ಶುಕ್ರವಾರ, ಮೇ 3, 2024
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು ಹೇಗೆ..?-ಮಹಿಳೆ ಬಡ ಮತ್ತು ಹಸಿದಿರುವಾಗ ಅನ್ನ ಹಾಕಿ, ನಿಮ್ಮ ಅದನ್ನಲ್ಲ; ಪ್ರಜ್ವಲ್ ರೇವಣ್ಣ ವಿರುದ್ಧ ನಟಿ ಪೋಸ್ಟ್ ವೈರಲ್.!-ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..!-ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಹೃದಯಘಾತದಿಂದ ನಿಧನ..!-ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಮೋದಿ ಫೋಟೊ ಕಾಣೆ; ವರದಿಯಲ್ಲೇನಿದೆ.?-Shyam Rangeela: ಮೋದಿ ವಿರುದ್ಧ ವಾರಣಾಸಿಯಲ್ಲಿ ಹಾಸ್ಯ ನಟ ಚುನಾವಣೆಗೆ ಸ್ಪರ್ಧೆ..!-ಅಪಾರ್ಟ್‌ಮೆಂಟ್‌ನ ರೂಫ್‌ನಲ್ಲಿ ಸಿಲುಕಿದ್ದ ಪುಟ್ಟ ಮಗುವಿನ ರೋಚಕ ರಕ್ಷಣೆ; ಇಲ್ಲಿದೆ ವಿಡಿಯೋ-ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಮಾಡಿದ್ದ ಒಬ್ಬ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ..!-ರಾಜ್ಯದ ಕೆಲ ಜಿಲ್ಲೆಗಳಲ್ಲಿ ಏರಲಿದೆ ಗರಿಷ್ಠ ತಾಪಮಾನ; ರೆಡ್ ಅಲರ್ಟ್ ಘೋಷಣೆ.!-ಅಶ್ಲೀಲ ವಿಡಿಯೋ ಕೇಸ್ ಪ್ರಕರಣ ; ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ಏನು..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಅನು ಪ್ರಭಾಕರ್ ಕಿಡ್ನ್ಯಾಪ್ ಆಗಿದ್ದು ನಿಜವೇ?; ರೋಚಕ ಕಥೆ ಬಿಚ್ಚಿಟ್ಟ ನಟಿ

Twitter
Facebook
LinkedIn
WhatsApp
file7kz3ooflvhwsmtlldoy1679439394 7

ಕನ್ನಡ ಚಿತ್ರರಂಗದಲ್ಲಿ ಮುದ್ದು ಮುಖದ ಚೆಲುವೆ ಅನು ಪ್ರಭಾಕರ್ ಬಾಲ್ಯದಲ್ಲಿ ಕಿಡ್ನ್ಯಾಪ್ ಆಗಿದ್ದರಂತೆ. ಅರ್ಧ ಗಂಟೆಯಲ್ಲಿ ಏನೆಲ್ಲಾ ಆಯ್ತು ಎಂದು ಹಂಚಿಕೊಂಡಿದ್ದಾರೆ. 

May be an image of 1 person and standing

‘ನನ್ನ ಕಿಡ್ನ್ಯಾಪ್ ಸ್ಟೋರಿಯನ್ನು ಅಜ್ಜಿ ಹೇಳುತ್ತಿದ್ದರು. ನಾನು ಒಂದು ವರ್ಷದ ಮಗು ಆಗಿದ್ದಾಗ ತುಂಬಾ ದಪ್ಪಗಿದ್ದೆ ಹಾಗೂ ಕರ್ಲಿ ಕೂದಲು ಇತ್ತು. ಮೊದಲ ಮುಡಿ ಕೊಟ್ಟ ಮೇಲೆ ಕೂದಲ ಸಾಫ್ಟ್‌ ಆಯ್ತು. ನಾನು ನೋಡಲು ನನ್ನ ತಂದೆಯವರ ತಾಯಿ ರೀತಿ ಇರುವುದು. ನಾನು ಪುಟ್ಟ ಮಗು ಇದ್ದಾಗ ನನ್ನನ್ನು ನೋಡಿಕೊಂಡು ಅಮ್ಮನಿಗೆ ಸಹಾಯ ಮಾಡಲು ಮನೆಯಲ್ಲಿ ಒಬ್ರು ಕೆಲಸದವರು ಇದ್ದರು. ಮಗು ಮಲಗಿಕೊಂಡಿದೆ ನೀನು ಮಗು ನೋಡಿಕೋ ನಾನು ಹಿಟ್ಟುಗಳನ್ನು ಮಿಲ್‌ಗೆ ಹಾಕಿಸಿಕೊಂಡು ಬರುತ್ತೀನಿ ಎಂದು ಹೇಳಿ ಕೇತಮಾರನಹಳ್ಳಿಗೆ ಹೋಗಿದ್ದಾರೆ. ಕೆಲವು ನಿಮಿಷಗಳ ನಂತರ ನಾನು ನಡೆದುಕೊಂಡು ಮನೆಯಿಂದ ಹೊರ ಬಂದಿದ್ದೀನಿ. ಕೆಲಸ ಮುಗಿಸಿಕೊಂಡು ಅಮ್ಮ ಮನೆಗೆ ಬಂದಿದ್ದಾರೆ ಆ ಹುಡುಗಿ ಮಲಗಿಕೊಂಡಿದ್ದಾಳೆ ಆದರೆ ನಾನು ಕಾಣಿಸುತ್ತಿರಲಿಲ್ಲ’ ಎಂದು ಅನು ಪ್ರಭಾಕರ್ ಕನ್ನಡದ ಖಾಸಗಿ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

May be an image of 1 person, standing and jewelry

‘ಅವತ್ತು ರವಿ ಮಾಮ ಮನೆಯಲ್ಲಿ ಇರಲಿಲ್ಲ ನನ್ನ ತಂದೆ ಫ್ಯಾಕ್ಟರಿಗೆ ಹೋಗಿದ್ದರು. ಆಗ ಮೊಬೈಲ್‌ಗಳು ಇರಲಿಲ್ಲ ಲ್ಯಾಂಡ್‌ಲೈನ್‌ಗಳು ಮಾತ್ರ ಇತ್ತು ಅದರೆ ನಮ್ಮ ಮನೆಯಲ್ಲಿ ಇರಲಿಲ್ಲ. ಮನೆಯಿಂದ ಹೊರ ಬಂದು ಅಮ್ಮ ರವಿ ಮಾಮ ಸ್ನೇಹಿತರು ಕೇತಮಾರನಹಳ್ಳಿಯಲ್ಲಿ ಗ್ಯಾಂಗ್ ಮಾಡಿಕೊಂಡಿದ್ದರು ಅವರಿಗೆ ಹೋಗಿ ಮಗು ಕಾಣಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಕೃಷ್ಣ ಮತ್ತು ಮಂಜು ಅಂಕಲ್ ಎರಡು ಗಾಡಿ ತೆಗೆದುಕೊಂಡು ನನ್ನನ್ನು ಹುಡುಕಲು ಶುರು ಮಾಡಿದ್ದಾರೆ. ಮಂಜು ಅಂಕಲ್ ನವರಂಗ್ ಸೈಡ್‌ಗೆ ಹೋಗಿದ್ದಾರೆ ಕೃಷ್ಣ ಅಂಕಲ್ ಸುಬ್ರಹ್ಮಣ್ಯ ನಗರ ಕಡೆ ಹೋಗಿದ್ದಾರೆ.  ಇಬ್ಬರೂ ರಸ್ತೆಯಲ್ಲಿ ಹುಡುಕುತ್ತಿದ್ದರು …ಸುಬ್ರಹ್ಮಣ್ಯ ನಗರದ ಮುಖ್ಯ ರಸ್ತೆಯಲ್ಲಿ ಒಂದು ಪೆಟ್ರೋಲ್ ಬಂಕ್ ಇದೆ ಆ ಜಾಗದಲ್ಲಿ ಒಬ್ಬ ಮಹಿಳೆ ನನ್ನನ್ನು ಎತ್ತಿಕೊಂಡು ಹೋಗುತ್ತಿದ್ದರಂತೆ ನಾನು ತುಂಬಾ ಅಳುತ್ತಿದ್ದೆ. ತಕ್ಷಣ ಅಂಕಲ್‌ ಆ ಮಾಹಿಳೆಯನ್ನು ನಿಲ್ಲಿಸಿ ಮಗುವನ್ನು ಎತ್ತಿಕೊಂಡು ಪ್ರಶ್ನೆ ಮಾಡಿದ್ದಾರೆ…ಆಗ ಆಕೆ ಇಲ್ಲ ರಸ್ತೆಯಲ್ಲಿ ಮಗು ಒಂದೇ ಇತ್ತು ನಾನು ಮನೆ ದಾರಿ ತೋರಿಸುವುದಾಗಿ ಹೇಳಿತ್ತು ಅದಿಕ್ಕೆ ಕರೆದುಕೊಂಡು ಹೋಗುತ್ತಿರುವೆ ಎಂದಿದ್ದಾರೆ. ಕೋಪದಲ್ಲಿ ಒಂದು ಕಪ್ಪಾಳಕ್ಕೆ ಹೊಡೆದಿದ್ದಾರೆ. ನಾನು ಸಿಕ್ಕಿದೆ ಅನ್ನೋ ಗಡಿಬಿಡಿಯಲ್ಲಿ ಆ ಮಹಿಳೆಯನ್ನು ಪೊಲೀಸರಿಗೆ ಕೊಡುವ ಯೋಚನೆ ಬಂದಿಲ್ಲ ಹಾಗೆ ಅಷ್ಟರಲ್ಲಿ ಆಕೆ ಓಡಿ ಹೋಗಿದ್ದಾಳೆ’ ಎಂದು ಅನು ಹೇಳಿದ್ದಾರೆ.

May be an image of 1 person

‘ಕೊನೆಗೂ ಕೃಷ್ಣ ಅಂಕಲ್ ನನ್ನನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ.  ಅರ್ಧ ಗಂಟೆ ಸಮಯದಲ್ಲಿ ನನ್ನ ತಾಯಿ ಅತ್ತು ಕರೆದು ರಂಪಾಟ ಮಾಡಿ ರವಿ ಮಾಮ ಮತ್ತು ನನ್ನ ತಂದೆ ಅವರನ್ನು ಅಷ್ಟರಲ್ಲಿ ಮನೆಗೆ ಕರೆಸಿದ್ದರು. ನನ್ನ ಪುಣ್ಯಕ್ಕೆ ನಾನು ಸಿಕ್ಕಿದೆ ಇಲ್ಲದಿದ್ದರೆ ಅದೆಲ್ಲ ಇದ್ದು ಏನು ಮಾಡುತ್ತಿದ್ದೆ ಗೊತ್ತಿರಲಿಲ್ಲ’ ಎಂದಿದ್ದಾರೆ ಅನು.

May be an image of 1 person

‘ಮಕ್ಕಳ ವಿಚಾರದಲ್ಲಿ ಈ ನಡುವೆ ತುಂಬಾ ಹಾರರ್ ಕಥೆಗಳನ್ನು ಕೇಳುತ್ತೀವಿ. ಆಗಿನ ಕಾಲದಲ್ಲಿ ನನ್ನನ್ನು ಏನು ಮಾಡುತ್ತಿದ್ದರು ಗೊತ್ತಿಲ್ಲ. ತಂದೆ ತಾಯಿ ಆಶೀರ್ವಾದ ದೇವರ ಭಕ್ತಿಯಿಂದ ನಾನು ಮನೆಗೆ ವಾಪಸ್ ಬಂದಿರುವೆ ಇಲ್ಲದಿದ್ದರೆ ಅನು ಪ್ರಭಾಕರ್ ಆಗಿ ನಿಮ್ಮ ಮುಂದೆ ಇರುತ್ತಿರಲಿಲ್ಲ. ಈಗ ಕಥೆ ಕೇಳಿದರೆ ನಗು ಬರುತ್ತದೆ ಆದರೆ ಆ ಸಮಯದಲ್ಲಿ ಅವರಿಗೆ ತುಂಬಾ ಭಯ ಆಗಿರುತ್ತೆ ಈಗಲೂ ನನ್ನ ತಾಯಿ ಈ ವಿಚಾರದ ಬಗ್ಗೆ ಕೇಳಿದರೆ ಕಣ್ಣೀರು ಹಾಕುತ್ತಾರೆ. ಈಗ ನನ್ನ ಮಗಳು ನಂದನಾ ಬಗ್ಗೆ ಕೂಡ ನಾನು ತುಂಬಾ ಯೋಚನೆ ಮಾಡುತ್ತೀನಿ. ನನ್ನ ಮಗಳು ಎಲ್ಲಾದರೂ ರೀತಿ ಫ್ರೀಡಮ್‌ನ  ನಾನು ರಘು ಕೊಟ್ಟಿದ್ದೀವಿ. ಇತ್ತೀಚಿನ ದಿನಗಳಲ್ಲಿ ನಂದನಾ ಒಬ್ಬಳೇ ಮಲಗುವುದಕ್ಕೆ ಶುರು ಮಾಡಿದ್ದಾಳೆ’ ಎಂದು ಅನು ಪ್ರಭಾಕರ್ ಹೇಳಿದ್ದಾರೆ.  

May be an image of 1 person

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ