ಬಿಹಾರ: ಬಿಹಾರದ ಸಾಸಾರಾಮನಲ್ಲಿ ಡಾ.ಎಸ್. ಎಮ್. ಅಹಮ್ಮದ್ ಮೆಡಿಕೋ ಕ್ಲಿನಿಕ್ ಗೆ ತಾಯಿಕೋತಿ ತನ್ನ ಮರಿಯೊಂದಿಗೆ ಬಂದಾಗ ಸಹಜವಾಗಿ ಅಚ್ಚರಿಯೂ ಗಾಬರಿಯೂ ಆಗಿದೆ. ಅಷ್ಟೊತ್ತಿಗೆ ಓಣಿಯಲ್ಲಿ ಆಡಿಕೊಂಡಿದ್ದ ಮಕ್ಕಳು, ಹುಡುಗರು ಮುಂದೇನಾಗುವುದು ಎಂದು ಮೊಬೈಲ್ನೊಂದಿಗೆ ಕ್ಲಿನಿಕ್ಗೆ ಬಂದು ನಿಂತಿದ್ದಾರೆ.
ಈ ಎಲ್ಲ ಗಲಾಟೆಗೆ ಕ್ಲಿನಿಕ್ ಹೊರಗೂ ಒಳಗೂ ಹುಯಿಲೆಬ್ಬಿದೆ. ರಸ್ತೆಯಲ್ಲಿ ಗಾಡಿಗಳ ಓಡಾಟಕ್ಕೂ ತೊಂದರೆಯಾಗಿದೆ. ಇತ್ತ ಡಾಕ್ಟರ್ ಅಹಮ್ಮದ್ ಅವರಿಗೆ ಏನು ಮಾಡಬೇಕೆಂದು ತಿಳಿಯದಾಗಿದೆ. ಅತ್ತ ಗಾಯಗೊಂಡ ಕೋತಿ ಕಂಕುಳಲ್ಲಿ ಮರಿಯನ್ನೆತ್ತಿಕೊಂಡು ರೋಗಿಗೆ ಮೀಸಲಾದ ಬೆಡ್ಮೇಲೆ ಗಾಬರಿಯಿಂದ, ನೋವಿನಿಂದ ಡಾಕ್ಟರ್ ಗಾಗಿ ಅತೀ ತಾಳ್ಮೆಯಿಂದಲೇ ಕಾಯುತ್ತ ಕುಳಿತಿದೆ. ತನ್ನ ಅಮ್ಮ ಎಲ್ಲಿ ಕರೆದುಕೊಂಡು ಬಂದಿದ್ದಾಳೆ? ತನ್ನ ಸುತ್ತಮುತ್ತಲಿರುವವರು ಯಾರು? ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನೆಲ್ಲ ಗಮನಿಸುತ್ತ ಅಮ್ಮನೆದೆ ಅವುಚಿಕೊಂಡು ಮರಿ ಕುಳಿತಿದೆ.
ಅಷ್ಟೊತ್ತಿಗೆ ಇದು ಊರೆಲ್ಲ ಸುದ್ದಿಯಾಗಿದೆ. ಡಾ. ಅಹಮ್ಮದ್ ಕೊನೆಗೂ ಧೈರ್ಯಮಾಡಿ ತಾಯಿಕೋತಿಯ ಗಾಯವನ್ನು ಪರೀಕ್ಷಿಸಿದ್ದಾರೆ. ಮೊದಲು ಟಿಟ್ಯಾನಸ್ ಇಂಜೆಕ್ಷನ್ ಕೊಟ್ಟು, ಮುಖಕ್ಕೆ ಆದ ಗಾಯಕ್ಕೆ ಆಯಿಂಟ್ಮೆಂಟ್ ಹಚ್ಚಿದ್ದಾರೆ. ನಂತರ ಅದು ಬೆಡ್ ಮೇಲೆ ಮಲಗಿ ಮರಿಗೆ ಹಾಲು ಕುಡಿಸಿ ಸಂತೈಸಿದೆ.
ಮುಂದೇನು? ಸುತ್ತಮುತ್ತಲಿನ ಜನರನ್ನು ನೋಡಿ ಅದಕ್ಕೆ ಆತಂಕವೂ ಎದುರಾಗಿದೆ. ಹೇಗೆ ಈ ನಾಗರಿಕ ಜಗತ್ತಿನಿಂದ ತನ್ನ ಜಗತ್ತಿಗೆ ಮರಳುವುದು ಎಂದು. ಈ ಸಂಕಟವನ್ನು ಅರ್ಥ ಮಾಡಿಕೊಂಡ ಅಹಮ್ಮದ್, ಅಲ್ಲಿದ್ದವರಿಗೆಲ್ಲ ದೂರ ಹೋಗಲು ತಿಳಿಸಿ, ತಾಯಿಕೋತಿ ಮರಿಯೊಂದಿಗೆ ಹೊರಹೋಗಲು ಅನುವು ಮಾಡಿಕೊಟ್ಟಿದ್ದಾರೆ.
ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,
ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?