ಮುಂಬಯಿ: ಒಬ್ಬ ಹೀರೋಯಿನ್ ಸಿನಿಮಾವನ್ನು ಇನ್ನೊಬ್ಬ ಹೀರೋಯಿನ್ ನೋಡಿ, ಸೂಪರ್ ಚಿತ್ರ ಅಂತ ಹೊಗೊಳೋ ಸಂಸ್ಕೃತಿ ಬಹಳ ಕಡಿಮೆ. ಇತ್ತೀಚೆಗಷ್ಟೇ ತೆಲುಗು ನಟ ಚಿರಂಜೀವಿ ತಮ್ಮನ ಚಿತ್ರ ಭೀಮ್ಲಾ ನಾಯಕ್ ಸಿನಿಮಾವನ್ನು ಹೊಗಳಿದ್ದರು. ಆದರೆ, ಚಿರಂಜೀವಿ ಮಾತನ್ನು ಕೇಳಿಸಿಕೊಂಡವರು ಕಡಿಮೆ. ಏಕೆಂದರೆ, ಚಿರಂಜೀವಿ ತಮ್ಮನೇ ಪವನ್ ಕಲ್ಯಾಣ್. ಸೋದರ ವಾತ್ಸಲ್ಯ ಅಂತ ಸುಮ್ಮನಾದರು. ಆದರೆ, ಈ ನಟ ಮಹೇಶ್ ಬಾಬು ಸಿನಿಮಾ ನೋಡಿ ಬಾಯ್ತುಂಬ ಹೊಗಳಿದರು. ಅದರಲ್ಲೂ ರಾಣ ದಗ್ಗುಭಾಟಿಯಾರ ನಟನೆಗೆ ಫೀದಾ ಆಗಿದ್ದೀನಿ ಅಂತ ಬರೆದುಕೊಂಡಾಗ ಆಶ್ಚರ್ಯವಾಯಿತು.
ಈಗ ನಟಿ ಸಮಂತಾ ಋತ್ ಪ್ರಭು ಅವರ ಸರತಿ. ಇವರು ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಾಠಿಯವಾಡಿ ಸಿನಿಮಾ ನೋಡಿ ಥ್ರಿಲ್ ಆಗಿದ್ದಾರೆ. ಆ ಥ್ರಿಲ್ಲನ್ನು ತಮ್ಮ ಇನ್ಸ್ಟ್ರಾಗ್ರಾಂನಲ್ಲೂ ಕೂಡ ಬರೆದುಕೊಂಡಿದ್ದಾರೆ. ‘ಆಲಿಯಾ ಅಭಿನಯ ವರ್ಣಿಸಲು ಪದಗಳೇ ಸಾಲದು’ ಅಂತ ಹೇಳಿಕೊಳ್ಳುವ ಮೂಲಕ ಆಲಿಯಾಗೆ ನೂರಕ್ಕೆ ನೂರು ಅಂಕ ಕೊಟ್ಟಿದ್ದಾರೆ. ಸಮಂತಾ, ‘ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಆಲಿಯಾ ಭಟ್ಟಳ ಮಾಸ್ಟರ್ ಪೀಸ್ ಸಿನಿಮಾ. ಈಕೆಯ ಅಭಿನಯದ ಬಗ್ಗೆ ವರ್ಣಿಸಲು ಪದಗಳು ಸಾಲುತ್ತಿಲ್ಲ. ಪ್ರತಿ ಡೈಲಾಗ್, ಅದಕ್ಕೆ ಬೇಕಾದ ಎಕ್ಸಪ್ರೆಷನ್ ಎಲ್ಲವೂ ನನ್ನ ಮೆದುಳಲ್ಲಿ ಕುಳಿತಿದೆ’ ಎಂದು ಸಮಂತಾ ಬರೆದುಕೊಂಡಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ಅವರ ಕನಸಿನ ಕೂಸಾಗಿರುವ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾವು, ಕಾಮಾಟಿಪುರದ ವೇಶ್ಯೆ ಹುಡುಗಿಯ ಸುತ್ತಾ ಸುತ್ತುವ ಕಥೆ. ಪಾತ್ರಕ್ಕೆ ತಕ್ಕಂತೆ ಆಲಿಯಾಭಟ್ ಭಾವಪೂರ್ಣವಾಗಿ ನಟಿಸಿರುವುದರಿಂದ ಇವತ್ತು ಕಾಮಾಟಿಪುರದ ಸೆಲಬ್ರಿಟಿಯಾಗಿದ್ದಾರೆ. ಸಿನಿಮಾ ಆರಂಭದಲ್ಲಿ ರೆಡ್ ಲೈಟ್ ಏರಿಯಾ ಎನಿಸಿರುವ ಕಾಮಾಟಿಪುರ, ಕಾಠಿಯಾವಾಡಿ ಪ್ರದೇಶಗಳ ಜನರಿಂದಲೇ ತೀವ್ರವಿರೋಧ ವ್ಯಕ್ತವಾಗಿತ್ತು. ಇದು ಅನೇಕ ವಿವಾದಗಳಿಗೆ ಕಾರಣವಾಯಿತು. ಯಾವುದನ್ನು ಲೆಕ್ಕಿಸದೇ ಸಿನಿಮಾ ಬಿಡುಗಡೆಗೊಂಡಿದ್ದು, ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.
ಗಂಗೂಬಾಯಿ ಕಾಠಿಯಾವಾಡಿ ಮೊದಲ ದಿನದ ಬಾಕ್ಸ್ ಆಫೀಸ್ ಕಲಕ್ಷನ್ ಹೆಚ್ಚುಕಮ್ಮಿ 10.5 ಕೋಟಿ ಎನ್ನಲಾಗಿದೆ.ಸಿನಿಮಾದ ಕಥೆಯನ್ನು ಹುಸೇನ್ ಜೈದಿ ಅವರ ಮಾಫಿಯಾ ಕ್ವೀನ್ಸ್ ಆಫ್ ಮುಂಬೈ ನಿಂದ ಆರಿಸಿಕೊಳ್ಳಲಾಗಿದೆ. ‘ಸಿನಿಮಾದಲ್ಲಿ ನನ್ನ ಮತ್ತು ಆಲಿಯಾ ಭಟ್ ಅವರ ಕೆಮಿಸ್ಟ್ರಿ ಹದವಾಗಿ ಬೆರೆತಿದೆ. ಇದನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ನನ್ನ ಪಾಲಕರಿಗೂ ತುಂಬಾ ಖುಷಿಯಾಗಿದೆ’ ಎಂದು ಚಿತ್ರದ ನಾಯಕ ಶಂತನು ಹೇಳಿಕೊಂಡಿದ್ದಾರೆ.
ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ
ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?