ನವದೆಹಲಿ(ಮೇ.25): ಕಾಂಗ್ರೆಸ್ ಭಾರೀ ಹಿನ್ನಡೆ ಅನುಭವಿಸಿದೆ. ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದು, ಈ ಮೂಲಕ ಸಮಾಜವಾದಿ ಪಕ್ಷಕ್ಕೆ ತೆರಳಿದ್ದಾರೆ. ಸಿಬಲ್ ಅವರು ಎಸ್ಪಿ ಟಿಕೆಟ್ನಲ್ಲಿ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಸಿಬಲ್ ಬುಧವಾರ ಲಕ್ನೋದಲ್ಲಿ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಮೇ 16ರಂದು ಕಾಂಗ್ರೆಸ್ಗೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದರು. ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ರಾಮ್ ಗೋಪಾಲ್ ಯಾದವ್ ಕೂಡ ಸಿಬಲ್ ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದರು.
ಎಸ್ಪಿ ನೆರವಿನೊಂದಿಗೆ ಸಿಬಲ್ ರಾಜ್ಯಸಭೆಗೆ ಹೋದರೆ, ಅಜಂ ಅವರ ಅಸಮಾಧಾನವನ್ನು ಹೋಗಲಾಡಿಸುವಲ್ಲಿ ಇದು ಪರಿಣಾಮಕಾರಿ ಹೆಜ್ಜೆ ಎಂದು ಸಾಬೀತುಪಡಿಸಬಹುದು ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಸಮಾಜವಾದಿ ಪಕ್ಷಕ್ಕೆ ದೊಡ್ಡ ನಾಯಕ ಹಾಗೂ ಕಾನೂನು ಸಲಹೆಗಾರರೂ ಸಿಗಲಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಒಟ್ಟು 403 ಶಾಸಕರಿದ್ದು, ಈ ಪೈಕಿ 2 ಸ್ಥಾನಗಳು ಖಾಲಿ ಇವೆ. ಈ ಮೂಲಕ ಸದ್ಯ 401 ಶಾಸಕರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಒಂದು ಸ್ಥಾನಕ್ಕೆ 36 ಶಾಸಕರ ಮತ ಬೇಕಾಗಿದೆ. ಬಿಜೆಪಿ ಮೈತ್ರಿಕೂಟ 273 ಶಾಸಕರನ್ನು ಹೊಂದಿದ್ದು, ಈ ಸಂದರ್ಭದಲ್ಲಿ 7 ಸ್ಥಾನ ಗೆಲ್ಲಲು ಯಾವುದೇ ತೊಂದರೆ ಇಲ್ಲ. ಎಸ್ಪಿ 125 ಶಾಸಕರನ್ನು ಹೊಂದಿದೆ. 3 ಸ್ಥಾನ ಗೆಲ್ಲಲು ಯಾವುದೇ ತೊಂದರೆ ಇಲ್ಲ ಆದರೆ 11 ಸ್ಥಾನಕ್ಕಾಗಿ ಬಿಜೆಪಿ ಮತ್ತು ಎಸ್ಪಿ ನಡುವೆ ರಾಜಕೀಯ ಹಣಾಹಣಿ ನಡೆಯಲಿದ್ದು, ಪರಸ್ಪರ ಪಾಳಯಕ್ಕೆ ಸೆಡ್ಡು ಹೊಡೆಯಲು ಕಸರತ್ತು ನಡೆದಿದೆ.