ಶುಕ್ರವಾರ, ಮಾರ್ಚ್ 29, 2024
ಶಿವಸೇನೆ ಗೆ ಸೇರ್ಪಡೆಯಾದ ನಟ ಗೋವಿಂದ ; ಮುಂಬೈ ಕ್ಷೇತ್ರದಿಂದ ಸ್ಪರ್ಧೆ.?-ನಟಿ ಊರ್ಮಿಳಾ ಸಾಫ್ಟ್‌ ಪೋರ್ನ್‌ ಸ್ಟಾರ್ ಎಂಬ ಹೇಳಿಕೆ ಸಮರ್ಥಿಸಿಕೊಂಡ ಕಂಗನಾ ರಣಾವತ್..!-ಜಗತ್ತಿನ ಅತಿದೊಡ್ಡ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಅನಾ ಜುಲಿಯಾ ಹಾವು ಸಾವು.!-ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ; ಒಟ್ಟು ಆಸ್ತಿ ಮೌಲ್ಯ ಹೀಗಿದೆ.!-ಸ್ನೇಹಿತರ ಹುಚ್ಚಾಟಕ್ಕೆ ಕರುಳು ಬ್ಲ್ಯಾಸ್ಟ್ ಆಗಿ ಯುವಕ ಸಾವು..!-ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ಮಹತ್ವದ ತೀರ್ಪು ನೀಡಿದ ದೆಹಲಿ ಹೈಕೋರ್ಟ್.!-ಬಿಜೆಪಿ - ಜೆಡಿಎಸ್ ನ 28 ಕ್ಷೇತ್ರಗಳ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.!-ಸುಮಲತಾ ಅವರು ನನಗೆ ಶತ್ರುವಲ್ಲ; ಸಮಯ ಬಂದಾಗ ಮಾತನಾಡುತ್ತೇನೆ: ಹೆಚ್ ಡಿ ಕುಮಾರಸ್ವಾಮಿ-ಕೇರಳ: 10 ಕೋಟಿ ಲಾಟರಿ ಗೆದ್ದ ಆಟೋ ಚಾಲಕ ರಾತ್ರೋ ರಾತ್ರಿ ಕೋಟ್ಯಾಧಿಪತಿ..!-ಮಂಗಳೂರು: ಬೈಕಂಪಾಡಿ ಸೀ ಫುಡ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಸುಟ್ಟು ಭಸ್ಮವಾದ ಕಾರ್ಖಾನೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ದೂರದರ್ಶನದ ಖ್ಯಾತ ಸುದ್ದಿ ವಾಚಕಿ ಗೀತಾಂಜಲಿ ಅಯ್ಯರ್ ನಿಧನ

Twitter
Facebook
LinkedIn
WhatsApp
geetanjali Iyer

ನವದೆಹಲಿ: 1980ರ ದಶಕದ ದೂರದರ್ಶನದ ಖ್ಯಾತ ಸುದ್ದಿ ವಾಚಕಿ ಗೀತಾಂಜಲಿ ಅಯ್ಯರ್ ನಿಧನರಾಗಿದ್ದಾರೆ (Popular news anchor Geetanjali Iyer passed away). 1971ರಲ್ಲಿ ದೂರದರ್ಶನ ಸೇರಿದ್ದ ಅವರು, 30 ವರ್ಷಗಳ ಕಾಲ ನಿರೂಪಕಿಯಾಗಿ ರಾಷ್ಟ್ರೀಯ ಸುದ್ದಿ ವಾಚನದ ಮೂಲಕ ಜನರಿಗೆ ಚಿರಪರಿಚಿತರಾಗಿದ್ದರು.

ಗೀತಾಂಜಲಿ ಅಯ್ಯರ್ (Geetanjali Iyer) ಅವರು ತಮ್ಮ ವಾಕ್ಚಾತುರ್ಯ, ಪ್ರಸ್ತುತಿ, ಸಮಚಿತ್ತ ಮತ್ತು ಮೋಡಿಯಿಂದ ರಾಷ್ಟ್ರವನ್ನು ಆಕರ್ಷಿಸಿದರು.

ಟಿವಿ ಎಂದರೆ ದೂರದರ್ಶನ ಅಂತಿದ್ದ ಕಾಲದಲ್ಲಿ ವಾರ್ತಾ ವಾಚಕರ ಸಮಿತಿಯೊಂದಿತ್ತು. ಅದರಲ್ಲಿ  ಗೀತಾಂಜಲಿ ಅಂಬೇಗಾಂವ್ಕರ್ (ಪತ್ರಕರ್ತ ಸ್ವಾಮಿನಾಥನ್ ಅಯ್ಯರ್ ಅವರನ್ನು ಮದುವೆಯಾದ ನಂತರ  ತಮ್ಮ ಗಂಡನ ಉಪನಾಮವನ್ನು ಪಡೆದರು) ಆಗಾಧ ಜನಪ್ರಿಯತೆ ಮೂಲಕ ಪ್ರತ್ಯೇಕವಾಗಿ ನಿಂತರು. 

ದಶಕಗಳ ವೃತ್ತಿಜೀವನದಲ್ಲಿ ನಾಲ್ಕು ಬಾರಿ ಅತ್ಯುತ್ತಮ ಆ್ಯಂಕರ್​​ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.1989 ರಲ್ಲಿ ‘ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ’ಗೂ ಭಾಜನರಾಗಿದ್ದರು. ಅವರು ಭಾರತದ ಪ್ರಮುಖ ದಾನಿಗಳನ್ನೊಳಗೊಂಡ ‘ವರ್ಲ್ಡ್ ವೈಡ್ ಫಂಡ್’ನ ಮುಖ್ಯಸ್ಥರೂ ಆಗಿದ್ದರು.

ದೂರದರ್ಶನದಲ್ಲಿ ಸುದ್ದಿ ನಿರೂಪಕಿಯಾಗಿ ಯಶಸ್ವಿ ವೃತ್ತಿಜೀವನದ ನಂತರ ಗೀತಾಂಜಲಿ ಅವರು, ಕಾರ್ಪೊರೇಟ್ ಸಂವಹನ, ಸರ್ಕಾರಿ ಸಂಪರ್ಕ ಮತ್ತು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ಬವಹಿಸಿದ್ದರು. ಅವರು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಯಲ್ಲಿ (ಸಿಐಐ) ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಲ್ಲದೆ, ‘ಖಂಡಾ್’ ಎಂಬ ಧಾರಾವಾಹಿಯಲ್ಲಿ ಸಹ ನಟಿಸಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ