ಗುರುವಾರ, ಮಾರ್ಚ್ 13, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಕೊರಳಿಗೆ ಕುಣಿಕೆ ಹಾಕಿದ ಸೆಲ್ಫಿ ತಾಯಿಗೆ ಕಳುಹಿಸಿ ಮಹಿಳೆ ಆತ್ಮಹತ್ಯೆ!

Twitter
Facebook
LinkedIn
WhatsApp
ಕೊರಳಿಗೆ ಕುಣಿಕೆ ಹಾಕಿದ ಸೆಲ್ಫಿ ತಾಯಿಗೆ ಕಳುಹಿಸಿ ಮಹಿಳೆ ಆತ್ಮಹತ್ಯೆ!

ತ್ರಿಶೂರ್ : ಪೆರುಂಬೈಲಾವ್ ಕಲ್ಲುಂಪುರದಲ್ಲಿ ಮಹಿಳೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಹಿಳೆಯ ಪತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಲ್ಲುಂಪುರಂ ಮೂಲದ ಝೈನುಲ್ ಆಬಿದ್ ಅವರ ಪತ್ನಿ ಸಬೀನಾ (25) ಮೃತ ಮಹಿಳೆಯಾಗಿದ್ದಾಳೆ.ಸಬೀನಾಳ ಪತಿ ಅಬಿದ್ ಮಲೇಷಿಯಾದಲ್ಲಿದ್ದಾರೆ. ಬೆಳಗ್ಗೆ ಮನೆಯ ಅಡುಗೆ ಕೋಣೆಯಲ್ಲಿ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮಹಿಳೆ ತನ್ನ ಆರು ವರ್ಷದ ಮಗನನ್ನು ಬೆಳಗ್ಗೆ ಮದರಸಾಕ್ಕೆ ಕಳುಹಿಸಿ, ಎರಡು ವರ್ಷದ ಮಗನನ್ನು ಮಲಗಿಸಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಸಬೀನಾ ತನ್ನ ಕೊರಳಿಗೆ ಕುಣಿಕೆ ಹಾಕಿದ ಸೆಲ್ಫಿಯನ್ನು ತನ್ನ ತಾಯಿಗೆ ಕಳುಹಿಸಿದ್ದರು.

ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯಲ್ಲಿ ಸಂಬಂಧಿಕರು ನೀಡಿದ ಕೌಟುಂಬಿಕ ದೌರ್ಜನ್ಯದ ದೂರಿನ ಮೇರೆಗೆ ಮೃತ ಮಹಿಳೆಯ ಪತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳೆ ಸಾವನ್ನಪ್ಪಿದ ದಿನವೇ ಆಕೆಯ ಸಾವಿನಲ್ಲಿ ನಿಗೂಢವಿದೆ ಎಂದು ಆರೋಪಿಸಿ ಸಂಬಂಧಿಕರು ಬಂದಿದ್ದರು. ಆಕೆಯ ಪತಿ ಜೈನುಲ್ ಅಬಿದ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಮನೆಯಲ್ಲಿ ಸಬೀನಾ ಮತ್ತು ಅವರ ಆರು ಮತ್ತು ಎರಡು ವರ್ಷದ ಮಕ್ಕಳು ಮಾತ್ರ ಇದ್ದರು. ಸಾಯುವ ಮುನ್ನ ಸಬೀನಾ ತನ್ನ ತಾಯಿಗೆ ಕರೆ ಮಾಡಿ ಪತಿ ತನಗೆ ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ದೂರಿದ್ದರು. 8 ವರ್ಷಗಳ ಹಿಂದೆ ಸಬೀನಾ ವಿವಾಹವಾಗಿದ್ದರು. ಮದುವೆಯಾದ ಆರಂಭದ ದಿನಗಳಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ.

ಪತಿ ಕಳೆದ ಏಳು ವರ್ಷಗಳಿಂದ ಸಬೀನಾಗೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.ಸಾಯುವ ದಿನ ಬೆಳಿಗ್ಗೆ ಸಬೀನಾ ತನ್ನ ಮನೆಕೆಲಸಗಳನ್ನು ಮುಗಿಸಿ ತನ್ನ ಹಿರಿಯ ಮಗನನ್ನು ಮದರಸಾಕ್ಕೆ ಕಳುಹಿಸಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಸ್ವಲ್ಪ ಸಮಯದ ಮೊದಲು ವಿದೇಶದಲ್ಲಿದ್ದ ಆಕೆಯ ಪತಿ ಸಬೀನಾಗೆ ಫೋನ್‌ನಲ್ಲಿ ಕರೆ ಮಾಡಿದ್ದಾರೆ. ಇದಾದ ನಂತರ, ಸಬೀನಾಳ ಪೋಷಕರು ತನ್ನ ಮಗಳು ಸಾಯಲು ನಿರ್ಧರಿಸಿ ತನ್ನ ಪತಿಯ ಫೋನ್ ಕರೆಯನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ಸಾಯುವ ನಿರ್ಧಾರಕ್ಕೆ ಬಂದ ಸಬೀನಾ ಕೊರಳಿಗೆ ಕುಣಿಕೆ ಬಿಗಿದು ಸೆಲ್ಫಿ ತೆಗೆದು ತಾಯಿಗೆ ಕಳುಹಿಸಿದ್ದಾರೆ. ಫೋಟೋ ನೋಡಿ ಗಾಬರಿಗೊಂಡ ತಾಯಿ ಹಲವು ಬಾರಿ ಕರೆ ಮಾಡಿದರೂ ಸಬೀನಾ ಫೋನ್ ತೆಗೆಯಲಿಲ್ಲ. ನಂತರ ಮಲಪ್ಪುರಂ ಜಿಲ್ಲೆಯ ಕೊಜಿಕಾರದಲ್ಲಿ ವಾಸಿಸುವ ಆಕೆಯ ತಾಯಿ ಆಟೋ ರಿಕ್ಷಾವನ್ನು ಕರೆದು ಕಲ್ಲುಂಪುರ ತಲುಪಿದರು, ಆದರೆ ಅಷ್ಟರಲ್ಲಿ ಸಬೀನಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಬೀನ ಸಾವಿನ ಬಗ್ಗೆ ತನಿಖೆ ನಡೆಸಬೇಕು ಎಂದು ಸಬೀನಾ ತಂದೆ ಕೊಜಿಕ್ಕರ ತಿರುಟುಪುಳೈಕ್ಕಲ್ ಸಲೀಂ ಆಗ್ರಹಿಸಿದ್ದಾರೆ. ಪತಿಯ ಫೋನ್ ಕರೆಯೇ ಮಗಳ ಸಾವಿಗೆ ಕಾರಣವಾಯಿತು ಎನ್ನುತ್ತಾರೆ ಸಲೀಂ. ಕುನ್ನಂಕುಲಂ ಠಾಣಾಧಿಕಾರಿ ಯು.ಕೆ.ಶಹಜಹಾನ್ ನೇತೃತ್ವದ ಪೊಲೀಸ್ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist