ಫ್ಯಾನ್ಸಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವತಿಗೆ ಸಮೀಪದ ಹೊಟೇಲ್ ನಲ್ಲಿ ಕೆಲಸ ಮಾಡುವ ಯುವಕ ಫೋನ್ ನಂಬರ್ ಕೇಳಿ ಮೊಬೈಲ್ ಕಿತ್ತು ಅಸಭ್ಯವಾಗಿ ವರ್ತಿಸಿದ್ದಾನೆಂದು ಆರೋಪಿಸಿ ಆತನಿಗೆ ಧರ್ಮದೇಟು ನೀಡಿದ ಘಟನೆ ಮೇ 25 ರಂದು ಸುಳ್ಯ ದ ಹಳೇ ಗೇಟು ಎಂಬಲ್ಲಿ ನಡೆದಿದೆ.
ಹಳೆಗೇಟಿನ ಹೋಟೆಲೊಂದರಲ್ಲಿ ಕೆಲಸ ಮಾಡುವ ಪಳ್ಳಂಗೋಡು ಮೂಲದ ಯುವಕ ಏಟು ತಿಂದ ಆಸಾಮಿ. ಯುವತಿಯ ಪೋಷಕರು ಹಾಗೂ ಸ್ಥಳೀಯರು ಆತನಿಗೆ ಥಳಿಸಿದವರು.
ಈ ಬಗ್ಗೆ ಎರಡು ಕಡೆಯಿಂದ ಯಾವುದೇ ದೂರು ಬಾರದ ಹಿನ್ನಲೆಯಲ್ಲಿ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.
ಅಂಗಡಿಯಲ್ಲಿ ಒಬ್ಬಳೆ ಇದ್ದ ವೇಳೆ ಖರೀದಿಯ ನೆಪದಲ್ಲಿ ಅಲ್ಲಿಗೆ ಬಂದ ಯುವಕ ಯುವತಿಯ ಫೋನ್ ನಂಬರ್ ಕೇಳಿದನೆನ್ನಲಾಗಿದೆ. ಈ ಸಂದರ್ಭ ಯುವತಿ ನಂಬರ್ ನೀಡಲು ನಿರಾಕರಿಸಿದ್ದಾರೆ. ಈ ವೇಳೆ ಆತ ಯುವತಿಯ ಕೈಯಿಂದ ಮೊಬೈಲ್ ಫೋನ್ ಕಿತ್ತುಕೊಂಡು ಅದರಿಂದ ತನ್ನ ಮೊಬೈಲಿಗೆ ಫೋನ್ ಮಾಡುವ ಸಂದರ್ಭ ಯುವತಿ ಮೊಬೈಲ್ ಎಳೆದುಕೊಂಡು ಸ್ಥಳೀಯರನ್ನು ಕರೆದಿದ್ದಾಳೆ ಎನ್ನಲಾಗಿದೆ. ಭಯಗೊಂಡ ಯುವಕ ಅಲ್ಲಿಂದ ಪರಾರಿಯಾಗಿದ್ದಾನೆ.
ನಂತರ ಯುವತಿ ಅವರ ಮನೆಯವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದು, ಯುವತಿಯ ಪೋಷಕರು ಮತ್ತು ಸ್ಥಳೀಯ ಯುವಕರು ಹೋಟೆಲ್ ಬಳಿಗೆ ತೆರಳಿ ಯುವಕನನ್ನು ಅಂಗಡಿಯಿಂದ ಹೊರಕ್ಕೆ ಕರೆದು ಧರ್ಮದೇಟು ನೀಡಿದರೆನ್ನಲಾಗಿದೆ. ಬಳಿಕ ಬಂದ ಹೋಟೆಲ್ ಮಾಲಕರು ಆ ಯುವಕನಿಗೆ ಒಂದೇಟು ಹೊಡೆದು ಆತನನ್ನು ಕೆಲಸದಿಂದ ವಜಾಗೊಳಿಸಿ ಕಳುಹಿಸಿರುವುದಾಗಿ ತಿಳಿದುಬಂದಿದೆ.
ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,
ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?