ಕುತೂಹಲ ಮೂಡಿಸಲಿರುವ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥೆಯ ಮೂಲಕ ತೆರೆಗೆ ಅಪ್ಪಳಿಸಲಿದೆ ಮಂಗಳೂರಿನ ಚೈತ್ರಾ ಶೆಟ್ಟಿ ಮುಖ್ಯ ಪಾತ್ರದ ಚಲನಚಿತ್ರ ಸ೦ಕೇತ್
ಬೆಂಗಳೂರು: ಕನ್ನಡ ಚಲನಚಿತ್ರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿರುವ ಯುವ ತಂಡ ಹೊಸ ಚಲನಚಿತ್ರವನ್ನು ತೆರೆಗೆ ಅಪ್ಪಳಿಸಲು ಸಿದ್ಧವಾಗಿ ನಿಂತಿದೆ. ರಿವರ್ ಸ್ಟೀಮ್ ಪ್ರೊಡಕ್ಷನ್ ಅಡಿಯಲ್ಲಿ ಮೂಡಿ ಬಂದಿರುವ ಕನ್ನಡ ಚಲನಚಿತ್ರ ಸ೦ಕೇತ್ ವಿಭಿನ್ನ ಕುತೂಹಲ ಭರಿತ ಕಥಾ ಹ೦ದರವನ್ನು ಹೊಂದಿಕೊಂಡಿದೆ.
ಪ್ರತಿಭಾವಂತ ನಟಿ ಮಂಗಳೂರಿನ ಚೈತ್ರಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ ಈ ಚಲನಚಿತ್ರ ಹೊಸ ಕನ್ನಡ ಚಲನಚಿತ್ರ ರಂಗದಲ್ಲಿ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದೆ. ಉದಯೋನ್ಮುಖ ನಟ ವಿಕ್ಕಿ ರಾವ್ ನಟಿಸಿರುವ ಈ ಚಲನಚಿತ್ರವನ್ನು ಮಂಗಳೂರು ಮೂಲದ ಜೋಶ್ನಾ ಆಚಾರ್ಯ ನಿರ್ದೇಶಿಸಿದ್ದಾರೆ.
ರೂಪಶ್ರೀ ವಾರ್ಕಡಿ, ಮೋಹನ್ ಶೇನಿ ಗಮನಸೆಳೆಯುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜನವರಿ ತಿಂಗಳು ತೆರೆಗೆ ಅಪ್ಪಳಿಸಲು ಚಲನಚಿತ್ರ ಸಿದ್ಧವಾಗಿ ನಿಂತಿದೆ.
ಪ್ರತಿಭಾವಂತ ಕಲಾವಿದರು ಮನೋಜ್ಞವಾಗಿ ಅಭಿನಯಿಸಿರುವ ಕುತೂಹಲ ಭರಿತ ಈ ಚಲನಚಿತ್ರ ಕನ್ನಡ ಚಲನಚಿತ್ರ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡುವುದರಲ್ಲಿ ಸಂಶಯವಿಲ್ಲ ಎನ್ನಲಾಗುತ್ತಿದೆ.
ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ನಟಿ ಸಾಯಿಪಲ್ಲವಿ
ದಕ್ಷಿಣ ಭಾರತದ ಹೆಸರಾಂತ ನಟಿ ಸಾಯಿ ಪಲ್ಲವಿ ಉಡುಪಿ (Udupi) ಶ್ರೀ ಕೃಷ್ಣ ಮಠಕ್ಕೆ (Shrikrishna Math) ಭೇಟಿ ನೀಡಿದ್ದಾರೆ. ಖಾಸಗಿ ಕಾರ್ಯದ ನಿಮಿತ್ತ ಉಡುಪಿಗೆ ಬಂದಿರುವ ಅವರು, ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದೇವರ ದರ್ಶನ ಕೈಗೊಂಡಿದ್ದಾರೆ. ರಥಬೀದಿಯಲ್ಲಿರುವ ಕಾಣಿಯೂರು ಮಠಕ್ಕೆ ತೆರಳಿ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದಿದ್ದಾರೆ. ಮಠಕ್ಕೆ ಭೇಟಿ ನೀಡಿದ ಸಾಯಿ ಪಲ್ಲವಿ ಅವರನ್ನು ಶ್ರೀ ಕೃಷ್ಣ ಮಠದ ವತಿಯಿಂದ ಗೌರವಿಸಲಾಯಿತು.
ಸಾಯಿ ಪಲ್ಲವಿ (Sai pallavi) ಪ್ರತಿಭಾನ್ವಿತ ನಟಿ. ಆದರೆ ಕಳೆದೊಂದು ವರ್ಷದಿಂದ ಸಾಯಿ ಪಲ್ಲವಿ ಅಡ್ರೆಸ್ಗೆ ಇಲ್ಲ. ಗಾರ್ಗಿ ರಿಲೀಸ್ ಆಗಿ ವರ್ಷ ಉರುಳಿದೆ. ಬಳಿಕ ಒಂದೂ ಸಿನಿಮಾ ಬಂದಿಲ್ಲ. ಸಿನಿಮಾ ಘೋಷಣೆಯೂ ಆಗಿಲ್ಲ. ಏನಾಯ್ತು ಸಾಯಿ ಪಲ್ಲವಿ ಬದುಕಲ್ಲಿ?
ವಿರಾಟ ಪರ್ವಂ ಇದೊಂದು ಚಿತ್ರಕ್ಕಾಗಿ ಸಾಯಿಪಲ್ಲವಿ ನೀಡಿದ ಸಂದರ್ಶನ ಜೀವನದ ದಿಕ್ಕನ್ನೇ ಬದಲಾಯಿಬಿಡುತ್ತೆ ಅಂತ ಖುದ್ದು ಸಾಯಿಪಲ್ಲವಿ ಅಂದುಕೊಂಡಿರಲಿಲ್ಲ. ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾದ ವಿವಾದ (Controversy) ಬಗ್ಗೆ ತಮ್ಮದೊಂದು ಅಭಿಪ್ರಾಯ ಹೇಳಲು ಹೋಗಿ ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾದ ಸಾಯಿಪಲ್ಲವಿ ಈಗ ಸಿನಿಮಾ ರಂಗದಲ್ಲಿ ಹೆಸರೇ ಮರೆಯುವಂತೆ ಕಣ್ಮರೆಯಾಗುತ್ತಿರೋದು ವಿಷಾದ.
ನೈಜ ಅಭಿನಯ. ಸಹಜ ಸೌಂದರ್ಯ. ಅದ್ಭುತ ನೃತ್ಯಕಲೆಗೆ ಹೆಸರಾದ ಪ್ರತಿಭಾನ್ವಿತೆಗೆ ಈಗ ಸಿನಿಮಾ ಅವಕಾಶಗಳೇ ಇಲ್ಲ. ಗಾರ್ಗಿಯೇ ಕೊನೆ. ಮತ್ಯಾವ ಸಿನಿಮಾ ತೆರೆಕಂಡಿಲ್ಲ. ಕಾರ್ತಿಕೇಯನ್ ಜೊತೆ ಅನೌನ್ಸ್ ಆದ ಪ್ರಾಜೆಕ್ಟ್ ಯಾವ ಹಂತದಲ್ಲಿದೆಯೋ ಅದರ ಸುಳಿವೂ ಇಲ್ಲ. ಪರಿಣಾಮ ಪ್ರತಿಭಾನ್ವಿತೆಯ ಕೈ ಖಾಲಿ ಖಾಲಿ.
ಕಳೆದ ವರ್ಷ ಸಾಯಿಪಲ್ಲವಿಯ ಮೇಲೆ ಬಂದ ಅಪವಾದಗಳು ಒಂದೆರಡಲ್ಲ. ನಾಗಚೈತನ್ಯ ಜೊತೆ ಲವ್ಸ್ಟೋರಿ ಚಿತ್ರ ಮಾಡ್ತಿರುವಾಗ ಸ್ಯಾಮ್ ನಾಗ್ ಡಿವೋರ್ಸ್ ಮುನ್ನಲೆಗೆ ಬಂತು. ವಿಪರ್ಯಾಸ ಅಂದ್ರೆ ನಾಗ್ ಜೊತೆ ಸಾಯಿಪಲ್ಲವಿ ಸಲುಗೆಯಿಂದ ಕಾಣಿಸ್ಕೊಂಡಿದ್ದಕ್ಕೆ ಇದೇ ಪ್ರೇಮಂ ಬೆಡಗಿಯ ಮೇಲೆ ಗೂಬೆ ಕೂರಿಸಲಾಯಿತು. ಈ ಎರಡು ಹೊಡೆತದಿಂದ ಸಾಯಿಪಲ್ಲವಿ ಸಿನಿಮಾ ರಂಗದಿಂದ ಒಳ್ಳೆಯ ನೀತಿಪಾಠ ಕಲಿತಿದ್ದಾರೆ. ಹೀಗಾಗೇ ಸಾಯಿಪಲ್ಲವಿ ಕರಿಯರ್ ಆಲ್ಮೋಸ್ಟ್ ಮುಗಿಯುವ ಹಂತಕ್ಕೆ ಬಂದು ತಲುಪಿದೆ.
ಕುಟುಂಬಸ್ಥರೂ ಕೂಡ ಸಿನಿಮಾ ಸಾಕು ಮದುವೆಯಾಗು ಎಂಬ ಸಲಹೆ ಕೊಡುತ್ತಿದ್ದಾರಂತೆ. ಶೀಘ್ರದಲ್ಲೇ ಸಾಯಿಪಲ್ಲವಿ ಬಣ್ಣಕ್ಕೆ ವಿದಾಯ ಹೇಳಿದ್ರೂ ಆಶ್ಚರ್ಯಪಡಬೇಕಿಲ್ಲ ಎನ್ನುತ್ತಿದೆ ಟಾಲಿವುಡ್ ಗಲ್ಲಿ.