ಶನಿವಾರ, ಮಾರ್ಚ್ 15, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ನನಗೆ ಏನೂ ಬೇಡ ; ದಯವಿಟ್ಟು ಹಿಂತಿರುಗಿ ಅಪ್ಪ! ರಾಜೌರಿ ಸ್ಫೋಟದಲ್ಲಿ ಹುತಾತ್ಮರಾಗಿದ್ದ ಯೋಧನ ಮಗಳ ಕೂಗು

Twitter
Facebook
LinkedIn
WhatsApp
75202325313805

ದಲ್ಪತ್: ನೀವು ಯಾಕೆ ಎದ್ದೇಳುತ್ತಿಲ್ಲ? ನನಗೆ ಏನೂ ಬೇಡ ಅಪ್ಪ. ದಯವಿಟ್ಟು ಹಿಂತಿರುಗಿ ಎಂದು ಹುತಾತ್ಮ ಯೋಧ ಪ್ಯಾರಾಟ್ರೂಪರ್ ನೀಲಮ್ ಸಿಂಗ್ ಅವರ 10 ವರ್ಷದ ಪುತ್ರಿ ಪಾವನಾ ಚಿಬ್ ಕಣ್ಣೀರಾಗುತ್ತಿರುವ ದೃಶ್ಯ ಎಂತಹವರ ಹೃದಯವನ್ನು ಹಿಂಡುವಂತಿದೆ.

ಪಕ್ಕದಲ್ಲಿಯೇ ನಿಂತ ಪಾವನ ತಾಯಿ ವಂದನಾ ತನ್ನ ಗಂಡನ ನಿರ್ಜೀವ ಮುಖವನ್ನು ನಿರಂತರವಾಗಿ ನೋಡುತ್ತಿದ್ದಳು. ತನ್ನ ಗಂಡ ಇಹಲೋಕ ತ್ಯಜಿಸಿದ್ದಾನೆಂದು ಆಕೆಗೆ ನಂಬಲಾಗಲಿಲ್ಲ. ಪ್ಯಾರಾಟ್ರೂಪರ್‌ನ ಏಳು ವರ್ಷದ ಮಗ ಅಂಕಿತ್ ಕೂಡ ಶೋಕಿತನಾಗಿದ್ದನು. ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಭಯೋತ್ಪಾದಕರು ನಡೆಸಿದ ಸ್ಫೋಟದಲ್ಲಿ ಹುತಾತ್ಮರಾದ ಐವರು ಯೋಧರಲ್ಲಿ ನೀಲಂ ಸಿಂಗ್ ಸಹ ಒಬ್ಬರಾಗಿದ್ದಾರೆ. ಈ ಪ್ರದೇಶದಲ್ಲಿ ಭಯೋತ್ಪಾದಕರನ್ನು ಸದೆಬಡಿಯಲು ಸೇನಾ ಕಾರ್ಯಾಚರಣೆ ಮುಂದುವರಿದಿದೆ.

ನೀಲಮ್ ಸಿಂಗ್ ಅವರ ಪಾರ್ಥಿವ ಶರೀರ ಗ್ರಾಮಕ್ಕೆ ತೆರಳುತ್ತಿದ್ದಂತೆ ಜನರ ಕಣ್ಣಲ್ಲಿ ನೀರು ತುಂಬಿತ್ತು. ಆದರೆ, ಸೈನಿಕನ ತ್ಯಾಗದಿಂದ ಹೊರಹೊಮ್ಮಿದ ಹೆಮ್ಮೆಯ ಭಾವ ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸಿತು. ನೂರಾರು ಜನರು ‘ಧರ್ತಿ ಕೆ ವೀರ್ ಸಪೂತ್’ ವೀಕ್ಷಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿತು. ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ಜಮ್ಮುವಿನ ವಾಯುಪಡೆ ನಿಲ್ದಾಣದಿಂದ ಬೆಂಗಾವಲು ಪಡೆಯಲ್ಲಿ ತರಲಾಯಿತು. ಅಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಸೇನೆಯ ಉತ್ತರ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, ಸೇನೆಯ ಇತರ ಉನ್ನತ ಅಧಿಕಾರಿಗಳು, ಪೊಲೀಸ್ ಮತ್ತು ಆಡಳಿತ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದರು.

ವಂದನಾ ಕೊನೆಯ ಬಾರಿಗೆ ಪತಿಗೆ ನಮಸ್ಕರಿಸುತ್ತಿದ್ದಂತೆ, ಇಡೀ ಗ್ರಾಮವು ‘ನೀಲಂ ಸಿಂಗ್ ಅಮರ್ ರಹೇ’ ಘೋಷಣೆಯೊಂದಿಗೆ ಪ್ರತಿಧ್ವನಿಸಿತು. ಪೂರ್ಣ ಸೇನಾ ಗೌರವಗಳೊಂದಿಗೆ ಸಿಂಗ್ ಅಂತ್ಯಕ್ರಿಯೆ ನೆರವೇರಿತು. ಸಹೋದರ ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ಜವಾನ್ ಅಂಗದ್ ಸಿಂಗ್ ಅವರು ‘ಜೈ ಶಹೀದ್, ಜೈ ಸೇನೆ, ಜೈ ಹಿಂದ್’ ಘೋಷಣೆಗಳ ನಡುವೆ ಚಿತೆಗೆ ಅಗ್ನಿಸ್ಪರ್ಷ ಮಾಡಿದರು.

ನೀಲಂ ಸಿಂಗ್ 2003ರಲ್ಲಿ ಸೇನೆಗೆ ಸೇರಿದ್ದರು. ಸಿಂಗ್ ಅವರ ಮಾವ ಕ್ಯಾಪ್ಟನ್ (ನಿವೃತ್ತ) ರಘುವೀರ್ ಸಿಂಗ್ ಭಾವು ಅವರು, ನೀಲಂ ಸಿಂಗ್ ಧೈರ್ಯಶಾಲಿ ಮತ್ತು ಯಾವುದಕ್ಕೂ ಹೆದರುತ್ತಿರಲಿಲ್ಲ ಎಂದು ಹೇಳಿದರು. ಅವರು J&K ನ ವಿವಿಧ ಭಾಗಗಳಲ್ಲಿ ಹತ್ತಾರು ಯಶಸ್ವಿ ಕಾರ್ಯಾಚರಣೆಗಳ ಭಾಗವಾಗಿದ್ದರು. ಅವರು ಪ್ಯಾರಾ ಘಟಕ ಮತ್ತು ಸೈನ್ಯದ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದರು.

ಪ್ರತಿ ಆರು ತಿಂಗಳಿಗೊಮ್ಮೆ ಒಂದಲ್ಲ ಒಂದು ದಾಳಿ ನಡೆಯುತ್ತದೆ. ಎಷ್ಟು ಮನೆಗಳು ನಾಶವಾಗುತ್ತವೆ? ಸೈನ್ಯವು ಪ್ರತಿದಾಳಿ ಮಾಡುತ್ತದೆ. ನಂತರ ಶಾಂತಿ ನೆಲೆಸುತ್ತದೆ. ಆದರೆ ನಂತರ ಮತ್ತೊಂದು ದಾಳಿ ನಡೆಯುತ್ತದೆ. ಇನ್ನೊಂದು ಕುಟುಂಬವು ತನ್ನ ಮಗನನ್ನು ಕಳೆದುಕೊಳ್ಳುತ್ತದೆ. ನೀಲಂ ಸಿಂಗ್ ಎಲ್ಲರಿಗೂ ಸಹಾಯ ಮಾಡುವ ವ್ಯಕ್ತಿ ಎಂದು ಗ್ರಾಮಸ್ಥರು ಬಣ್ಣಿಸಿದರು. ಗ್ರಾಮಸ್ಥ ರಾಮೇಶ್ವರಂ ಸಿಂಗ್ ಮಾತನಾಡಿ, ‘ನೀಲಂ ಸಿಂಗ್ ನನಗೆ ಪ್ರೋತ್ಸಾಹ ನೀಡಿದ ಕಾರಣದಿಂದ ನಾನು ಸಶಸ್ತ್ರ ಪಡೆಗೆ ಸೇರಿಕೊಂಡೆ, ಅವರಿಗೆ ನಾನು ಋಣಿಯಾಗಿದ್ದೇನೆ. ನೀಲಮ್ ಸಿಂಗ್ ತನಗೆ ಬೇಕಾದಾಗಲೆಲ್ಲ ಔಷಧ ಮತ್ತಿತರ ವಸ್ತುಗಳನ್ನು ತಂದು ಕೊಡುತ್ತಿದ್ದರು ಎಂದು ಮತ್ತೊಬ್ಬ ಗ್ರಾಮದ ಸರಿತಾ ದೇವಿ ನೆನಪಿಸಿಕೊಂಡರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist