ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಶುಭ್​ಮನ್ ಗಿಲ್​ ಮತ್ತು ಧ್ರುವ್​ ಜುರೇಲ್​ ರನ್ನು ಹೊಗಳಿದ ರಾಹುಲ್ ದ್ರಾವಿಡ್

Twitter
Facebook
LinkedIn
WhatsApp
ಯಶಸ್ವಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಮಹಮ್ಮದ್ ಶಮಿ; ಫೋಟೋ ಮೂಲಕ ಟ್ವೀಟರ್ ನಲ್ಲಿ ಪೋಸ್ಟ್..!

ಭಾರತ ತಂಡ ಇಂಗ್ಲೆಂಡ್​ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 3-1ರಿಂದ ಮುನ್ನಡೆ ಸಾಧಿಸುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಅಲ್ಲದೇ 4ನೇ ದಿನದ ಒಂದು ಹಂತದಲ್ಲಿ ಭಾರತ ಸೋಲಿನ ಸನಿಹಕ್ಕೆ ಬಂದು ತಲುಪಿತ್ತು. ಆದರೆ ಯುವ ಆಟಗಹಾರರಾದ ಧ್ರುವ್ ಜುರೇಲ್​ ಮತ್ತು ಶುಭ್​ಮನ್ ಗಿಲ್​ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇನ್ನು, 192 ರನ್‌ಗಳನ್ನು ಬೆನ್ನಟ್ಟಿದ ಭಾರತವು ರಾಂಚಿಯ ಪಿಚ್‌ನಲ್ಲಿ 84/1 ವಿಕೆಟ್​ ನಿಂದ ಆರಂಭವಾಗಿ 120 ರನ್​ಗೆ 5 ವಿಕೆಟ್​ ಕಳೆದುಕೊಂಡಿತ್ತು. ಮೊದಲು ಶುಭಮನ್ ಗಿಲ್ ಮತ್ತು ಧ್ರುವ್ ಜುರೆಲ್ ಆರನೇ ವಿಕೆಟ್‌ಗೆ 72 ರನ್‌ಗಳ ಅಜೇಯ ಪಾಲುದಾರಿಕೆಯೊಂದಿಗೆ ತಂಡವನ್ನು ಅಂತಿಮವಾಗಿ ಗೆಲುವಿನ ದಡ ಸೇರಿಸಿತು. ಇದು ದ್ರಾವಿಡ್ ಸಂತಸಕ್ಕೂ ಕಾರಣವಾಗಿದೆ.

ಸೋತರೂ, ಗೆದ್ದರೂ ಹೆಚ್ಚಾಗಿ ಸಂಭ್ರಮಿಸದೇ ಶಾಂತವಾಗಿರುವ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ 4ನೇ ಟೆಸ್ಟ್​ ಪಂದ್ಯ ಗೆಲ್ಲುತ್ತಿದ್ದದಂತೆ ಡ್ರೆಸ್ಸಿಂಗ್​ ರೂಂ ನಲ್ಲಿ ಎದ್ದು ನಿಂತು ಸಂಭ್ರಮಿಸಿದರು. ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ತದನಂತರ ಡ್ರೆಸ್ಸಿಂಗ್​ ರೂಮ್​ನಿಂದ ಹೊರಬಂದ ದ್ರಾವಿಡ್​ ಸಂತೋಷದಿಂದ ತಮ್ಮ ಶಿಷ್ಯರನ್ನು ಪ್ರೀತಿಯನ್ನು ತಬ್ಬಿಕೊಂಡು ಅಭಿನಂದಿಸಿದರು.

ದ್ರಾವಿಡ್ ಜುರೆಲ್ ಮತ್ತು ಗಿಲ್ ಅವರನ್ನು ಅಪ್ಪಿಕೊಳ್ಳುತ್ತಿರುವುದನ್ನು ನೋಡಿದ ಅಭಿಮಾನಿಗಳು ಗುರುವಿಗೆ ತಕ್ಕ ಶಿಷ್ಯರು ಸಿಕ್ಕದ್ದಾರೆ. ದ್ರಾವಿಡ್​ ಸಾಕಷ್ಟು ಸಂತೋಷದಿಂದ ಕೂಡಿದ್ದಾರೆ ಎಂದೆಲ್ಲಾ ಕಾಮೆಂಟ್​ ಮಾಡುತ್ತಿದ್ದು, ಅಭಿಮಾನಿಗಳು ಟೀಂ ಇಂಡಿಯಾಗೆ ಅಭಿನಂದೆನಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಇನ್ನು, ದ್ರಾವಿಡ್​​ ಸಂತೋಷದಿಂದ ಡ್ರೆಸ್ಸಿಂಗ್​ ರೂಮನ್​ ನಲ್ಲಿ ಶುಭ್​ಮನ್ ಗಿಲ್​ ಮತ್ತು ಧ್ರುವ್​ ಜುರೇಲ್​ ಅವರನ್ನು ಹೊಗಳಿದ್ದಾರೆ. ಇಬ್ಬರೂ ಸಹ ಉತ್ತಮವಾಗಿ ಆಡಿದ್ದೀರಿ ಎಂದು ಹೇಳಿದ್ದಲ್ಲದೇ ಒಂದು ವಿಶೇಷ ಸಂದೇಶ ನೀಡಿದ್ದನ್ನು ಶುಭ್​ಮನ್ ಗಿಲ್​ ತಮ್ಮ ಇನ್ಸ್ಟಾಗ್ರಾಂ ಫೋಸ್ಟ್​ ಮೂಲಕ ಬಹಿರಂಗಪಡಿಸಿದ್ದಾರೆ.

ನೀವು ಇಲ್ಲದಿದ್ದರೆ, ನಂತರ ಯಾರು? ಈಗ ಇಲ್ಲದಿದ್ದರೆ ಇನ್ನು ಯಾವಾಗ? ಎಂದು ಹೇಳುವ ಮೂಲಕ ದ್ರಾವಿಡ್​​ ಯುವ ಆಟಗಾರರಿಗೆ ಭಾವನಾತ್ಮಕವಾಗಿ ಸಂದೇಶ ನೀಡಿದ್ದಾರೆ ಎಂದು ಗಿಲ್​ ಪೋಸ್ಟ್​ ಮೂಲಕ ತಿಳಿಸಿದ್ದಾರೆ. ಒಟ್ಟಾರೆಯಾಗಿ ಈ ಗೆಲುವಿನೊಂದಿಗೆ ಭಾರತ ವಿಶ್ವ ಟೆಸ್ಟ್​ ಚಾಂಪಿಯನ್​ ಅಂಕಪಟ್ಟಿಯಲ್ಲಿಯೂ 2ನೇ ಸ್ಥಾನವನ್ನು ಇನ್ನಷ್ಟು ದೃಡವಾಗಿಸಿದೆ.

ಈ ಮೂಲಕ ಭಾರತ ತಂಡ ತವರು ನೆಲದಲ್ಲಿ ಸತತ 17ನೇ ಟೆಸ್ಟ್ ಸರಣಿಯನ್ನು ಗೆದ್ದಂತಾಗಿದೆ. ಈ ಮೂಲಕ ಭಾರತ ಕ್ರಿಕೆಟ್ ತಂಡವು ತವರು ನೆಲದಲ್ಲಿ ಸತತವಾಗಿ ಅತಿ ಹೆಚ್ಚು ಟೆಸ್ಟ್ ಸರಣಿ ಜಯಗಳ ದಾಖಲೆಯನ್ನು ವಿಸ್ತರಿಸಿದೆ. ಯಾವುದೇ ಬೇರೆ ತಂಡ ಇಷ್ಟು ದೊಡ್ಡಮಟ್ಟದಲ್ಲಿ ತವರಿನಲ್ಲಿಯೂ ಟೆಸ್ಟ್​ ಸರಣಿ ಗೆಲುವು ದಾಖಲಿಸಲಿಲ್ಲ.

ರೋಹಿತ್ ಶರ್ಮಾ ಇಂಗ್ಲೆಂಡ್‌ನ ಭಾಝ್​ಬಾಲ್​ ಯುಗದಲ್ಲಿ ಆಂಗ್ಲರ ವಿರುದ್ಧ ಜಯಗಳಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈವರೆಗೂ ಯಾವುದೇ ವಿಶ್ವದ ಕ್ರಿಕೆಟ್ ತಂಡದ ನಾಯಕನೂ ಸಹ ಭಾಝ್​ಬಾಲ್​ ವಿರುದ್ಧ ಸರಣಿ ಜಯ ದಾಖಲಿಸಿರಲಿಲ್ಲ. ಹೌದು, ಕಳೆದ ಕೆಲ ವರ್ಷಗಳಿಂದ ಇಂಗ್ಲೆಂಡ್​ ತಂಡ ವಿಶ್ವ ಟೆಸ್ಟ್​ ಕ್ರಿಕೆಟ್​ ನಲ್ಲಿ ಹೊಸ ಮಾದರಿಯನ್ನು ಪರಿಚಯಿತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist