ರಾಜ್ಯದಂತ ಮಳೆ ಚುರುಕು ; ಉಡುಪಿ ಮತ್ತು ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದಲ್ಲಿ ಹಲವೆಡೆ 3 ದಿನ ಮಳೆ ಸಾಧ್ಯತೆ!
ಕರ್ನಾಟಕದಾದ್ಯಂತ ಮುಂಗಾರು ಚುರುಕುಗೊಂಡಿದ್ದು, ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಸೆಪ್ಟೆಂಬರ್ 11ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಾಮರಾಜನಗರ, ಕೊಡಗು, ಮೈಸೂರು ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೊಷಿಸಲಾಗಿದೆ.
ಅಥಣಿ, ಗದಗ, ಕುಕನೂರು,ನಿರ್ನಾ, ಬಬಲೇಶ್ವರ, ರೋಣ, ಇಳಕಲ್, ಹುಮನಾಬಾದ್, ಕಲಬುರಗಿ, ಗುಂಡಗುರ್ತಿ, ಕುಷ್ಟಗಿ, ವಿಜಯಪುರ, ತಿಕ್ಕೋಟ, ಜೇವರ್ಗಿ, ಯಡ್ರಾಮಿ, ಮಾನ್ವಿ, ಸಿಂಧನೂರು, ಸೇಡಬಾಳ, ಗಂಗಾವತಿ, ಯಲಬುರ್ಗಾ, ತಾವರೆಕೆರೆ, ತಾಳಿಕೋಟೆ, ಔರಾದ್, ಭಾಲ್ಕಿ, ಚಿತ್ತಾಪುರ, ಸೇಡಂ, ಕೆಂಭಾವಿ, ಶಹಾಪುರ, ಮಸ್ಕಿ, ಮುದಗಲ್, ಕುರುಗೋಡು, ಸಂಡೂರು, ಅಣ್ಣಿಗೇರಿ, ಮುನಿರಾಬಾದ್, ಕೂಡಲಸಂಗಮ, ರಬಕವಿ, ಬಸವನಬಾಗೇವಾಡಿ, ನೆಲೋಗಿ, ಅಡಕಿ, ಮಂಠಾಳ, ನಾರಾಯಣಪುರ, ಕುರ್ಡಿ, ಮುರಗೋಡ, ಸಿರುಗುಪ್ಪ, ಕಂಪ್ಲಿ, ಹೊಸಪೇಟೆ, ಹಡಗಲಿ, ಕ್ಯಾಸಲ್ರಾಕ್, ಸಂಕೇಶ್ವರ, ಯದವಾಡ, ರಾಯಭಾಗ, ಸುತಗಟ್ಟಿ
ಮುಟ್ಟಿಕೊಪ್ಪ, ಧಾರವಾಡ ಪಿಟಿಒ, ಹುಬ್ಬಳ್ಳಿ, ಹಾವೇರಿ, ಸವಣೂರು, ಶಿರಹಟ್ಟಿ, ನರಗುಂದ, ಗಂಗಾವತಿ, ಬೇವೂರು, ಬಾದಾಮಿ, ಲೋಕಾಪುರ, ಮಹಾಲಿಂಗಪುರ, ಬಿಳಿಗಿ, ಬಾಗಲಕೋಟೆ, ಆಲಮಟ್ಟಿ, ನಲ್ವತವಾಡ, ಕಮಲಾಪುರ, ಮಹಾಗಾಂವ್, ಮುಧೋಳ, ಹುಣಸಗಿ, ಲಿಂಗಸುಗೂರು, ಮುಡಬಿ, ಬಳ್ಳಾರಿ, ಕುಡಿತಿನಿ, ಹೊಸಕೋಟೆಯಲ್ಲಿ ಮಳೆಯಾಗಿದೆ.
ಕರಾವಳಿ ಹಾಗೂ ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ನಗರದಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಮಳೆಯಾಗುವ ಸಾಧ್ಯತೆ ಇದೆ, ಎಚ್ಎಎಲ್ನಲ್ಲಿ 28.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 28.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 28.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.