ಬುಧವಾರ, ಮಾರ್ಚ್ 12, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮಾವನನ್ನೇ ಕೊಂದ ಅಳಿಯ, ಮಗಳಿಗೆ ನೀಡಿದ ಕಿರುಕುಳ ಪ್ರಶ್ನಿಸಿದ್ದೆ ತಪ್ಪಾಯ್ತೆ?

Twitter
Facebook
LinkedIn
WhatsApp
ಮಾವನನ್ನೇ ಕೊಂದ ಅಳಿಯ, ಮಗಳಿಗೆ ನೀಡಿದ ಕಿರುಕುಳ ಪ್ರಶ್ನಿಸಿದ್ದೆ ತಪ್ಪಾಯ್ತೆ?

ಕೋಲಾರ: ಆತ ತನ್ನ ಕೊನೆಯ ಮಗಳು (Daughter) ಎಂದು ಪ್ರೀತಿಯಿಂದ ಸಾಕಿ ಸಲಹಿ ಶಕ್ತಿ ಮೀರಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಆದರೆ ಆತ ತನ್ನ ಮಗಳಿಗೆ ಮಾಡಿದ್ದ ಮದುವೆಯೇ ಆತನಿಗೆ ಮರಣ ಶಾಸನವಾಗಿ ಮಾರ್ಪಾಟಾಗಿತ್ತು. ಮದುವೆ ಮಾಡಿದ ಕೇವಲ 40 ದಿನಕ್ಕೆ ತನ್ನ ಮಗಳು ಗಂಡನ ಮನೆ ಬಿಟ್ಟು ಬಂದರೆ, ಅತ್ತ ಆ ತಂದೆ (Father) ತನ್ನ ಅಳಿಯನ ಕೈಯಿಂದಲೇ ಕೊಲೆಯಾಗಿದ್ದಾನೆ.

ಕೋಲಾರದ (Kolar) ಷಹೀದ್ ನಗರ ನಿವಾಸಿ ಬಾಬು ಷರೀಫ್‍ನನ್ನು ಅಳಿಯನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. 40 ದಿನಗಳ ಹಿಂದೆ ಮಗಳು ಸಾನಿಯಾ ಖಾನಂಳನ್ನು ತಬರೇಜ್ ಪಾಷಾಗೆ ಕೊಟ್ಟು ಮದುವೆ ಮಾಡಿದ್ರು. ತನ್ನ ಕೊನೆಯ ಮಗಳು ಎಂದು ಬಾಬು ಷರೀಫ್ ಸುಮಾರು 20 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಕೇಳಿದಷ್ಟು ಒಡವೆ, ಹುಡುಗನಿಗೊಂದು ಬೈಕ್ ಎಲ್ಲವನ್ನೂ ಕೊಟ್ಟು ಮದುವೆ ಮಾಡಿದ್ರು.

ಮದುವೆಯಾದ ಎರಡೇ ದಿನಕ್ಕೆ ತಬರೇಜ್ ಪಾಷಾ ಸಾನಿಯಾ ಖಾನಂಗೆ ಕಿರುಕುಳ ನೀಡಲು ಶುರು ಮಾಡಿಕೊಂಡಿದ್ದ. ನಿಮ್ಮಪ್ಪ ಕೋಟಿ ಕೋಟಿ ಕೊಟ್ಟು ಮದುವೆ ಮಾಡಿ ಕೊಟ್ಟಿಲ್ಲ ಮನೆಯಲ್ಲಿ ನಾನು ಹೇಳಿದಂತೆ ಕೇಳಿಕೊಂಡು ಮನೆ ಕೆಲಸ ಮಾಡಿಕೊಂಡಿರಬೇಕು ಎಂದು ತಾಕೀತು ಮಾಡುತ್ತಿದ್ದ. ಹೊಡೆಯೋದು ಬಡಿಯೋದು, ಗ್ಯಾಸ್ ಆನ್ ಮಾಡಿ ಬ್ಲಾಸ್ಟ್ ಮಾಡಿ ಸಾಯಿಸಿಬಿಡ್ತೀನಿ ಎಂದೆಲ್ಲಾ ಕಿರುಕುಳ ನೀಡಲು ಆರಂಭಿಸಿದ್ದ. ಇದನ್ನು ಸಹಿಸಿಕೊಳ್ಳಲಾಗದೆ ಆಗಸ್ಟ್ 11 ರಂದು ಸಾನಿಯಾ ತವರು ಮನೆಗೆ ವಾಪಸ್ ಬಂದಿದ್ದಳು. ಅಷ್ಟಕ್ಕೆ ಸುಮ್ಮನಾಗದ ತಬರೇಜ್ ಸಾನಿಯಾ ಫೋನ್‍ಗೆ ಮೆಸೇಜ್ ಮಾಡಿ ನಿನ್ನ ಬಿಡೋದಿಲ್ಲ ನಿಮ್ಮ ಅಪ್ಪನನ್ನು ಸಾಯಿಸ್ತೀನಿ ಎಂದೆಲ್ಲಾ ಧಮ್ಕಿ ಹಾಕುತ್ತಿದ್ದನಂತೆ.

ಕಳೆದ ರಾತ್ರಿ ಕೂಡಾ ಮೆಸೇಜ್ ಮಾಡಿ ಬೆದರಿಕೆ ಹಾಕಿದ್ದಾನೆ. ವಿಷಯ ತಿಳಿದ ಷರೀಫ್ ಕೇಳೋದಕ್ಕೆಂದು ತಬರೇಜ್ ಮನೆಗೆ ಹೋಗಿದ್ದಾರೆ. ಈ ವೇಳೆ ಮನೆಯಲ್ಲಿದ್ದ ತಬರೇಜ್ ಹಾಗೂ ಆತನ ತಾಯಿ ಜಬೀನಾ ತಾಜ್ ಬಾಬು ಷರೀಫ್‍ಗೆ ಚಾಕುವಿನಿಂದ ಇರಿದಿದ್ದಾರೆ. ಈ ವೇಳೆ ತಕ್ಷಣ ಬಾಬು ಷರೀಫ್‍ರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ್ರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬಳಿಕ ಕೇಸ್ ದಾಖಲಿಸಿಕೊಂಡ ಪೊಲೀಸರು ಪರಾರಿಯಾಗಲು ಯತ್ನಿಸಿದ ತಬರೇಜ್ ಪಾಷ ಹಾಗೂ ತಾಯಿ ಜಬೀನಾ ತಾಜ್‍ನನ್ನು ಬಂಧಿಸಿದ್ದಾರೆ.

ಮಗಳು ಸುಖವಾಗಿರಲಿ ಅಂತ ಕಷ್ಟುಪಟ್ಟು ದುಡಿದ ಹಣವನ್ನೆಲ್ಲಾ ಖರ್ಚು ಮಾಡಿ ಅದ್ದೂರಿಯಾಗಿ ಮದುವೆ ಮಾಡಿದ್ದ ಬಾಬು ಷರೀಫ್‍ಗೆ, ತನ್ನ ಮಗಳ ಮದುವೆ0iÉುೀ ಮಸಣದ ಹಾದಿಯನ್ನು ತೋರಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist