ಹಲವು ದಿನಗಳ ಬೆಳವಣಿಗೆಯಲ್ಲಿ ಕರಾವಳಿ ಕಾಂಗ್ರೆಸ್ನಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಕಾರ್ಯಕರ್ತರ ನಡುವೆ ತನ್ನ ಪ್ರಭಾವವನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ಎರಡು ದಿನಗಳ ಹಿಂದೆ ಹರಿಪ್ರಸಾದ್ ಅವರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಇದರ ಬೆನ್ನಲ್ಲೇ ಹಲವಾರು ರಮಾನಾಥ ರೈ, ಯುಟಿ ಖಾದರ್, ಮಿಥುನ್ ರೈ, ಐವನ್ ಡಿಸೋಜ ಬೆಂಬಲಿಗರು ಹರಿಪ್ರಸಾದ್ ಜೊತೆ ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಭಾವಿಯಾಗಿದ್ದ ಯು ಟಿ ಖಾದರ್ ಹಾಗೂ ರಮಾನಾಥ ರೈ ಜೊತೆಗಿದ್ದ ನಾಯಕರುಗಳು ಈಗ ಸಂಪೂರ್ಣವಾಗಿ ಹರಿಪ್ರಸಾದ್ ಕಡೆಗೆ ವಾಲುತ್ತಿರುವುದು ಹೊಸ ಬೆಳವಣಿಗೆಗೆ ಕಾರಣವಾಗಿದೆ. ಈ ಮೊದಲು ಹರಿಪ್ರಸಾದ್ ಬೆಂಬಲಿಗರಾಗಿ ಅಬ್ದುಲ್ ರವೂಫ್, ಸಾಹುಲ್ ಹಮೀದ್, luqman, ಪುರುಷೋತ್ತಮ್ ಚಿತ್ತಾಪುರ, ಚಿತ್ತರಂಜನ್ ಶೆಟ್ಟಿ ಗುರುತಿಸಿಕೊಂಡಿದ್ದರು. ಆದರೆ ಈಗ ಹಲವಾರು ಮಂದಿ ಎರಡನೇ ಹಂತದ ನಾಯಕರುಗಳು ಬಿಕೆ ಹರಿಪ್ರಸಾದ್ ಅವರ ಜೊತೆ ಸೇರಿರುವುದು ದಕ್ಷಿಣಕನ್ನಡದ ರಾಜಕೀಯದಲ್ಲಿ ಹೊಸ ಸಂಚಲನ ಉಂಟು ಮಾಡಿದೆ. ರಾಜ್ಯದ ಮಟ್ಟದಲ್ಲಿ ಬಿಕೆ ಹರಿಪ್ರಸಾದ್ ಹಾಗೂ ಡಿಕೆ ಶಿವಕುಮಾರ್ ಉತ್ತಮ ಸಂಬಂಧ ಹೊಂದಿದ್ದಾರೆ ಎನ್ನಲಾಗುತ್ತಿದೆ. ಈ ಕಾರಣದಿಂದ ಮಿಥುನ್ ರೈ ತಂಡ ಸಹ ಬಿಕೆ ಹರಿಪ್ರಸಾದ್ ಜೊತೆಗೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಆದರೆ ಮಿಥುನ್ ರೈ ತಂಡವನ್ನು ವಿರೋಧಿಸುವ ಹಲವಾರು ಮಂದಿ ಹರಿಪ್ರಸಾದ್ ತಂಡದಲ್ಲಿರುವುದು ಈಗ ಕುತೂಹಲ ಮೂಡಿಸಿದೆ. ಇನ್ನೊಂದು ಕಡೆಯಲ್ಲಿ ಸಿದ್ದರಾಮಯ್ಯ ರೊಂದಿಗೆ ಗುರುತಿಸಿಕೊಂಡಿರುವ ಐವನ್ ಡಿಸೋಜ ತಂಡ ಏನು ಮಾಡುತ್ತದೆ ಎಂಬುದು ಕುತೂಹಲ ಮೂಡಿಸಿದೆ. ದ. ಕನ್ನಡದ ಕಾಂಗ್ರೆಸ್ ರಾಜಕಾರಣ ಹರಿಪ್ರಸಾದ್ ಅವರ ಸಂಪೂರ್ಣ ಪ್ರವೇಶದೊಂದಿಗೆ ಹೊಸ ರಂಗೇರಿದೆ.
ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,
ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?