ಸೋಮವಾರ, ಮೇ 20, 2024
ಈ ಆಟಗಾರ ಕಣಕ್ಕಿಳಿದಾಗಿನಿಂದ RCB ಒಂದೇ ಒಂದು ಪಂದ್ಯವನ್ನು ಸೋತಿಲ್ಲ!-ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು-ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ..!-ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.!-ಪೋರ್ಷೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದು 2 ಮಂದಿ ಸಾವು: ಅಪ್ರಾಪ್ತ ಚಾಲಕನಿಗೆ ಅಪಘಾತದ ಕುರಿತು ಪ್ರಬಂಧ ಬರೆಯಲು ಕೋರ್ಟ್‌ನಿಂದ ಸೂಚನೆ-ಲೈಂಗಿಕ ದೌರ್ಜನ್ಯ ಪ್ರಕರಣ; ಹೆಚ್​ಡಿ ರೇವಣ್ಣಗೆ ಜಾಮೀನು ಮಂಜೂರು..!-ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!-ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!-ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಂಗಳೂರು :50 ಸಾವಿರ ಮೌಲ್ಯದ ಸೊತ್ತುಗಳಿರುವ ವ್ಯಾನಿಟಿ ಬ್ಯಾಗನ್ನು ವಾಪಸ್ ಮಹಿಳೆಗೆ ಕೊಟ್ಟು ಪ್ರಾಮಾಣಿಕತೆ ಮೆರೆದ ನಿರ್ವಾಹಕ!

Twitter
Facebook
LinkedIn
WhatsApp
ಮಂಗಳೂರು :50 ಸಾವಿರ ಮೌಲ್ಯದ ಸೊತ್ತುಗಳಿರುವ ವ್ಯಾನಿಟಿ ಬ್ಯಾಗನ್ನು ವಾಪಸ್ ಮಹಿಳೆಗೆ ಕೊಟ್ಟು ಪ್ರಾಮಾಣಿಕತೆ ಮೆರೆದ ನಿರ್ವಾಹಕ!

ಮಂಗಳೂರು : ಸಾವಿರಾರು ರೂಪಾಯಿ ಮೌಲ್ಯದ ಸೊತ್ತುಗಳಿರುವ ಬ್ಯಾಗನ್ನು ಪ್ರಯಾಣಿಕರೋರ್ವರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದು ಬಸ್ಸ್ ನಿರ್ವಾಹಕರು ಅದನ್ನು ಮರಳಿ ವಾರೀಸುದಾರರರಿಗೆ ಒಪ್ಪಿಸಿದ ವಿದ್ಯಮಾನ ಮಂಗಳೂರಿನಲ್ಲಿ ನಡೆದಿದೆ.

ದಿನಾಂಕ 19-11-2023ರಂದು ಉಡುಪಿಯಿಂದ ಮಂಗಳೂರಿಗೆ KA 20 AA 8296 ಮೂಕಾಂಬಿಕಾ ಬಸ್ಸಿನಲ್ಲಿ ಮಂಗಳೂರಿಗೆ ಬಂದಾಗ ವ್ಯಾನಿಟಿ ಬ್ಯಾಗನ್ನುವಾರಿಸುದಾರರು ಕಳಕೊಂಡಿದ್ದರು. ಬ್ಯಾಗಿನಲ್ಲಿ ನಗ ನಗದು ಸೇರಿ ಸುಮಾರು 50 ಸಾವಿರದ ಸೊತ್ತುಗಳಿದ್ದು ಸೊತ್ತು ಕಳಕೊಂಡ ಪ್ರಯಾಣಿಕರು ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ಕೂಡಲೇ ಕಾರ್ಯಪ್ರವರ್ತರಾದ ಪಾಂಡೇಶ್ವರ ಎಎಸ್‌ಐ ಶ್ರೀಧರ ಅವರು ಬಸ್‌ ಏಜಂಟ್ ಗಳನ್ನು ಸಂಪರ್ಕಿಸಿ ಕಳಕೊಂಡ ಸೊತ್ತಿನ ಬಗ್ಗೆ ಮಾಹಿತಿ ರವಾನೆ ಮಾಡಿದ್ದಾರೆ.  20-11-2023 ರಂದು ಸೋಮವಾರ ಬಸ್ಸಿನ ನಿರ್ವಾಹಕ ಜಯರಾಜ್ ಅವರು ಪಾಂಡೇಶ್ವರ ಠಾಣಾ ಎಎಸ್‌ಐ ಶ್ರೀಧರ ಅವರ ನೇತೃತ್ವದಲ್ಲಿ ಅತ್ಯಮೂಲ್ಯ ಸೊತ್ತುಗಳಿರುವ ವ್ಯಾನಿಟಿ ಬ್ಯಾಗನ್ನು ವಾರಿಸುದಾರರಿಗೆ ಹಸ್ತಾಂತ ಮಾಡಿ ಮಾನವೀಯತೆ ಮೆರೆದಿದ್ದಾರೆ.

ದಾಖಲೆ ನಿರ್ಮಿಸಿದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನ.19ರಂದು ವಿಮಾನ ಏರಿ ಇಳಿದವರು 7,399 ಪ್ರಯಾಣಿಕರು..!

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತೊಂದು ಹೊಸ ದಾಖಲೆಯನ್ನು ನಿರ್ಮಿಸಿದೆ.ನವೆಂಬರ್ 19ರಂದು 26 ವಿಮಾನಗಳ ಆಗಮನ ಮತ್ತು 25 ವಿಮಾನಗಳ ನಿರ್ಗಮನಗಳ ಮೂಲಕ 7399 ಪ್ರಯಾಣಿಕರು ಪ್ರಯಾಣಿಸಿ ಈ ದಾಖಲೆ ನಿರ್ಮಿಸಿದ್ದಾರೆ.

ಇದರಲ್ಲಿ 26 ಆಗಮನಗಳಲ್ಲಿ3,527  ಮತ್ತು ನಿರ್ಗಮನದಲ್ಲಿ 3,872 ಪ್ರಯಾಣಿಕರು ಸೇರಿದ್ದಾರೆ. ಇದು ಅಕ್ಟೋಬರ್ 31, 2020 ರ ವಾಣಿಜ್ಯ ಕಾರ್ಯಾಚರಣೆ ದಿನಾಂಕದಿಂದ (ಸಿಒಡಿ) ವಿಮಾನ ನಿಲ್ದಾಣವು ನಿರ್ವಹಿಸಿದ ಅತಿ ಹೆಚ್ಚು ದೈನಂದಿನ ಪ್ರಯಾಣಿಕರಾಗಿದ್ದಾರೆ. ನವೆಂಬರ್ 2021 ರ ನಂತರ ವಿಮಾನ ನಿಲ್ದಾಣವು 7,000 ಪ್ರಯಾಣಿಕರ ದೈನಂದಿನ ನಿರ್ವಹಣೆಯ ಗಡಿಯನ್ನು ದಾಟಿರುವುದು ಇದೇ ಮೊದಲಾಗಿದೆ. ವಿಮಾನಯಾನ ಸಂಸ್ಥೆಗಳಾದ  ಇಂಡಿಗೊ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ ಪ್ರೆಸ್  ಅತೀ ಹೆಚ್ಚು ಪ್ರಯಾಣಿಕರನ್ನು ನಿರ್ವಹಸಿದ ಕೀರ್ತಿಗೆ ಪಾತ್ರಗವಾಗಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಲೋಡ್ ಅಂಶವು 79% ಆಗಿದ್ದರೆ, ನಿರ್ಗಮಿಸುವ ವಿಮಾನಗಳಲ್ಲಿ ಇದು 91% ಕ್ಕೆ ಏರಿದೆ. ಮಂಗಳೂರು-ಪುಣೆ ವಲಯದಲ್ಲಿ ವಿಮಾನ ಪುನರಾರಂಭ ಮತ್ತು ನೆರೆಯ ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮವು ದಿನದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. 2021ರ ನವೆಂಬರ್ 27ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 7084 ಪ್ರಯಾಣಿಕರು ಈ #GatewayToGoodness ಬಳಸಿದ್ದರು. ಈ ಹಿಂದೆ ನವೆಂಬರ್ 6, 2021 ಮತ್ತು ನವೆಂಬರ್ 20, 2021 ರಂದು ಕ್ರಮವಾಗಿ 7168 ಪ್ರಯಾಣಿಕರು ಮತ್ತು 7304 ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿದ್ದಾರೆ. 2022-23ರ ಹಣಕಾಸು ವರ್ಷದಲ್ಲಿ ಈ ವಿಮಾನ ನಿಲ್ದಾಣವು ದಿನಕ್ಕೆ ಸರಾಸರಿ 5200 ಪ್ರಯಾಣಿಕರನ್ನು ನಿರ್ವಹಿಸಿದೆ. ಚಳಿಗಾಲದ ವೇಳಾಪಟ್ಟಿ ಜಾರಿಗೆ ಬಂದ ಅಕ್ಟೋಬರ್ 29 ರಿಂದ ವಿಮಾನ ಸಂಚಾರ ಚಲನೆಯಲ್ಲಿನ ಹೆಚ್ಚಳವು ಮೇಲಿನ ಸಂಖ್ಯೆಗಳಿಗೆ ಕಾರಣವಾಗಿದೆ. ಭಾರತದಾದ್ಯಂತ ಹಬ್ಬದ ಋತುವಿನಲ್ಲಿ ವ್ಯಾಪಾರ ಮತ್ತು ವಿರಾಮ ಪ್ರಯಾಣವು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ರಮೇಣ ಹೆಚ್ಚುತ್ತಿರುವ ಜನಸಂದಣಿಗೆ ಕಾರಣವಾಗಿದೆ. ಈ ವಿಮಾನ ನಿಲ್ದಾಣವು ಪ್ರಸ್ತುತ ಕ್ರಮವಾಗಿ ಒಂಬತ್ತು ದೇಶೀಯ (ಆರು ನೇರ ಸೇರಿದಂತೆ) ಮತ್ತು ಏಳು ಅಂತರರಾಷ್ಟ್ರೀಯ ಸ್ಥಳಗಳಿಗೆ ಸಂಪರ್ಕವನ್ನು ಒದಗಿಸುತ್ತದೆ ಎಂದು ವಿಮಾನ ನಿಲ್ದಾಣದ ಪತ್ರಿಕಾ ಪ್ರಕಟನೆ ಹೇಳಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ