ಮಾರುಕಟ್ಟೆಯಲ್ಲಿ ನಿಂಬೆ ಆವಕ ಕಡಿಮೆ ಆಗಿದ್ದರಿಂದ ಸಾಮಾನ್ಯಕ್ಕಿಂತ ದರ ಹೆಚ್ಚಾಗಿದೆ. ಈ ಬಾರಿ ಬರ ಗಾಲದ ಹೊಡೆತ ಬಿದ್ದಿದ್ದರಿಂದ ನಿಂಬೆ ಹಣ್ಣಿನ ಉತ್ಪಾದನೆ ಅಷ್ಟೊಂದು ಆಗಿಲ್ಲ. ನೀರಿಲ್ಲದೆ ಇಳುವರಿ ಕುಂಠಿತವಾಗಿದೆ. ಈ ಹಿನ್ನೆಲೆಯಲ್ಲಿ ಮಾರು ಕಟ್ಟೆಯಲ್ಲಿ ಬೇಡಿಕೆ ಇರುವಷ್ಟು ನಿಂಬೆ ಹಣ್ಣು ಪೂರೈಕೆ ಆಗುತ್ತಿಲ್ಲ.