ಕಾಬೂಲ್: ಕಾಬೂಲ್ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ನಡೆದ ಪ್ರಬಲ ಸ್ಫೋಟದಲ್ಲಿ (Kabul Blast) ಸುಮಾರು 50 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಅಫ್ಘಾನಿಸ್ತಾನದಲ್ಲಿ ಇಸ್ಲಾಂನ ಪವಿತ್ರ ತಿಂಗಳಾದ ರಂಜಾನ್ ಸಮಯದಲ್ಲಿ ನಾಗರಿಕರನ್ನು ಗುರುಯಾಗಿಸಿ ಸರಣಿ ದಾಳಿಗಳು ನಡೆಯುತ್ತಿದ್ದು, ಇದು ಇತ್ತೀಚಿನದ್ದಾಗಿದೆ. ಶುಕ್ರವಾರ ಮಧ್ಯಾಹ್ನದ ವೇಳೆಗೆ ರಾಜಧಾನಿಯ ಪಶ್ಚಿಮದಲ್ಲಿರುವ ಖಲೀಫಾ ಸಾಹಿಬ್ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಆಂತರಿಕ ಸಚಿವಾಲಯದ ಉಪ ವಕ್ತಾರ ಬೆಸ್ಮುಲ್ಲಾ ಹಬೀಬ್ ಹೇಳಿದ್ದಾರೆ. ಶುಕ್ರವಾರದ ಪ್ರಾರ್ಥನೆಯ ನಂತರ ಸುನ್ನಿ ಮಸೀದಿಯಲ್ಲಿನ ಆರಾಧಕರು ‘ಝಿಕ್ರ್’ ಎಂದು ಕರೆಯಲ್ಪಡುವ ಸಭೆಯೊಂದಕ್ಕೆ ಜಮಾಯಿಸಿದಾಗ ಈ ದಾಳಿ ನಡೆದಿದೆ. ಕೆಲವು ಮುಸ್ಲಿಮರು ಅಭ್ಯಸಿಸುವ ಧಾರ್ಮಿಕ ಸ್ಮರಣೆಯ ಕ್ರಿಯೆ ಇದಾಗಿದೆ. ಆದರೆ ಕೆಲವು ಗುಂಪುಗಳು ಇದನ್ನು ಧರ್ಮದ್ರೋಹಿಯಾಗಿ ಪರಿಗಣಿಸುತ್ತವೆ. ಮಸೀದಿಯ ಮುಖ್ಯಸ್ಥ ಸೈಯದ್ ಫಾಜಿಲ್ ಅಘಾ ಮಾಹಿತಿ ನೀಡುತ್ತಾ, ಬಾಂಬ್ ದಾಳಿಗೆ ಆತ್ಮಾಹುತಿ ಬಾಂಬರ್ ಕಾರಣ. ಈ ದಾಳಿಯಲ್ಲಿ ತಾವು ಬದುಕುಳಿದಿದ್ದು, ಪ್ರೀತಿಪಾತ್ರರು ಇನ್ನಿಲ್ಲವಾಗಿದ್ದಾರೆ ಎಂದು ‘ರಾಯಿಟರ್ಸ್’ಗೆ ತಿಳಿಸಿದ್ದಾರೆ.
ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..! Twitter Facebook LinkedIn WhatsApp ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ,
ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..! Twitter Facebook LinkedIn WhatsApp ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?