ಕೊಡಗು ಜಿಲ್ಲೆಯಲ್ಲಿ ಹಾವಳಿ ಇಡುತ್ತಿರುವ ಕಾಡಾನೆಗಳು ಇಂದು ಮತ್ತೊಂದು ಬಲಿ ಪಡೆದುಕೊಂಡಿದೆ. ಇಲ್ಲಿನ ತಿತಿಮತಿ ರಸ್ತೆಯಲ್ಲಿ ಕಾಡಾನೆ ದಾಳಿಗೆ ಓರ್ವ ವ್ಯಕ್ತಿ ಬಲಿಯಾಗಿದ್ದಾರೆ. ಮೃತರನ್ನು ಪೊನ್ನಂಪೇಟೆ ತಾಲೂಕಿನ ಮಾರಿಯಮ್ಮ ಕಾಲೋನಿಯ ಚಾಮ (50) ಎಂದು ಗುರುತಿಸಲಾಗಿದೆ
ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಒಂದೇ ಬೈಕಿನಲ್ಲಿ ಮೂವರು ಕೋಣನ ಕಟ್ಟೆಯಿಂದ ಮರಪಾಲ ರಸ್ತೆಯಲ್ಲಿ ತೆರಳುವಾಗ ಹಠಾತ್ತನೆ ಆನೆ ಎದುರಿಗೆ ಬಂದಿದೆ. ಈ ವೇಳೆ ಬೈಕ್ ನ ಹಿಂಬದಿ ಕೂತಿದ್ದ ಇಬ್ಬರು ಓಡಿದ್ದಾರೆ. ಆದರೆ ಚಾಮ ಅವರು ಬೈಕ್ ನಿಂದ ಇಳಿಯುವಷ್ಟರಲ್ಲಿ ಆನೆ ದಾಳಿ ಮಾಡಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ
ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?