ಭಾನುವಾರ, ಏಪ್ರಿಲ್ 28, 2024
ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ; ಪ್ರಜ್ವಲ್ ರೇವಣ್ಣ ಜೊತೆಗೆ ಹೆಚ್​​ಡಿ ರೇವಣ್ಣ ವಿರುದ್ಧವೂ ಎಫ್ಐಆರ್‌ ದಾಖಲು..!-ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.-ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದಿಂದ ಸರ್ಕಾರಕ್ಕೆ ಪತ್ರ; ಜರ್ಮನಿಗೆ ಹಾರಿದ ಪ್ರಜ್ವಲ್‌ ರೇವಣ್ಣ!-ಮದುವೆ ಆಮಂತ್ರಣದಲ್ಲಿ ಚುನಾವಣಾ ಪ್ರಚಾರ : ನೀತಿ ಸಂಹಿತೆಯಡಿ ಪ್ರಕರಣ ದಾಖಲು-ನೋಟಾ, ಅತಿ ಹೆಚ್ಚು ಅಲ್ಪಸಂಖ್ಯಾತರ ಮತದಾನ, ಮೂಡಬಿದ್ರೆ- ಬೆಳ್ತಂಗಡಿಯಲ್ಲಿ ಬಿಲ್ಲವರ ಅತಿ ಹೆಚ್ಚು ಮತದ ಬಗ್ಗೆ ಕಾಂಗ್ರೆಸ್ ನಿರೀಕ್ಷೆ.ಆ ಮೂಲಕ ಗೆಲುವಿನ ಭರವಸೆ!-ಬಿಜೆಪಿಯ ಬಣ ರಾಜಕೀಯ, ನೋಟಾ, ಸತ್ಯಜಿತ್ , ಗ್ಯಾರೆಂಟಿ, ಬಿಲ್ಲವ ಟ್ರಂಪ್ ಕಾರ್ಡ್ , ಅಲ್ಪಸಂಖ್ಯಾತರ ಬೂತುಗಳ ಹೆಚ್ಚಿನ ಮತದಾನ ಸಹಾಯ ಪಡೆದು ಮಂಗಳೂರು ಲೋಕಸಭೆಯಲ್ಲಿ ಪದ್ಮರಾಜ್ ವಿಜಯ ಪತಾಕೆ ಹಾರಿಸಬಹುದೇ?-ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪಗಡೆಯಾಟದಲ್ಲಿ ತನ್ನನ್ನೇ ಪಣಕಿಟ್ಟು ಸೋತ ನಾರಿ: ಎತ್ತಾಕ್ಕೊಂಡೋದ ಮನೆ ಮಾಲೀಕ

Twitter
Facebook
LinkedIn
WhatsApp
ಪಗಡೆಯಾಟದಲ್ಲಿ ತನ್ನನ್ನೇ ಪಣಕಿಟ್ಟು ಸೋತ ನಾರಿ: ಎತ್ತಾಕ್ಕೊಂಡೋದ ಮನೆ ಮಾಲೀಕ

ಮಹಾಭಾರತದ ಕಾಲದಲ್ಲಿ ಪಗಡೆಯಾಟವಾಡಿದ ಧರ್ಮರಾಯ ಇಡೀ ತನ್ನ ಕುಟುಂಬ, ರಾಜ್ಯ ಹಾಗೂ ಪತ್ನಿಯನ್ನು ಪಣಕ್ಕಿಟ್ಟು ಕೊನೆಗೆ ಸೋತು ಎಲ್ಲವನ್ನು ಕಳೆದುಕೊಂಡು ಕಾಡಿಗೆ ಹೋಗಿರುವ ಪುರಾಣ ಕತೆ ನಿಮ್ಮೆಲ್ಲರಿಗೂ ಗೊತ್ತೇ ಇದೆ. ಆದರೆ ಜೂಜು, ಇಸ್ಪೀಟ್, ಅಂದರ್ ಬಾಹರ್ ಮುಂತಾದ ಅಧುನಿಕ ಹೆಸರಿನಿಂದ ಕರೆಯಲ್ಪಡುವ ಪಗಡೆಯಾಟದಲ್ಲಿ ಮಹಿಳೆಯೊಬ್ಬಳು ತನ್ನನ್ನೇ ತಾನು ಪಣಕ್ಕಿಟ್ಟು ಮನೆ ಮಾಲೀಕನೊಂದಿಗೆ ಪಗಡೆಯಾಟವಾಡಿ ಸೋತು ಹೋಗಿದ್ದಾಳೆ. ಇದರಿಂದ ಮಹಿಳೆ ಮಾಲೀಕನ ಪಾಲಾಗಿದ್ದಾಳೆ. ಈ ವಿಚಿತ್ರ ಘಟನೆ ಉತ್ತರಪ್ರದೇಶದ ಪ್ರತಾಫ್‌ಗಢದಲ್ಲಿ ನಡೆದಿದ್ದು, ಈ ಘಟನೆಯಿಂದ ಆಘಾತಗೊಂಡಿರುವ ಮಹಿಳೆ ಪತಿ ಪೊಲೀಸರಿಗೆ ದೂರು ನೀಡಿದ್ದಾನೆ.

ಹೀಗೆ ಪಗಡೆಯಾಟವಾಡಿ(Gambling) ಮಾಲೀಕನ ಪಾಲಾದ ಮಹಿಳೆಯ ಹೆಸರು ರೇಣು. ಲೂಡೋ ಗೇಮ್‌ಗೆ (Ludo Game) ಗೀಳು ಹೆಚ್ಚಿಸಿಕೊಂಡಿದ್ದ ಈ ಮಹಿಳೆ ತನ್ನ ಮನೆಯ ಮಾಲೀಕನೊಂದಿಗೆ ಸದಾ ಕಾಲ ಈ ಲೂಡೋ ಗೇಮ್ ಆಟವಾಡುತ್ತಿದ್ದಳು. ಹೀಗೆ ಆಟವಾಡುತ್ತಾ ತನ್ನಲಿದ್ದ ಹಣವನ್ನೆಲ್ಲಾ ಕಳೆದುಕೊಂಡ ಆಕೆ, ಬಳಿಕ ತನ್ನ ಮಾಲೀಕನ ಬಳಿ ತನ್ನನ್ನೇ ಪಣಕ್ಕಿಟ್ಟಿದ್ದಳು. ಹೀಗೆ ತನ್ನನ್ನೇ ಪಣಕ್ಕಿಟ್ಟ ಬಳಿಕವೂ ಆಕೆ ಸೋತಿದ್ದು, ಇದರಿಂದ ಮಾಲೀಕ ಆಕೆಯನ್ನು ಹೊತ್ತೊಯ್ದಿದ್ದಾನೆ ಎನ್ನಲಾಗಿದೆ. ಇದರಿಂದ ಮಹಿಳೆ ತನ್ನ ಗಂಡನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ವಿಚಾರ ತಿಳಿದ ಗಂಡ ಓಡಿಬಂದು ಪೊಲೀಸರಿಗೆ ದೂರು ನೀಡಿದ್ದಾನೆ.

ಇತ್ತ ಈ ಮಹಿಳೆ ರೇಣು (Renu) ಪತಿ ದೂರದ ರಾಜಸ್ತಾನದ (Rajastan) ಜೈಪುರಕ್ಕೆ (Jaipur) ಕೆಲಸಕ್ಕಾಗಿ ಹೊರಟು ಹೋಗಿದ್ದು ಅಲ್ಲೇ ವಾಸ ಮಾಡುತ್ತಿದ್ದ, ವಿಚಾರ ತಿಳಿಯುತ್ತಿದ್ದಂತೆ ಅಲ್ಲಿಗೆ ಬಂದ ರೇಣು ಪತಿ ಪ್ರತಾಪಗಢ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರತಾಪ್‌ಗಡದ (Pratapgarh) ದೇವಕಲಿ (Devakali) ಎಂಬಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಮಾತನಾಡಿದ ರೇಣುವಿನ ಪತಿ, ದೇವಕಲಿ ನಗರದ ಆಸುಪಾಸಿನಲ್ಲಿ ಈತ ಹಿಂದೊಮ್ಮೆ ಬಾಡಿಗೆ ಮನೆಯಲ್ಲಿ ಪತ್ನಿಯೊಂದಿಗೆ ವಾಸವಿದ್ದ. ಆದರೆ ಆರು ತಿಂಗಳ ಹಿಂದೆ ಈತ ಕೆಲಸಕ್ಕಾಗಿ ಜೈಪುರಕ್ಕೆ ವಲಸೆ ಹೋಗಿದ್ದು, ಅಲ್ಲಿ ದುಡಿಮೆ ಮಾಡುತ್ತಿದ್ದ ಆತ ದೂರದಲ್ಲಿದ್ದ ಪತ್ನಿಗಾಗಿ ಹಣ ಕಳುಹಿಸುತ್ತಿದ್ದ. ಆದರೆ ಈ ಪತ್ನಿ ಆ ಹಣವನ್ನು ಇಟ್ಟು ಜೂಜಾಡಿದ್ದಲ್ಲದೇ ತನ್ನನ್ನೇ ಪಣಕ್ಕಿಟ್ಟು ಗಂಡನಿಗೆ ಪತ್ನಿ ಇಲ್ಲದಂತೆ ಮಾಡಿದ್ದಾಳೆ. 

ಘಟನೆಯ ಬಳಿಕ ಮಹಿಳೆ ಮನೆ ಮಾಲೀಕನ ಮನೆಗೆ ಹೊರಟು ಹೋಗಿದ್ದು, ಆಕೆ ಆತನೊಂದಿಗೆ ಹೋಗದಂತೆ ಎಲ್ಲಾ ಪ್ರಯತ್ನಗಳನ್ನು ನಾನು ಮಾಡಿದೆ. ಆದರೆ ಜೂಜಿನಲ್ಲಿ ಸೋತಿರುವುದರಿಂದ ವಾಪಸ್ ಬರಲು ಆಕೆ ಸಿದ್ಧಳಿಲ್ಲ ಎಂದು ಪತಿ ಹೇಳಿದ್ದಾನೆ. ಈ ಬಗ್ಗೆ ಪೊಲೀಸರ ಪ್ರತಿಕ್ರಿಯೆ ಕೇಳಿದಾಗ, ನಾವು ಮಹಿಳೆಯ ಪತಿ ಜೊತೆ ಸಂಪರ್ಕದಲ್ಲಿದ್ದು ಕೂಡಲೇ ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ