ಯಾಕೆ ರಶ್ಮಿಕಾ ಬೇಡ?
ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ರಶ್ಮಿಕಾ ಮಂದಣ್ಣ ತೆಲುಗು-ತಮಿಳು ಸಿನಿಮಾಗಳಿಗೆ ಸಹಿ ಮಾಡುತ್ತಿದ್ದಂತೆ ಬಾಲಿವುಡ್ ಕಡೆ ಹಾರುತ್ತಾರೆ. ಈ ನಡುವೆ ಕನ್ನಡ ಚಿತ್ರರಂಗಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ ಅಲ್ಲದೆ ಕನ್ನಡ ಭಾಷೆನೇ ಗೊತ್ತಿಲ್ಲ ಎನ್ನುವ ರೀತಿ ಮಾತನಾಡುತ್ತಾರೆ. ಇದರಿಂದ ಕನ್ನಡಿಗರು ಬೇಸರಗೊಂಡು ರಶ್ಮಿಕಾರನ್ನು Bycott ಮಾಡಬೇಕು ಎಂದು ಶುರು ಮಾಡಿಕೊಂಡಿದ್ದರು.
ಯಾವ ಸಿನಿಮಾ ಮೂಲಕ ಜರ್ನಿ ಶುರು ಮಾಡಿದ್ದರೂ ಆ ನಿರ್ಮಾಣ ಸಂಸ್ಥೆ ಹೆಸರು ಹೇಳದೆ ಸನ್ನೆ ಮೂಲಕ ಮಾತನಾಡಿರುವುದು ಶೆಟ್ರು ಗ್ಯಾಂಗ್ಗೆ ಬೇಸರವಾಗಿದೆ. ಶೆಟ್ರು ಗ್ಯಾಂಗ್ ಮಾತ್ರವಲ್ಲ ಕನ್ನಡಿಗರಿಗೆ ಬೇಸರವಾಗಿದೆ. ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ಎಂದು ಹೆಸರಿಟ್ಟವರು ನಾವು ಆದರೆ ನಮ್ಮನ್ನು ಲೆಕ್ಕ ಮಾಡದೆ ಕೊಬ್ಬು ತೋರಿಸುತ್ತಿರುವುದು ಸರಿ ಅಲ್ಲ ಎನ್ನುತ್ತಾರೆ ಫ್ಯಾನ್ಸ್. ಇಷ್ಟೆ ಅಲ್ಲ ಕನ್ನಡ ಸಿನಿಮಾ ಮತ್ತೆ ಮಾಡಲ್ವಾ ಎಂದು ಪ್ರಶ್ನೆ ಮಾಡಿದ್ದಾಗ ನನಗೆ ಕನ್ನಡ ಸಿನಿಮಾ ಮಾಡಲು ಸದ್ಯಕ್ಕೆ ಸಮಯವಿಲ್ಲ ತುಂಬಾ ಬ್ಯುಸಿಯಾಗಿದ್ದೀನಿ ಎಂದಿದ್ದರು.
ಬಿ-ಟೌನ್ ಪಲ್ಲವಿ ಎಂಟ್ರಿ?
ಸಾಯಿ ಪಲ್ಲವಿ ಬಾಲಿವುಡ್ ಕಡೆ ಮುಖ ಮಾಡುತ್ತಿದ್ದಾರೆ ಎನ್ನಲಾಗಿದೆ. ಬಾಲಿವುಡ್ನಲ್ಲಿ ರಾಮಾಯಣದ ಬಗ್ಗೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಎರಡು ವರ್ಷಗಳಿಂದ ಕೇಳಿ ಬರುತ್ತಿದ್ದು ಇದೀಗ ಮತ್ತೇ ಸುದ್ದಿಯಾಗುತ್ತಿದೆ. ರಾಮಾಯಣ ಮೂಲಕ ಸಾಯಿ ಪಲ್ಲವಿ ಬಾಲಿವುಡ್ ಕಡೆ ಮುಖ ಮಾಡುತ್ತಿದ್ದಾರೆ ಎನ್ನಲಾಗಿದೆ. ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ರಾಮಾಯಣ ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆಯಾಗಿ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. ಅಂದಹಾಗೆ ಸೀತೆ ಪಾತ್ರಕ್ಕೆ ಈಗಾಗಲೇ ಅನೇಕ ಹೆಸರು ಕೇಳಿಬಂದಿದತ್ತು. ದೀಪಿಕಾ ಪಡಕೋಣೆ, ಕರೀನಾ ಕಪೂರ್ ಸೇರಿದಂತೆ ಅನೇಕ ಜನರ ಹೆಸರು ಕೇಳಿಬಂದಿತ್ತು. ಇದೀಗ ಸಾಯಿ ಪಲ್ಲವಿ ಹೆಸರು ವೈರಲ್ ಆಗಿದೆ. ಅಂದಹಾಗೆ ರಾಮಾಯಣ ಸಿನಿಮಾದಲ್ಲಿ ಹೃತಿಕ್ ರೋಷನ್ ರಾವಣನಾಗಿ ನಟಿಸಲಿದ್ದಾರೆ, ರಾಮನಾಗಿ ರಣಬೀರ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?