ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ತೆರಿಗೆಯಿಂದಾಗಿ ತತ್ತರಿಸಿ ಹೋಗಿದ್ದ ಸರ್ಕಾರ, ಇದೇ ತಿಂಗಳು 4 ರಂದು ಪೆಟ್ರೋಲ್ 5 ರೂ. ಪೆಟ್ರೋಲ್ ಮತ್ತು ಡೀಸೆಲ್ 10 ರೂ. ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ನಂತರ ಬಹುದೊಡ್ಡ ಸಾಧನೆ ಮಾಡಿದ ರೀತಿಯಲ್ಲಿ ಬೀಗಿತ್ತು. ತಾನೇ ಗಗನಕ್ಕೇರಿಸಿದ ಅಬಕಾರಿ ಸುಂಕದಲ್ಲಿ ಒಂದಷ್ಟು ಕಡಿಮೆ ಮಾಡಿ ತನ್ನ ಬೆನ್ನು ತಾನೇ ತಟ್ಟಿಕೊಂಡಿತ್ತು. ನಂತರ ರಾಜ್ಯ ಸರ್ಕಾರಗಳ ಮೇಲೂ ತೈಲದ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸುವಂತೆ ಒತ್ತಡ ಹೇರಿತ್ತು. ಅಲ್ಲದೇ, ಅನೇಕ ಕೇಂದ್ರೀಯ ಮಂತ್ರಿಗಳೂ ಈ ಕುರಿತು ದೆಹಲಿ ಸರ್ಕಾರ ಸೇರಿ ಬಿಜೆಪಿ ರಹಿತ ಸರ್ಕಾರವಿರುವ ರಾಜ್ಯಗಳನ್ನು ಟೀಕಿಸಿದ್ದವು.
ಆದರೆ, ಕೇಂದ್ರ ಸರ್ಕಾರ ಈಗ ಮತ್ತೊಂದು ಬಗೆಯಲ್ಲಿ ಜಿಎಸ್ಟಿ ಏರಿಕೆಯ ಬರೆ ನೀಡಲು ಹೊರಟಿದೆ. ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆ ಕಡಿತದಿಂದಾಗಿ ಆಗುವ ನಷ್ಟವನ್ನು ಭರಿಸಲು ಸರ್ಕಾರ ಈ ನಿರ್ಧಾವನ್ನು ತೆಗೆದುಕೊಂಡಿದೆ. ಆದರೆ, ಬಿಜೆಪಿಯೇತರ ಸರ್ಕಾರಗಳಿಗೆ ಆಗ್ರಹಿಸುವ ಕೇಂದ್ರ ಸರ್ಕಾರ ಮತ್ತೊಂದು ವಿಧದಲ್ಲಿ ಬರೆ ಎಳೆಯಲು ಏಕೆ ಹೊರಟಿದೆ. ರಾಜ್ಯ ಸರ್ಕಾರಗಳು ತಮ್ಮ ನಷ್ಟವನ್ನು ಯಾವ ರೂಪದಲ್ಲಿ ಭರಿಸಿಕೊಳ್ಳ ಬೇಕು. ಮತ್ತೊಂದೆಡೆ ರಾಜ್ಯಗಳ ಜಿಎಸ್ಟಿ ಪಾಲನ್ನೇ ಸರಿಯಾಗಿ ಭರಿಸದೆ, ಸಾಲ ಮಾಡಿಕೊಳ್ಳಿ ಎನ್ನುವ ಕೇಂದ್ರ ಸರ್ಕಾರ ಸರಿಯಾದ ಸಮಯಕ್ಕೆ ಏಕೆ ಪೂರ್ಣ ಮೊತ್ತದ ಜಿಎಸ್ಟಿ ಪಾಲನ್ನು ಭರಿಸುವುದಿಲ್ಲ.
ಹೊಸದಾಗಿ ಹೇರಲಾದ ಹೆಚ್ಚುವರಿ ತೆರಿಗೆ 2022ರ ಜನವರಿ 1ರಿಂದ ಜಾರಿಗೆ ಬರಲಿದೆ. ಏತನ್ಮಧ್ಯೆ, ಬಟ್ಟೆ ತಯಾರಕರ ಸಂಘ (ಸಿಎಂಎಐ) ಸರ್ಕಾರದ ಈ ನಿರ್ಧಾರದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಜಿಎಸ್ಟಿ ಹೆಚ್ಚಿಸುವ ಸರ್ಕಾರದ ನಿರ್ಧಾರದಿಂದ ತೀವ್ರ ನಿರಾಶೆಯಾಗಿದೆ ಎಂದು ಸಿಎಂಎಐ ಹೇಳಿದೆ. ಈ ಹೆಚ್ಚಳವು ಈಗಾಗಲೇ ದಿವಾಳಿ ಎದುರಿಸಿರುವ ಉದ್ಯಮದ ಮೇಲೆ ಕೆಟ್ಟ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ತಯಾರಕರ ಸಂಘವು ಹೇಳಿದೆ. ಜವಳಿ ಉದ್ಯಮವು ಈಗಾಗಲೇ ಕಚ್ಚಾ ವಸ್ತುಗಳ ಬೆಲೆ ಏರಿಕೆಯೊಂದಿಗೆ ಹಣದುಬ್ಬರದ ಒತ್ತಡದಲ್ಲಿದೆ.
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?