ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಬಿಜೆಪಿಗೆ ಒಂದು ಹಂತದಲ್ಲಿ ಹಿನ್ನಡೆಯಾಗುತ್ತದೆ ಕಾಂಗ್ರೆಸ್ಸಿಗೆ ಶುಭವಾಗುತ್ತದೆ ಎಂದುಕೊಂಡರು ವಿಷಯ ಬೇರೆ ಇದೆ.
ಬಿಎಸ್ವೈ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಇದ್ದರೆ ಆರ್ಎಸ್ಎಸ್ ಹಾಗೂ ಬಿಜೆಪಿಯ ಮಾತು ಅಷ್ಟು ನಡೆಯುತ್ತಿರಲಿಲ್ಲ. ತಮ್ಮ ಗುರಿಯನ್ನು ತಲುಪಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಅಲ್ಲದೆ ಯಡಿಯೂರಪ್ಪ ಸುತ್ತಮುತ್ತಲಿರುವ ವರು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದರು ಎಂಬ ಮಾತಿದೆ.
ಆದರೆ ಈಗ ಅಧಿಕಾರ ನೇರ ಬಿಜೆಪಿ ಹೈಕಮಾಂಡ್ ಹಾಗೂ ಆರೆಸ್ಸೆಸ್ ಕಡೆಗೆ ಬರುವುದರಿಂದ ತಮ್ಮ ಉದ್ದೇಶಗಳನ್ನು ಹಾಗೂ ಭ್ರಷ್ಟಾಚಾರವನ್ನೇ ನಿಯಂತ್ರಿಸಿ ಜನಪರ ಆಡಳಿತವನ್ನು ನೀಡಬಹುದು ಆ ಮೂಲಕ ತಮ್ಮ ಕಳೆದುಹೋದ ಇಮೇಜನ್ನು ವರ್ಧಿಸಿ ಕೊಳ್ಳಬಹುದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಈ ಹಂತದಲ್ಲಿ ಯಡಿಯೂರಪ್ಪನವರಿಗೆ ಜಾತಿ ಬಲ ಇದೆಯೆಂದು ಅನಿಸಿದರು, ಪಕ್ಷದ ಇಮೇಜ್ ಬಹಳಷ್ಟು ಡ್ಯಾಮೇಜ್ ಆಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಬಿಎಸ್ ವೈ ಉತ್ತಮ ಆಡಳಿತಗಾರರು ಎಂಬುದರಲ್ಲಿ ಎರಡು ಮಾತಿಲ್ಲ ಎಂದರು ಬದಲಾಗುತ್ತಿರುವ ಸಮಾಜದಲ್ಲಿ ಅವರ ಆಡಳಿತದ ಮೊನಚು ತಪ್ಪಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಇದರಿಂದ ಅವರಿಗೆ ನಿರೀಕ್ಷಿತ ಆಡಳಿತವನ್ನು ನೀಡಲು ಸಾಧ್ಯವಾಗಿಲ್ಲ ಎನ್ನುತ್ತದೆ ವರದಿಗಳು.
ಈ ಕಾರಣದಿಂದ ಈಗ ಬಿಎಸ್ ವೈ ಮುಂದುವರಿದಿದ್ದರೆ ವಿರೋಧ ಪಕ್ಷ ಕಾಂಗ್ರೆಸ್ಸಿಗೆ ಹೆಚ್ಚು ಲಾಭವಾಗುತ್ತಿತ್ತು ಎಂಬುದು ರಾಜಕೀಯ ವಿಶ್ಲೇಷಕರ ಮಾತು. ಆದರೆ ತಂತ್ರಗಾರಿಕೆಯನ್ನು ಮಾಡುತ್ತಿರುವ ಬಿಜೆಪಿ ಸ್ವಚ್ಛ ಆಡಳಿತ ವನ್ನು ಎರಡು ವರ್ಷಗಳ ಕಾಲ ನೀಡಿದರೆ ಮತ್ತೊಮ್ಮೆ ಕರ್ನಾಟಕದ ಜನತೆ ಬಿಜೆಪಿಯನ್ನು ಕೈ ಹಿಡಿಯಬಹುದು ಎಂಬುದು ಹೈಕಮಾಂಡಿನ ಆಲೋಚನೆ ಎನ್ನುತ್ತದೆ ವರದಿಗಳು.
ಇದು ನಿಜವೇ ಆಗಿದ್ದರೆ ಕಾಂಗ್ರೆಸ್ಸಿಗೆ ಬಿಜೆಪಿ ವಿರುದ್ಧ ಪ್ರತಿಭಟಿಸಲು ಈಗ ಇರುವ ವಿಷಯಗಳು ಸಾಕಾಗುವುದಿಲ್ಲ ಇದು ಕಾಂಗ್ರೆಸ್ ಗೆ ಮತ್ತಷ್ಟು ಸವಾಲು ನೀಡುತ್ತದೆ ಎಂಬುದು ರಾಜಕೀಯ ವಿಶ್ಲೇಷಕರ ಅಂಬೋಣ. ಒಟ್ಟಿನಲ್ಲಿ ಬಿಎಸ್ ವೈ ರಾಜೀನಾಮೆ ಕರ್ನಾಟಕ ರಾಜಕಾರಣ ದಲ್ಲಿ ಹೊಸ ತಿರುವನ್ನು ನೀಡಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?