ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
ಕಾರ್ಕಳ: ಬಾಯಾರಿಕೆ ನೀಗಿಸಲು ತಣ್ಣೀರೆಂದು ಭಾವಿಸಿ ಆಸಿಡ್ ಕುಡಿದು ಯುವತಿಯೊಬ್ಬರು ತೀವ್ರ ತರದಲ್ಲಿ ಅಸ್ವಸ್ಥಗೊಳ್ಳಗಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಶ್ಯೂ ಪ್ಯಾಕ್ಟರಿಯ ಮಾಲಕನ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಡಾರು ಗ್ರಾಮದ ಬಜರ್ಕಳ ದರ್ಕಾಸು ಮನೆಯ ತೇಜಸ್ವಿನಿ(20) ಎಂಬಾಕೆ ಪ್ರಕರಣದ ದೂರುದಾರಳು. ಮುಡಾರು ಗ್ರಾಮದ ಮುಡ್ರಾಲು ಎಂಬಲ್ಲಿನ ಶ್ರೀದೇವಿ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ಘಟನೆ ನಡೆದಿದೆ.
ಕಳೆದ 1 ವರ್ಷದಿಂದ ಪ್ಯಾಕಿಂಗ್ ಕೆಲಸ ಮಾಡಿಕೊಂಡಿದ್ದ ಮಾಡುತ್ತಿದ್ದ ತೇಜಸ್ವನಿ ಬಾಯಾರಿಕೆಯಾಗಿರುವುದರಿಂದ ತಣ್ಣೀರು ಎಂದು ಬಾಟಲಿಯಲ್ಲಿ ಇದ್ದ ಆಸಿಡ್ ಕುಡಿದು ತೀವ್ರ ಅಸ್ವಸ್ಥಗೊಳ್ಳಗಾಗಿದ್ದಳು.
ಕಾರ್ಕಳ ಸಿ,ಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ,ಎಂ,ಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಆಸ್ಪತ್ರೆಯ ವೆಚ್ಚ ತಾನು ಭರಿಸುವುದಾಗಿ ಫ್ಯಾಕ್ಟರಿಯ ಮಾಲೀಕರ ನೀಡಿದ ಭರವಸೆಯನ್ನು ನಂಬಿದ ಯುವತಿ ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿ ಕಾನೂನು ಕ್ರಮದ ಅಗತ್ಯ ಇಲ್ಲ ಎಂದು ತಿಳಿಸಿದ್ದಳು.
ಅಸ್ಪಸ್ಥಗೊಂಡ ಯುವತಿಯನ್ನು ವಿಚಾರಿಸಲು ಮುಂದಾಗದೇ, ಆಸ್ಪತ್ರೆಗೆ ಕೂಡಾ ಬಾರದೇ, ಆಸ್ಪತ್ರೆ ವೆಚ್ಚ ನೀಡದೇ ನಂಬಿಕೆ ದ್ರೋಹ ಹಾಗೂ ಘಟನೆಯ ಕಾರಣರಾಗಿರುವ ಫ್ಯಾಕ್ಟರಿ ಮಾಲಕ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?