ಕನ್ನಡ ಕಿರುತೆರೆಯಲ್ಲಿ ಅನುಪಮಾ ಗೌಡ (Anupama Gowda) ದೊಡ್ಡ ಹೆಸರು. ಚಿತ್ರರಂಗದಲ್ಲೂ ಅವರು ಸಕ್ರಿಯರಾಗಿದ್ದಾರೆ. ಸದ್ಯ ನಿರೂಪಕಿಯಾಗಿ ಜನಮನ ಗೆದ್ದಿರುವ ಅನುಪಮಾ, ಇದೀಗ ಹೊಸ ಕಾರ್ಯದ ಮೂಲಕ ಸುದ್ದಿಯಾಗಿದ್ದಾರೆ. ಬಿಗ್ ಬಾಸ್ 5ರಲ್ಲಿ ತಾರಾ ಸ್ಪರ್ಧಿಯೂ ಆಗಿದ್ದ ಅನುಪಮಾ ಗೌಡ, ಇದೀಗ ತಮ್ಮ ಗೆಟಪ್ ಬದಲಾಯಿಸಿದ್ದಾರೆ. ಉದ್ದ ಕೂದಲಿನ ಮೂಲಕ ಗುರುತಿಸಿಕೊಂಡಿದ್ದ ನಟಿ ಈಗ ಕೂದಲನ್ನು ಕತ್ತರಿಸಿದ್ದಾರೆ. ಅನುಪಮಾ ಅವರ ಈ ನಿರ್ಧಾರಕ್ಕೊಂದು ಮಹತ್ತರ ಉದ್ದೇಶವಿದೆ. ಕ್ಯಾನ್ಸರ್ ನಿಂದ ಕೂದಲು ಕಳೆದುಕೊಂಡಿರುವವರಿಗಾಗಿ ಕೂದಲು ದಾನ ಮಾಡುವುದಕ್ಕಾಗಿ ತಮ್ಮ ನೀಳ ತಲೆಗೂದಲನ್ನು ಕತ್ತರಿಸಿದ್ದಾರೆ ನಟಿ. ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಅನುಪಮಾ, ಹೊಸ ಲುಕ್ನೊಂದಿಗೆ ಕೂದಲು ದಾನದ ಹಿಂದಿನ ಉದ್ದೇಶವನ್ನು ತೆರೆದಿಟ್ಟಿದ್ದಾರೆ.‘‘ನನ್ನ ನೀಳ ತಲೆಗೂದಲು ಇದುವರೆಗಿನ ಪಯಣದಲ್ಲಿ ಜತೆಯಿದ್ದು ದೊಡ್ಡ ಮಟ್ಟದಲ್ಲಿ ಆತ್ಮವಿಶ್ವಾಸ ತುಂಬಿತ್ತು’’ ಎಂದು ಬರಹ ಆರಂಭಿಸಿದ್ದಾರೆ ಅನುಪಮಾ ಗೌಡ. ‘‘ಈಗ ಈ ತಲೆಗೂದಲು ಆತ್ಮವಿಶ್ವಾಸದ ಅಗತ್ಯವಿರುವವರಿಗೆ ನೆರವಾಗಲಿದೆ ಎನ್ನುವುದುನ್ನು ಹೇಳಲು ಖುಷಿಯಾಗುತ್ತಿದೆ. ಬಹಳ ಕಾಲದಿಂದ ಕೂದಲು ಕತ್ತರಿಸುವುದನ್ನು ತಡೆದಿದ್ದೆ. ಈಗ ಅಗತ್ಯವಿರುವ ಕ್ಯಾನ್ಸರ್ ಪೀಡಿತ ಹೋರಾಟಗಾರರಿಗೆ ನನ್ನ ಕಡೆಯ ಸಣ್ಣ ಬೆಂಬಲ ನೀಡಲು ಸಮಯ ಬಂದಿದೆ’’
ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ
ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?