ಭೋಪಾಲ್: ಆಸ್ಪತ್ರೆಯಲ್ಲಿ ಮೃತಪಟ್ಟ ತಮ್ಮ 4 ವರ್ಷದ ಮಗಳ ಮೃತದೇಹವನ್ನು ಮನೆಗೆ ತರಲು ಆಂಬುಲೆನ್ಸ್ ಗೆ ನೀಡಲು ಹಣವಿಲ್ಲದೇ ತಂದೆ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿರುವ ಕರುಳು ಹಿಂಡುವ ಘಟನೆಯೊಂದು ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿ ನಡೆದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಪೌಡಿ ಗ್ರಾಮದ ಬಾಲಕಿಯನ್ನು ಸೋಮವಾರ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಾಲಕಿಯು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಮಗಳ ಮೃತದೇಹವನ್ನು ತಂದೆ ಲಕ್ಮಣ್ ಸಾರ್ವಜನಿಕ ಬಸ್ಸಿನಲ್ಲಿ ಅರ್ಧದವರೆಗೆ ತಂದಿದ್ದಾರೆ. ಅಲ್ಲಿಂದಲಾದರೂ ಗಾಡಿ ಕೊಡಿ ಎಂದು ನಗರಸಭೆಗೆ ಕೇಳಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ.
ಯಾರ ಸ್ಪಂದನೆಯೂ ಸಿಗದೇ ಇದ್ದಾಗ ವಿಧಿಯಿಲ್ಲದೇ ತಂದೆ ಮಗಳ ಮೃತದೇಹವನ್ನು ಹೆಗಲಿನಲ್ಲಿ ಹೊತ್ತು ನಡೆಯುವಂತಾಗಿತ್ತು. ಇನ್ನೂ ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ದಾಮೋಹ್ನ ಆಸ್ಪತ್ರೆಯ ವೈದ್ಯರು, ನಮ್ಮ ಬಳಿ ಯಾರೂ ವಾಹನ ಕೇಳಿಲ್ಲ ಎಂದು ಸಮಸ್ಯೆಯಿಂದ ಎಸ್ಕೇಪ್ ಆಗಿದ್ದಾರೆ.
ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ
ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?