ಗುರುವಾರ, ಮಾರ್ಚ್ 13, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Raveendra Jadeja: ಜಡೇಜಾ ಕುಟುಂಬದಲ್ಲಿ ಬಿರುಕು ; ತಂದೆಯಿಂದ ಮಗ ಹಾಗೂ ಸೊಸೆ ವಿರುದ್ಧ ಆರೋಪ..!

Twitter
Facebook
LinkedIn
WhatsApp
Raveendra Jadeja: ಜಡೇಜಾ ಕುಟುಂಬದಲ್ಲಿ ಬಿರುಕು ; ತಂದೆಯಿಂದ ಮಗ ಹಾಗೂ ಸೊಸೆ ವಿರುದ್ಧ ಆರೋಪ..!

ನಿನ್ನೆಗೆ ಅಂದರೆ ಫೆಬ್ರವರಿ 8 ಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟು 15 ವರ್ಷ ಪೂರೈಸಿದ ಸಂತಸದಲ್ಲಿದ್ದ ರವೀಂದ್ರ ಜಡೇಜಾ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದೆ. ಟೀಂ ಇಂಡಿಯಾಗೆ ಒಬ್ಬ ಅದ್ಭುತ ಆಲ್‌ರೌಂಡರ್​ನನ್ನು ನೀಡಿದ ಪೋಷಕರೇ ಜಡೇಜಾ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಇದು ಕ್ರಿಕೆಟ್ ಲೋಕದಲ್ಲಿ ಟೀಂ ಇಂಡಿಯಾ ಅಭಿಮಾನಿಗಳು ಹಾಗೂ ರವೀಂದ್ರ ಜಡೇಜಾ ಅವರ ಅಭಿಮಾನಿಗಳನ್ನು ದಿಗ್ಭ್ರಮೆಗೊಳ್ಳುವಂತೆ ಮಾಡಿದೆ. ವಾಸ್ತವವಾಗಿ ಸ್ಥಳೀಯ ಮಾಧ್ಯಮದೊಂದಿಗೆ ತನ್ನ ಅಳಲನ್ನು ತೊಡಿಕೊಂಡಿರುವ ರವೀಂದ್ರ ಜಡೇಜಾ ಅವರ ತಂದೆ ಅನಿರುದ್ಧ್ ಜಡೇಜಾ , ಮಗ ಹಾಗೂ ಸೊಸೆಯ ವಿರುದ್ಧ ಹರಿಹಾಯ್ದಿದ್ದಾರೆ. ಅದರಲ್ಲೂ ಜಡೇಜಾ ಪತ್ನಿ ರಿವಾಬ ಅವರ ವಿರುದ್ಧ ಕಟುವಾದ ಭಾಷೆ ಬಳಸಿರುವ ಅವರು ನನ್ನ ಸೊಸೆ ಮನೆ ಒಡೆಯುವ ಕೆಲಸ ಮಾಡಿದ್ದಾಳೆ. ರಿವಾಬ ಏನು ಮ್ಯಾಜಿಕ್ ಮಾಡಿದಳೋ ಗೊತ್ತಿಲ್ಲ. ನನ್ನ ಮಗ ನನ್ನಿಂದ ದೂರಾಗಿ ವರ್ಷಗಳೇ ಕಳೆದಿವೆ ಎಂದು ಆರೋಪಿಸಿದ್ದಾರೆ.

ರವೀಂದ್ರ ಜಡೇಜಾ ಅವರ ತಂದೆ ಅನಿರುದ್ಧ್ ಸಿಂಗ್ ಜಡೇಜಾ, ಮಗ ಹಾಗೂ ಸೊಸೆಯ ವಿರುದ್ಧ ಹರಿಹಾಯ್ದಿರುವುದನ್ನು ಗಮನಿಸಿದರೆ, ಜಡೇಜಾ ಕುಟುಂಬದಲ್ಲಿ ಬಿರುಗಾಳಿ ಎದ್ದಿದೆ ಎಂಬುದನ್ನು ಅರಿತುಕೊಳ್ಳಬಹುದು. ಜಡೇಜಾ ಮತ್ತು ಅವರ ತಂದೆ ಪರಸ್ಪರ ದೂರಾಗಿ ವರ್ಷಗಳೇ ಕಳೆದಿದ್ದು, ಇಬ್ಬರ ನಡುವೆ ಮಾತುಕತೆ ಕೂಡ ಸಂಪೂರ್ಣ ಬಂದ್ದಾಗಿದೆ ಎಂಬುದನ್ನು ಗಮನಿಸಿಬಹುದು .

 

ಜಡೇಜಾ ತಂದೆ ಹೇಳಿದ್ದೇನು?

ರವೀಂದ್ರ ಜಡೇಜಾ ಅವರ ತಂದೆ ಅನಿರುದ್ಧ್ ಜಡೇಜಾ ಅವರು ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಇಡೀ ಕಥೆಯನ್ನು ವಿವರಿಸಿದ್ದಾರೆ. ‘ನನ್ನ ಮಗ ರವೀಂದ್ರ ಜಡೇಜಾ ತನ್ನೊಂದಿಗೆ ವರ್ಷಗಳಿಂದ ಸಂಪರ್ಕದಲ್ಲಿಲ್ಲ. ಪ್ರಸ್ತುತ ನಾನು ಜಾಮ್‌ನಗರದ 2 ಬಿಎಚ್‌ಕೆ ಫ್ಲಾಟ್‌ನಲ್ಲಿ ಒಬ್ಬನೇ ವಾಸಿಸುತ್ತಿದ್ದೇನೆ. ಒಂದು ಕಾಲದಲ್ಲಿ ನನ್ನ ಮಗ ಕೂಡ ನನ್ನೊಂದಿಗೆ ಒಂದೇ ಫ್ಲಾಟ್‌ನಲ್ಲಿ ಇದ್ದ. ಆದರೆ ಈಗ ಈ ಫ್ಲಾಟ್‌ನಲ್ಲಿ ನಾನೊಬ್ಬನೇ ಬರುವ 20 ಸಾವಿರ ರೂಪಾಯಿಗಳ ಪಿಂಚಣಿಯಲ್ಲಿ ಜೀವನ ಸಾಗಿಸುತ್ತಿದ್ದೇನೆ. ರವೀಂದ್ರ ಮದುವೆಯಾದ ಮುಂದಿನ 2-3 ತಿಂಗಳುಗಳು ಚೆನ್ನಾಗಿಯೇ ಇದ್ದವು. ಆದರೆ ನಂತರ ಜಡೇಜಾ ಅವರ ನಡವಳಿಕೆಯು ಬದಲಾಗಲಾರಂಭಿಸಿತು. ನನ್ನ ಮಗ ನನ್ನೊಂದಿಗೆ ಮಾತನಾಡುವುದಿನ್ನು ಬಿಟ್ಟ. ನನ್ನ ಮಗನ ಮೇಲೆ ಅವನ ಹೆಂಡತಿ ರಿವಾಬ ಏನು ಮ್ಯಾಜಿಕ್ ಮಾಡಿದಳೋ ಗೊತ್ತಿಲ್ಲ.

 

ರಿವಾಬ ಇಂದ ನಮ್ಮ ಸಂಬಂಧ ಹಾಳಾಯ್ತು

ಸುಮಾರು 5 ವರ್ಷಗಳಿಂದ ನಮ್ಮ ನಡುವೆ ಯಾವುದೇ ಮಾತುಕತೆ ಇಲ್ಲ. ಮದುವೆಯ ನಂತರ ನನ್ನ ಮಗ ಸಂಪೂರ್ಣವಾಗಿ ಬದಲಾಗಿದ್ದಾನೆ. ಅವನು ಅವನ ಹೆಂಡತಿ ಮಾತನ್ನು ಕೇಳಲು ಪ್ರಾರಂಭಿಸಿದ ನಂತರ ನನ್ನೊಂದಿಗೆ ಮಾತನಾಡುವುದನ್ನು ಬಿಟ್ಟ. ಇದೆಲ್ಲದನ್ನು ನೋಡಿದರೆ ನನ್ನ ಮಗನನ್ನು ಕ್ರಿಕೆಟಿಗನನ್ನಾಗಿ ಮಾಡದಿದ್ದರೆ ಚೆನ್ನಾಗಿರುತ್ತಿತ್ತು. ನನ್ನ ಮಗನಿಗೆ ಮದುವೆ ಮಾಡದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಇಲ್ಲದಿದ್ದರೆ ಈ ದಿನ ನೋಡಲು ಸಿಗುತ್ತಿರಲಿಲ್ಲ. ಇದಕ್ಕೆಲ್ಲ ಜಡೇಜಾ ಪತ್ನಿಯೇ ಕಾರಣ ಎಂದು ತಂದೆ ಆರೋಪಿಸಿದ್ದಾರೆ

ಜಡೇಜಾ ನೀಡಿದ ಪ್ರತಿಕ್ರಿಯೆ ಏನು?

ಇನ್ನು ತಂದೆ ಮಾಡಿರುವ ಆರೋಪಗಳಿಗೆಲ್ಲ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಎಕ್ಸ್​ನಲ್ಲಿ ಸ್ಪಷ್ಟನೆ ನೀಡಿರುವ ಜಡೇಜಾ, ಈ ಆರೋಪಗಳೆಲ್ಲ ಪೂರ್ವ ನಿಯೋಜಿತ ಪಿತೂರಿ. ಅವರು ಹೊರಿಸಿರುವ ಆರೋಪಗಳಲ್ಲಿ ಹುರುಳಿಲ್ಲ. ಎಲ್ಲವೂ ಸತ್ಯಕ್ಕೆ ದೂರವಾದ್ದವು. ಇದೆಲ್ಲ ನನ್ನ ಪತ್ನಿಯ ಹೆಸರಿಗೆ ಕಳಂಕ ತರುವ ಪ್ರಯತ್ನವಾಗಿದೆ. ಇದೆಲ್ಲವನ್ನು ನಾನು ಖಂಡಿಸುತ್ತೇನೆ. ನನಗೂ ಹೇಳಲಿಕ್ಕೆ ಸಾಕಷ್ಟಿದೆ. ಆದರೆ ನಾನು ಅದೆಲ್ಲವನ್ನು ಸಾರ್ವಜನಿಕವಾಗಿ ಬಿಚ್ಚಿಡಲು ಬಯಸುವುದಿಲ್ಲ ಎಂದು ಜಡೇಜಾ ಸ್ಪಷ್ಟನೆ ನೀಡಿದ್ದಾರೆ.

https://x.com/imjadeja/status/1755852845650219275?s=20

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist