ಮೊಬೈಲ್ ಕಳ್ಳರಿಂದ ರಕ್ಷಿಸಿಕೊಳ್ಳವ ವೇಳೆ ಆಯತಪ್ಪಿ ರೈಲಿನಿಂದ ಬಿದ್ದು ಯುವತಿಯ ದುರಂತ ಸಾವು!
ಚೆನ್ನೈ: ಮೊಬೈಲ್ ಕಳ್ಳರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಯತ್ನಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ಆಯತಪ್ಪಿ ರೈಲಿನಿಂದ ಬಿದ್ದು, ಸಾವನ್ನಪ್ಪಿದ ಘಟನೆ ನೆರೆಯ ರಾಜ್ಯ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. 22 ವರ್ಷದ ಪ್ರೀತಿ (S Preethi) ಮೃತ ಮಹಿಳೆ. ಜುಲೈ 2 ರಂದು ಈ ಘಟನೆ ನಡೆದಿದ್ದು, ರೈಲಿನಿಂದ ಕೆಳಗೆ ಬಿದ್ದು ಗಾಯಗೊಂಡ ಪ್ರೀತಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಗಂಭೀರ ಗಾಯಗೊಂಡಿದ್ದ ಪ್ರೀತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಇತ್ತ ಸೈಬರ್ ಅಪರಾಧ (ciber Crime) ನಿಯಂತ್ರಣ ದಳದ ನೆರವಿನಿಂದ ಆಕೆಯ ಮೊಬೈಲ್ ಫೋನ್ ಅನ್ನು ಟ್ರಾಕ್ ಮಾಡಿರುವ ಪೊಲೀಸರಿಗೆ ಪ್ರೀತಿಯ ಮೊಬೈಲ್ ಫೋನ್ ಇರುವ ಲೋಕೇಷನ್ ಪತ್ತೆಯಾಗಿದೆ. ನಂತರ ಅಲ್ಲಿಗೆ ತೆರಳಿದ ಪೊಲೀಸರಿಗೆ ರಾಜು ಎಂಬಾತನ ಬಳಿ ಫೋನ್ ಇರುವುದು ಪತ್ತೆಯಾಗಿದೆ. ಈ ರಾಜು ಚೆನ್ನೈನ ಬೇಸೆಂಟ್ ನಗರದಲ್ಲಿ ಮೀನು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ, ಆತನನ್ನು ಪೊಲೀಸರು ಹಿಡಿದು ವಿಚಾರಿಸಿದಾಗ ಆತ 2000 ಸಾವಿರ ರೂಪಾಯಿ ನೀಡಿ ಈ ಮೊಬೈಲ್ ಫೋನ್ ಯುವಕನಿಂದ ಖರೀದಿಸಿದ್ದಾಗಿ ಹೇಳಿದ್ದಾನೆ.
ವಿಚಾರಣೆ ಮುಂದುವರಿಸಿದ ಪೊಲೀಸರು ಆತನಿಗೆ ಮೊಬೈಲ್ ಫೋನ್ ಮಾರಿದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಣಿಮಾರನ್ (Manimaran) ಹಾಗೂ ವಿಘ್ನೇಶ್ (Vighnesh) ಬಂಧಿತ ಆರೋಪಿಗಳು, ವಿಚಾರಣೆ ವೇಳೆ ಇಬ್ಬರೂ ತಾವು ಪ್ರೀತಿ ಬಳಿಯಿಂದ ಮೊಬೈಲ್ ಕಸಿದಿದ್ದಾಗಿ ಹೇಳಿದ್ದಾರೆ. ನಂತರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 2 ಸಾವಿರ ರೂಪಾಯಿ ಆಸೆಗಾಗಿ ದುರುಳರು ಮಾಡಿದ ಈ ಕಳ್ಳತನ ಅಮಾಯಕ ಯುವತಿಯ ಜೀವನನ್ನೇ ಬಲಿ ಪಡೆದಿದೆ. ಕದ್ದ ಮೊಬೈಲ್ ಫೋನ್ ಸಿಕ್ಕಿದೆ. ಆದರೆ ಮೊಬೈಲ್ಗಾಗಿ ಹೋರಾಡಿದ ಯುವತಿ ಜೀವ ಹೋರಟೋಗಿದೆ.
ಇಂದು ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು, ಮೊಬೈಲ್ನಲ್ಲೇ ಅನೇಕರ ಇಡೀ ವಹೀವಾಟುಗಳಿರುತ್ತವೆ. ಬ್ಯಾಕ್ ಬ್ಯಾಲೆನ್ನಿಂದ, ಆರೋಗ್ಯ ಆಹಾರದವರೆಗೆ ಮೊಬೈಲ್ನಿಂದ ಎಲ್ಲವನ್ನೂ ಕಾಲ್ಬುಡಕ್ಕೆ ತರಿಸಿಕೊಳ್ಳಲು ಸಾಧ್ಯ. ಅದರ ಜೊತೆಗೆ ಇರುವ ಸಾವಿರಾರು ಕಂಟ್ಯಾಕ್ಟ್ಗಳು, ಅಮೂಲ್ಯ ದಾಖಲೆಗಳು ಅದರಲ್ಲಿರುತ್ತವೆ. ಇದೇ ಕಾರಣಕ್ಕೆ ಮೊಬೈಲ್ ಹೋದರೆ ಬಹುತೇಕರಿಗೆ ಜೀವ ಹೊರಟೋದಂತೆ ಆಗುತ್ತದೆ. ಹಾಗಂತ ಈ ರೀತಿ ಅಪಾಯಕ್ಕೆ ಸಿಲುಕಿದಾಗ ಮೊಬೈಲ್ ಹೊರಟೋಯ್ತು ಅಂತ ಯಾರು ಬದುಕನ್ನು ಅಪಾಯಕ್ಕೆ ಒಡ್ಡದಿರಿ, ತಂತ್ರಜ್ಞಾನದ ಸಹಾಯದಿಂದ ಕದ್ದ ಮೊಬೈಲ್ ವಾಪಸ್ ಪಡೆಯಬಹುದು. ಅಲ್ಲದೇ ಮೊಬೈಲ್ ಹೋದರೆ ಮತ್ತೊಂದು ಕೊಳ್ಳಬಹುದು. ಆದರೆ ಜೀವ ಹೋದರೆ ಕೈ ಕಾಲು ಮುರಿದರೆ ಮತ್ತೆ ಗಳಿಸಲು ಸಾಧ್ಯವಿಲ್ಲ.
ಹೊಸ ಸಿಮ್ಕಾರ್ಡ್ ಆಕ್ಟಿವ್ ಆದ ಗಂಟೆಯಲ್ಲೇ 2.5 ಲಕ್ಷ ವಂಚನೆ: ಎಫ್ಐಆರ್ ದಾಖಲು
ಬೆಂಗಳೂರು (ಜು.10): ಹೊಸ ಸಿಮ್ ಕಾರ್ಡ್ ಆಕ್ಟಿವೇಶನ್ ಆದ ಕೆಲವೇ ಗಂಟೆಗಳಲ್ಲಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 2.05 ಲಕ್ಷ ಬೇರೊಂದು ಖಾತೆಗೆ ವರ್ಗಾವಣೆ ಆಗಿರುವ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಸರಘಟ್ಟ ಮುಖ್ಯರಸ್ತೆಯ ಸಪ್ತಗಿರಿ ಲೇಔಟ್ ನಿವಾಸಿ ಶಿವಕುಮಾರ್ ಎಂಬುವವರು ಹಣ ಕಳೆದುಕೊಂಡವರು. ಇವರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಶಿವಕುಮಾರ್ ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜು ಬಳಿ ಜೆರಾಕ್ಸ್ ಅಂಗಡಿ ಇರಿಸಿಕೊಂಡು ಜೀವನ ಮಾಡುತ್ತಿದ್ದಾರೆ. ಜು.6ರಂದು ಬೆಳಗ್ಗೆ 11ಕ್ಕೆ ಅವರ ಮೊಬೈಲ್ನ ಸಿಮ್ ಕಾರ್ಡ್ ನಿಷ್ಕಿ್ರಯವಾದ ಹಿನ್ನೆಲೆಯಲ್ಲಿ ಸಮೀಪದ ಅಂಗಡಿಯೊಂದರಲ್ಲಿ ಆಧಾರ್ ಸಂಖ್ಯೆ ಹಾಗೂ ಫಿಂಗರ್ ಪ್ರಿಂಟ್ ನೀಡಿ ಹಳೆ ಸಂಖ್ಯೆಯ ಹೊಸ ಸಿಮ್ ಕಾರ್ಡ್ ಖರೀದಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಸಿಮ್ ಕಾರ್ಡ್ ಆಕ್ಟಿವೇಶನ್ ಆಗಿದೆ. ಇದಾದ ಸ್ವಲ್ಪ ಸಮಯದ ಬಳಿಕ ಶಿವಕುಮಾರ್ ಅವರ ಬ್ಯಾಂಕ್ ಖಾತೆಯಿಂದ 5 ಸಾವಿರ ಕಡಿತವಾಗಿದೆ. ಮಾರನೇ ದಿನ ಮಧ್ಯಾಹ್ನ 12ಕ್ಕೆ ಬ್ಯಾಂಕ್ ಖಾತೆಯಿಂದ 1 ಲಕ್ಷ ಕಡಿತವಾಗಿರುವ ಸಂದೇಶ ಬಂದಿದೆ.
ಬಳಿಕ ಬ್ಯಾಂಕ್ಗೆ ತೆರಳಿ ವಿಚಾರಿಸಿದಾಗ ಬ್ಯಾಂಕ್ ಖಾತೆಯಿಂದ ಐದು ಬಾರಿ ಒಟ್ಟು 2.05 ಲಕ್ಷ ಕಡಿತ ಆಗಿರುವುದಾಗಿ ಬ್ಯಾಂಕ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಶಿವಕುಮಾರ್ ಅನಧಿಕೃತವಾಗಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾಣೆ ಆಗಿರುವ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಂಡ್ಮಿಲ್ ಕಂಪೆನಿಗಳಿಂದ ರೈತರಿಗೆ ವಂಚನೆ?: ತಾಲೂಕಿನ ನಾನಾ ಗ್ರಾಮಗಳಲ್ಲಿ ವಿಂಡ್ಮಿಲ್ (ವಿದ್ಯುತ್ ಉತ್ಪಾದನೆ) ನಿರ್ಮಾಣ ಆಗುತ್ತಿದ್ದು, ವಿದ್ಯುತ್ ಉತ್ಪಾದನೆ ವಿಂಡ್ಮೀಲ್ಗಳ ಸುತ್ತಲೂ ವಂಚನೆ ಆರೋಪ ಕೇಳಿ ಬರುತ್ತಿದೆ! ತಾಲೂಕಿನ ಸಮಾನ ಮನಸ್ಕ ರೈತ ಬಳಗ ಹಾಗು ರೈತ ವರ್ಗ ಹಾಗು ಶಾಸಕ ಬಸವರಾಜ ರಾಯರಡ್ಡಿ ರಾಜ್ಯ ಇಂಧನ ಸಚಿವ ಕೆ.ಜೆ ಜಾಜ್ರ್ ಅವರಿಗೆ ಈ ಕುರಿತು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.
ಎಲ್ಲೆಲ್ಲಿವೆ ವಿಂಡ್ಮಿಲ್: ಕುಕನೂರು ತಾಲೂಕಿನ ಬಿನ್ನಾಳ, ಚಿಕೇನಕೊಪ್ಪ, ಯರೇಹಂಚಿನಾಳ, ರಾಜೂರು, ದ್ಯಾಂಪೂರು, ಕುಕನೂರು, ಆಡೂರು, ಯಲಬುಗಾ ತಾಲೂಕಿನ ತೊಂಡಿಹಾಳ, ಬಂಡಿಹಾಳ, ಸಂಗನಹಾಳ ಸುತ್ತಮುತ್ತಲ ಗ್ರಾಮಗಳ ಜಮೀನುಗಳಲ್ಲಿ ದೊಡ್ಡ ದೊಡ್ಡ ಗಾತ್ರದ ವಿಂಡ್ಮಿಲ್ಗಳು ಸದ್ಯ ಸ್ಥಾಪನೆಯಾಗಿವೆ. ಸುಮಾರು ನೂರಕ್ಕೂ ಹೆಚ್ಚು ವಿಂಡ್ಮಿಲ್ಗಳ ಸ್ಥಾಪನೆ ಆಗಿದೆ ಹಾಗೂ ಇನ್ನೂ ವಿಂಡ್ಮಿಲ್ಗಳ ನಿರ್ಮಾಣ ಆಗುತ್ತಿವೆ. ರೈತರ ಜಮೀನುಗಳಿಗೆ ಹಣದ ಆಸೆ ತೋರಿಸಿ ರೈತರಿಂದ ದಲ್ಲಾಳಿಗಳು ಜಮೀನು ಖರೀದಿ ಮಾಡಿ ವಿಂಡ್ಮಿಲ್ಗಳ ಸ್ಥಾಪನೆ ಮಾಡಿರುವ ಆರೋಪಗಳು ಸದ್ಯ ಕೇಳಿ ಬರುತ್ತಿವೆ.