ಕಾರವಾರ: ಕಳೆದ ಒಂದು ವಾರದಿಂದ ಈ ಗ್ರಾಮದಲ್ಲಿ ಕೋತಿಯ ಕಾಟ ಹೆಚ್ಚಾಗಿದೆ. ಊರಿನ ಜನರ ಮೇಲೆ ಕೋತಿ ದಾಳಿ ಮಾಡಿದ್ದು ಭಯ ಹುಟ್ಟುವಂತೆ ಮಾಡಿದೆ. ಹೀಗಾಗಿ ಆಂತಕಗೊಂಡ ಅಲ್ಲಿಯ ಜನ ಗುಂಪು ಗುಂಪಾಗಿ ಕೈಯಲ್ಲಿ ಕೋಲು ಹಿಡಿದು ಕೋತಿಯನ್ನು ಮಟ್ಟ ಹಾಕಲು ರೆಡಿಯಾಗಿದ್ದಾರೆ.
10 ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ ಕೋತಿ
ಉತ್ತರಕನ್ನಡ ಜಿಲ್ಲೆ ಅಂಕೋಲದ ಬಬ್ರೂವಾಡ ಗ್ರಾಮದಲ್ಲಿ ಒಂದೇ ಒಂದು ಕೋತಿ ಗ್ರಾಮದ ಜನರ ನಿದ್ದೆ ಹಾಳು ಮಾಡಿದೆ. ಇಷ್ಟು ದಿನ ನೆಮ್ಮದಿಯಿಂದ ಇದ್ದ ಈ ಊರಿಗೆ ಏಕಾಏಕಿ ಕೋತಿ ಎಂಟ್ರಿ ಕೊಟ್ಟಿದೆ. ಒಂದು ವಾರದಿಂದ ಬಿಟ್ಟೂ ಬಿಡದೆ ಜನರ ಮೇಲೆ ಅಟ್ಯಾಕ್ ಮಾಡ್ತಿದೆ. ಹತ್ತಾರು ಜನರಿಗೆ ಕಚ್ಚಿ ರಕ್ತಸ್ರಾವವಾಗುವಂತೆ ತೀವ್ರವಾಗಿ ಗಾಯ ಮಾಡಿದೆ. ಲಕ್ಷ್ಮಿ ಎಂಬ ವೃದ್ಧೆಯ ಮಂಗನ ದಾಳಿಯಿಂದ ನರಳುವಂತಾಗಿದೆ. ಇನ್ನೂ ಮಂಗನ ಭಯಕ್ಕೆ ಚಿಕ್ಕ ಮಕ್ಕಳು, ವೃದ್ಧರು, ಮಹಿಳೆಯರು ಮನೆಯಿಂದ ಆಚೆ ಬರುವುದಕ್ಕು ಭಯ ಪಡುವಂತಾಗಿದೆ.
ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,
ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?