದ ಬಳಿಕವೇ ಪೋಸ್ಟ್ ಮಾರ್ಟಂ ನಡೆಸಲು ಅವಕಾಶ ನೀಡುವುದಾಗಿ ಶಾಸಕರು ಪಟ್ಟು ಹಿಡಿದಿದ್ದಾರೆ.
ಪ್ರಶಾಂತ್ ಅವರ ತಂದೆ ಹೆಚ್ ಆರ್ ನಾಗರಾಜ್ ಸಹ ಹಾಸನ ನಗರಸಭಾ ಸದಸ್ಯರಾಗಿದ್ದರು ಮತ್ತು ಅವರನ್ನು 2005ರಲ್ಲಿ ಕೊಲೆ ಮಾಡಲಾಗಿತ್ತು. ಆಗಲೇ ಹೇಳಿದಂತೆ ನಗರದಲ್ಲಿ ನಡೆದ ಇನ್ನೊಂದು ಕೊಲೆ ಪ್ರಕರಣದಲ್ಲಿ ಪ್ರಶಾಂತ್ ಒಬ್ಬ ಅರೋಪಿಯಾಗಿದ್ದರು.
ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,
ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?