ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಉಡುಪಿ : ವ್ಯಕ್ತಿಯೋರ್ವ ಜಿಲ್ಲಾಸ್ಪತ್ರೆಯಲ್ಲಿ ಮೃತ ಪಟ್ಟು ಶವ ಸಂಸ್ಕಾರ ನಡೆಸಲು ಅಸಹಾಯಕರಾದ ಮಕ್ಕಳಿಗೆ ಸ್ವಂದಿಸಿದ ವಿಶು ಶೆಟ್ಟಿ ಅಂಬಲಪಾಡಿ ತಾನೇ ಮುಂದೆ ಬಂದು ಎಲ್ಲಾ ಖರ್ಚನ್ನು ಭರಿಸಿ ಶವ ಸಂಸ್ಕಾರ ನೆರವೆರಿಸಿದ ಘಟನೆ ಜೂನ್ 27 ರಂದು ಉಡುಪಿ ಬೀಡಿನ ಗುಡ್ಡೆ ಸ್ಮಶಾನದಲ್ಲಿ ನಡೆದಿದೆ..
ಮೃತ ವ್ಯಕ್ತಿ ಪಿಲ್ಲಾರ್ ಖಾನ್ ನ ನಿವಾಸಿ ಮಂಜುನಾಥ (45 ವ) ಕೂಲಿ ಕಾರ್ಮಿಕನಾಗಿದ್ದು ಅನಾರೋಗ್ಯಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ಜೂನ್ 26 ರಂದು ಮೃತ ಪಟ್ಟಿದ್ದಾನೆ. ಮೃತರ ಸಣ್ಣ ಮಕ್ಕಳು ತಂದೆಯ ಶವ ಸಂಸ್ಕಾರದ ಬಗ್ಗೆ ದುಃಖಿಸುತ್ತಿದ್ದು , ವಿಷಯ ತಿಳಿದ ವಿಶು ಶೆಟ್ಟಿ ಮಕ್ಕಳ ಮುಖಾಂತರ ಶವವನ್ನು ಆಸ್ಪತ್ರೆಯಿಂದ ಪಡೆದು ತಾನೇ ಮುಂದೆ ನಿಂತು ಎಲ್ಲಾ ಖರ್ಚನ್ನು ಭರಿಸಿ ಮಕ್ಕಳ ಮೂಲಕ ವಿಧಿ ವಿಧಾನ ನೆರವೆರಿಸಿ ಬೀಡಿನ ಗುಡ್ಡೆ ರುದ್ರ ಭೂಮಿಯಲ್ಲಿ ಅಂತ್ಯ ಕ್ರಿಯೆ ನೆರವೆರಿಸಿ ಮಾನವೀಯತೆ ತೋರಿಸಿದ್ದಾರೆ. ಜೊತೆಗೆ ಮಕ್ಕಳಿಗೆ ಧೈರ್ಯದ ಮಾತುಗಳನ್ನು ಹೇಳಿ ಏನಾದರೂ ಸಹಾಯ ಬೇಕಾದಲ್ಲಿ ಸ್ವಂದಿಸುವುದಾಗಿ ಭರವಸೆ ನೀಡಿದ್ದಾರೆ. ಉದ್ಯಾವರ ರಾಮದಾಸ್ ಪಾಲನ್ ರವರು ಸಹಕರಿಸಿದ್ದಾರೆ. ಮೃತರ ಮಕ್ಕಳ ಭವಿಷ್ಯತ್ತಿನ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನ ಹರಿಸಬೇಕೆಂದು ವಿಶು ಶೆಟ್ಟಿ ಆಗ್ರಹಿಸಿದ್ದಾರೆ.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?