ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಾಶ್ಮೀರದ ಟಿಟ್ವಾಲ್‍ನಲ್ಲಿ ನೆಲೆ ನಿಲ್ಲಲಿದ್ದಾಳೆ ಶೃಂಗೇರಿ ಶಾರದಾಂಬೆ!

Twitter
Facebook
LinkedIn
WhatsApp
ಕಾಶ್ಮೀರದ ಟಿಟ್ವಾಲ್‍ನಲ್ಲಿ ನೆಲೆ ನಿಲ್ಲಲಿದ್ದಾಳೆ ಶೃಂಗೇರಿ ಶಾರದಾಂಬೆ!

ಚಿಕ್ಕಮಗಳೂರು: ಪಾಕ್ ಆಕ್ರಮಿತ ಪಿ.ಓ.ಕೆಯ ಕಾಶ್ಮೀರದ ಗಡಿಯಲ್ಲಿರುವ ಟಿಟ್ವಾಲ್‍ನಲ್ಲಿ ಕಾಶ್ಮೀರ ಪುರವಾಸಿನ ಶೃಂಗೇರಿ ಶಾರದಾಂಬೆ ನೆಲೆನಿಲ್ಲಲಿದ್ದಾಳೆ. ಈಗಾಗಲೇ ಟಿಟ್ವಾಲ್‍ನಲ್ಲಿ ಕಾಶ್ಮೀರಿ ಪುರವಾಸಿನಿ ಶಾರದಾಂಬೆ ದೇಗುಲದ ಜೀರ್ಣೋದ್ದಾರ ಕಾರ್ಯ ನಡೆಯುತ್ತಿದ್ದು, ಕಾಶ್ಮೀರದ ಶಾರದಾ ಪೀಠಕ್ಕೆ ಜಿಲ್ಲೆಯ ಶೃಂಗೇರಿ ಶಾರದಾಂಬೆ (Sringeri Sharadamba) ಸನ್ನಿಧಿಯಿಂದ ಕಾಶ್ಮೀರಿ ಪಂಡಿತರಿಗೆ ಶಾರದಾಂಬೆ ಮೂರ್ತಿಯನ್ನ ಹಸ್ತಾಂತರಿಸಲಾಗಿದೆ.

ಕಾಶ್ಮೀರ (Kashmir) ದ ಗಡಿ ಭಾಗದ ನೀಲಂ ಕಣಿವೆಯ ಟಿಟ್ವಾಲ್‍ (Teetwal) ನಲ್ಲಿ ನಿರ್ಮಾಣವಾಗುತ್ತಿರುವ ಶಾರದಾ ದೇಗುಲಕ್ಕೆ ಮೂರ್ತಿಯನ್ನ ಹಸ್ತಾಂತರಿಸಲಾಗಿದೆ. ವಿಜಯದಶಮಿ ದಿನದಂದು ಶೃಂಗೇರಿ ಗುರುವತ್ರಯರಾದ ಭಾರತೀ ತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಶ್ರೀಗಳು ಪಂಚಲೋಹದ ಶೃಂಗೇರಿ ಶಾರದಾಂಬೆಯ ಮೂರ್ತಿಯನ್ನ ಕಾಶ್ಮೀರಿ ಪಂಡಿತರಿಗೆ ಹಸ್ತಾಂತರಿಸಿದ್ದಾರೆ. ಕಾಶ್ಮೀರದ ಭಾಗವಾದ ಟಿಟ್ವಾಲ್‍ನಲ್ಲಿ ಪುರಾತನ ಶಾರದಾಂಬೆ ದೇಗುಲ ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ಮರು ನಿರ್ಮಾಣವಾಗುತ್ತಿದೆ.

ಕಾಶ್ಮೀರಿ ಪಂಡಿತರ ಸಮಿತಿ ಮುಖ್ಯಸ್ಥ ರವೀಂದ್ರ ಪಂಡಿತ್‍ಗೆ ಗುರುವತ್ರಯರು ಮೂರ್ತಿಯನ್ನ ಹಸ್ತಾಂತರಿಸಿದ್ದಾರೆ. ಶಾರದಾಂಬೆ ದೇಗುಲ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಮುಂದಿನ ನವರಾತ್ರಿ ವೇಳೆಗೆ ಕಾಶ್ಮೀರದಲ್ಲಿ ಶಾರದಾಂಬೆ ದೇಗುಲ ಲೋಕಾರ್ಪಣೆಗೊಳ್ಳಲಿದೆ. ಕಾಶ್ಮೀರದಲ್ಲಿ ನೂತನ ದೇವಾಲಯ ನಿರ್ಮಾಣವಾಗುತ್ತಿರುವ ಜಾಗದಲ್ಲಿ ಶಿಲ್ಪಿಗಳಿಗೆ ಭಾಷೆ ಗೊತ್ತಿಲ್ಲ. ನೆಟ್‍ವರ್ಕ್ ಇಲ್ಲ. ತರಕಾರಿ ಸಿಗೋದು ಕಷ್ಟ. ಇಂತಹ ಕಡೆ ಸಮರೋಪಾದಿಯಲ್ಲಿ ಹಗಲಿರುಳೆನ್ನದೆ ನಮ್ಮ ಶಿಲ್ಪಿಗಳು ತಿಂಗಳುಗಳ ಕಾಲ ಶ್ರಮಿಸಿ ಕಲ್ಲಿನ ಕೆಲಸ ಮುಗಿಸಿರೋದು ಹೆಮ್ಮೆಯ ಸಂಗತಿ.

ವೇಣೂರು ಯುವ ವಾಹಿನಿ ಘಟಕದ ಅತಿಥ್ಯದಲ್ಲಿ ಅಕ್ಟೋಬರ್ 9 ಆದಿತ್ಯವಾರ ನಡೆಯಲಿದೆ ಕೆಸರುಡೊಂಜಿ ದಿನ ಕಾರ್ಯಕ್ರಮ

ದೇವಾಲಯದ ಮೇಲ್ಛಾವಣಿ ಕೆಲಸ ಆರಂಭವಾಗಬೇಕಿದ್ದು, ಪ್ರಾಯೋಗಿಕವಾಗಿ ದೇವಾಲಯದ ಮಹಾದ್ವಾರವನ್ನ ಅಳವಡಿಸಲಾಗಿದೆ. ಕಾಶ್ಮೀರದಲ್ಲಿ ಶಿಲಾಮಯ ದೇಗುಲ ಇನ್ನೇನು ಕೆಲವೇ ದಿನಗಳಲ್ಲಿ ಭಕ್ತರ ದರ್ಶನಕ್ಕೆ ಲಭ್ಯವಾಗಲಿದೆ. ಪಂಚಲೋಹದಲ್ಲಿ ನಿರ್ಮಾಣವಾಗಿರುವ ಶ್ರೀ ಶಾರದಾ ದೇವಿ ವಿಗ್ರಹವು 100 ಕೆ.ಜಿ ತೂಕವಿದ್ದು, ಬೆಂಗಳೂರಿನ ಶಿಲ್ಪಿಗಳು ಸುಂದರವಾಗಿ ಶಾರದೆಯ ಮೂರ್ತಿಯನ್ನ ನಿರ್ಮಾಣ ಮಾಡಿದ್ದಾರೆ. ಈಗ ಶಾರದೆಯ ಪ್ರತಿರೂಪದ ವಿಗ್ರಹ ಕಾಶ್ಮೀರಕ್ಕೆ ಹೋಗುತ್ತಿದ್ದು, ಶೃಂಗೇರಿಯಲ್ಲಿ ನೆಲೆಯೂರಿರುವ ಶಾರದೆಯ ಮೂಲ ಸ್ಥಾನವೂ ಕಾಶ್ಮೀರನೇ. 1200 ವರ್ಷಗಳ ಹಿಂದೆ ಅದ್ವೈತ ಸಿದ್ಧಾಂತದ ಪ್ರತಿಪಾದಕ ಶ್ರೀ ಶಂಕರಾರ್ಚಾರ್ಯರು ಕಾಶ್ಮೀರದ ಸರ್ವಜ್ಞ ಪೀಠದಿಂದ ಶ್ರೀ ಶಾರದಾಂಬೆಯನ್ನ ಕರೆತಂದು ಶೃಂಗೇರಿಯಲ್ಲಿ ಪ್ರತಿಷ್ಠಾಪಿಸಿದ್ದರು.

ಇದೀಗ ಶಾರದೆ ಮತ್ತೆ ಕಾಶ್ಮೀರದಲ್ಲಿ ನೆಲೆಯೂರುತ್ತಿರುವುದರಿಂದ ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ, ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಸಂತಸಗೊಂಡಿದ್ದಾರೆ. 12 ಶತಮಾನಗಳ ಬಳಿಕ ಶಾರದೆ ಕಾಶ್ಮೀರಕ್ಕೆ ಹೋಗುತ್ತಿರುವುದು ಕರುನಾಡಿಗರಿಗೂ ಸಂತಸ ತಂದಿದೆ. ಭಾರತದ ಮುಕುಟಮಣಿ ಕಾಶ್ಮೀರದಲ್ಲಿ ಅನೇಕ ಐತಿಹಾಸಿಕ ದೇವಾಲಯಗಳಿವೆ. ಅದರಲ್ಲಿ ಶಾರದಾ ಸರ್ವಜ್ಞ ಪೀಠವೂ ಒಂದು. ಅಲ್ಲಿ ವಿಗ್ರಹ ಇಲ್ಲದೇ, ಕೇವಲ ನಾಲ್ಕು ಗೋಡೆಗಳು ಮಾತ್ರ ಇತ್ತು. ಅದೇ ಸ್ಥಳದಲ್ಲಿ ಶಾರದೆಯ ಮರು ಸ್ಥಾಪನೆಯಾಗಬೇಕು ಅಂತ ಉಭಯ ಶ್ರೀಗಳು ಬಯಸಿದ್ದರು.

ಜಗದ್ಗುರುಗಳ ಇಚ್ಛೆಯಂತೆ ಪಾಕ್ ಆಕ್ರಮಿತ ಕಾಶ್ಮೀರದ ಗಡಿ ರೇಖೆಗೆ ಹೊಂದಿಕೊಂಡಂತಿರುವ ಕಿಶನ್ ಗಂಗಾ ನದಿ ದಡದ ಟ್ವಿಟಾಲ್ ಗ್ರಾಮದಲ್ಲಿ ಶಾರದೆ ನೆಲೆಯೂರಲಿದ್ದು, ಮುಂದಿನ ನವರಾತ್ರಿಯೊಳಗೆ ಕಾಶ್ಮೀರದಲ್ಲಿ ಶಾರದೆ ದೇಗುಲ ಲೋಕಾರ್ಪಣೆಗೊಳ್ಳಲಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ