ಮಂಗಳವಾರ, ಅಕ್ಟೋಬರ್ 3, 2023
Galaxy S23 FE: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಎಫ್​ಇ ಸ್ಮಾರ್ಟ್​ಫೋನ್ ಅ.4 ರಂದು ಬಿಡುಗಡೆ!-ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!-ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ; ಸಿಪಿ ಯೋಗೇಶ್ವರ್ ಬಾಂಬ್-ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!-ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!-ಜಿಪಿಎಸ್ ಮ್ಯಾಪ್ ನೋಡಿ ಕಾರನ್ನು ಚಲಿಸುವುತ್ತಿರುವಾಗ ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು ; ಮೂವರು ಪಾರು!-ಹೃದಯ ವಿದ್ರಾವಕ ಘಟನೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ 6 ಮಂದಿ ಹತ್ಯೆ-ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!-ಪಿಯುಸಿಯಲ್ಲಿ ಅಂಕ ಕಡಿಮೆ ಬಂತೆಂದು ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ ; ರಕ್ಷಣೆಗೆ ಧಾವಿಸಿದ ಯುವಕ - ಇಲ್ಲಿದೆ ವಿಡಿಯೋ-ಬರ್ತ್‌ಡೇ ಪಾರ್ಟಿಯಲ್ಲಿ ಡೆಕೋರೇಷನ್‌ಗೆ ಹಾಕಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಣಿಪುರದಲ್ಲಿ ಆಘಾತಕಾರಿ ಕೃತ್ಯ: ಮನೆಗೆ ನುಗ್ಗಿ ಯೋಧನ ಅಪಹರಣ, ಹತ್ಯೆ

Twitter
Facebook
LinkedIn
WhatsApp
ಮಣಿಪುರದಲ್ಲಿ ಆಘಾತಕಾರಿ ಕೃತ್ಯ: ಮನೆಗೆ ನುಗ್ಗಿ ಯೋಧನ ಅಪಹರಣ, ಹತ್ಯೆ

ಇಂಫಾಲ: ರಜೆ ಮೇಲೆ ತೆರಳಿದ್ದ ಸೇನಾ ಯೋಧನನ್ನು ಅವರ ಮನೆಯಿಂದ ಅಪಹರಿಸಿ ಹತ್ಯೆ ಮಾಡಿದ ಘಟನೆ ಮಣಿಪುರದಲ್ಲಿ ನಡೆದಿದೆ. ಇಂಫಾಲ ಪಶ್ಚಿಮ ಜಿಲ್ಲೆಯ ನಿವಾಸಿಯಾಗಿರುವ ಸಿಪಾಯಿ ಸೆರ್ಟೊ ತಂಗ್‌ಥಾಂಗ್ ಕೋಮ್, ತಮ್ಮ ಊರಿಗೆ ಹೋಗಿದ್ದರು. ಆದರೆ ಅವರನ್ನು ಶನಿವಾರ ಅವರ ಮನೆಯಿಂದ ಅಪಹರಿಸಲಾಗಿತ್ತು. ಭಾನುವಾರ ಬೆಳಿಗ್ಗೆ ಅವರ ಮೃತದೇಹ ಪತ್ತೆಯಾಗಿದೆ.

ಶನಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಸೆರ್ಟೊ ಮನೆಗೆ ನುಗ್ಗಿದ್ದ ಸಶಸ್ತ್ರಧಾರಿ ಅಪರಿಚಿತ ವ್ಯಕ್ತಿಗಳು, ಅವರನ್ನು ಅಪಹರಿಸಿದ್ದರು. ಇಡೀ ಘಟನೆಗೆ ಏಕೈಕ ಪ್ರತ್ಯಕ್ಷದರ್ಶಿಯಾಗಿರುವ ಸೆರ್ಟೊ ಅವರ 10 ವರ್ಷದ ಮಗ, ಘಟನೆಯ ಬಗ್ಗೆ ಪೊಲೀಸರಿಗೆ ವಿವರ ನೀಡಿದ್ದಾನೆ. ಅಪ್ಪ ಹಾಗೂ ತಾನು ಮನೆಯ ಮುಖದ್ವಾರದ ಬಳಿ ಕೆಲಸ ಮಾಡುತ್ತಿದ್ದಾಗ ಮೂವರು ವ್ಯಕ್ತಿಗಳು ಮನೆಗೆ ಪ್ರವೇಶಿಸಿದ್ದರು ಎಂದು ತಿಳಿಸಿದ್ದಾನೆ.

ಶನಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಸೆರ್ಟೊ ಮನೆಗೆ ನುಗ್ಗಿದ್ದ ಸಶಸ್ತ್ರಧಾರಿ ಅಪರಿಚಿತ ವ್ಯಕ್ತಿಗಳು, ಅವರನ್ನು ಅಪಹರಿಸಿದ್ದರು. ಇಡೀ ಘಟನೆಗೆ ಏಕೈಕ ಪ್ರತ್ಯಕ್ಷದರ್ಶಿಯಾಗಿರುವ ಸೆರ್ಟೊ ಅವರ 10 ವರ್ಷದ ಮಗ, ಘಟನೆಯ ಬಗ್ಗೆ ಪೊಲೀಸರಿಗೆ ವಿವರ ನೀಡಿದ್ದಾನೆ. ಅಪ್ಪ ಹಾಗೂ ತಾನು ಮನೆಯ ಮುಖದ್ವಾರದ ಬಳಿ ಕೆಲಸ ಮಾಡುತ್ತಿದ್ದಾಗ ಮೂವರು ವ್ಯಕ್ತಿಗಳು ಮನೆಗೆ ಪ್ರವೇಶಿಸಿದ್ದರು ಎಂದು ತಿಳಿಸಿದ್ದಾನೆ.

ಇಂಫಾಲ ಪೂರ್ವ ಜಿಲ್ಲೆಯ ಮೊಂಗ್ಜಾಮ್‌ನ ಪೂರ್ವ ಭಾಗದಲ್ಲಿರುವ ಖುನಿಂಗ್ತೆಕ್ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ 9.30ರ ಸುಮಾರಿಗೆ ಯೋಧ ಸೆರ್ಟೊ ಅವರ ಶವ ಪತ್ತೆಯಾಗಿದೆ. ಸೆರ್ಟೊ ಅವರ ಸಹೋದರ ಮತ್ತು ಬಾಮೈದ ಮೃತನ ಗುರುತನ್ನು ಖಚಿತಪಡಿಸಿದ್ದಾರೆ. ಸೈನಿಕನ ತಲೆಯಲ್ಲಿ ಒಂದು ಗುಂಡು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ. ಸಿಪಾಯಿ ಸೆರ್ಟೊ ಅವರು ಪತ್ನಿ, ಮಗಳು ಮತ್ತು ಮಗನನ್ನು ಅಗಲಿದ್ದಾರೆ.

“ಸಿಪಾಯಿ ಸೆರ್ಟೊ ತಂಗ್‌ಥಾಂಗ್ ಕೋಮ್ ಅವರ ಹತ್ಯೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಈ ಸಂಕಷ್ಟದ ಸಮಯದಲ್ಲಿ ಅವರ ಕುಟುಂಬದ ಬೆಂಬಲಕ್ಕೆ ನಿಲ್ಲುತ್ತೇವೆ” ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

ಕುಟುಂಬದವರ ಇಚ್ಛೆಯಂತೆ ಸಿಪಾಯಿ ಸೆರ್ಟೊ ಅವರ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಅವರ ಕುಟುಂಬಕ್ಕೆ ಸಾಧ್ಯವಾದ ಎಲ್ಲಾ ರೀತಿಗಳಲ್ಲಿಯೂ ಸಹಾಯ ಮಾಡಲು ತಂಡವೊಂದನ್ನು ಸೇನೆ ಕಳುಹಿಸಿರುವುದಾಗಿ ಹೇಳಿದೆ.

ಸಿಪಾಯಿ ಸೆರ್ಟೊ ಅವರು ತಮ್ಮ ರಾಜ್ಯದಲ್ಲಿಯೇ ಲೀಮಾಖೊಂಗ್ ಸೇನಾ ನೆಲೆಯಲ್ಲಿ 302 ಕಂಪನಿಯಲ್ಲಿ ಕೆಲಸಕ್ಕೆ ನಿಯೋಜಿತರಾಗಿದ್ದರು. ಸೆರ್ಟೊ ಅವರ ಕೊಲೆ ಹಿಂದಿರುವ ಆರೋಪಿಗಳ ಗುರುತು ಹಾಗೂ ಕೊಲೆ ಉದ್ದೇಶ ಗೊತ್ತಾಗಿಲ್ಲ.

ಸಿಗದ ಹಂತಕರ ಸುಳಿವು

ಭಾನುವಾರ ಬೆಳಿಗ್ಗೆವರೆಗೂ ಅಪಹರಣಕಾರರಿಂದ ಕುಟುಂಬದವರಿಗೆ ಯಾವುದೇ ಫೋನ್ ಕರೆ ಬಂದಿರಲಿಲ್ಲ. ಭಾನುವಾರ ಬೆಳಿಗ್ಗೆ ಅವರ ಮನೆಯಿಂದ ಸುಮಾರು 15 ಕಿಮೀ ದೂರದಲ್ಲಿ ಇರುವ ಸಂಗೊಲ್ಮಾಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ದೇಹವೊಂದು ಬಿದ್ದಿರುವುದನ್ನು ಸ್ಥಳೀಯರು ಮತ್ತು ಭದ್ರತಾ ಪಡೆಗಳು ಗಮನಿಸಿದ್ದರು. ಈ ಕೊಲೆ ಕೂಡ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದ್ದೇ ಅಥವಾ ಬೇರೆ ಯಾವುದಾದರೂ ವೈಷಮ್ಯ ಇತ್ತೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಮೈತೇಯಿ ಮತ್ತು ಕುಕಿ ಬುಡಕಟ್ಟು ಸಮುದಾಯಗಳ ನಡುವೆ ನಡೆಯುತ್ತಿರುವ ಜನಾಂಗೀಯ ಸಂಘರ್ಷದಲ್ಲಿ, ಕಳೆದ ಒಂದು ವಾರದಲ್ಲಿ ಸೇವೆಯಲ್ಲಿರುವ ಪೊಲೀಸ್ ಅಧಿಕಾರಿ ಅಥವಾ ಭದ್ರತಾ ಪಡೆ ಅಧಿಕಾರಿ ಹತ್ಯೆಯ ಎರಡನೆಯ ಪ್ರಕರಣ ಇದಾಗಿದೆ.

ಚುರಾಚಂದಪುರದ ಚಿಂಗ್‌ಫೀ ಹೊರಠಾಣೆಯಲ್ಲಿ ಸೆ 13ರಂದು, ಕರ್ತವ್ಯ ನಿರತರಾಗಿದ್ದ ಸಬ್ ಇನ್‌ಸ್ಪೆಕ್ಟರ್ ಒಂಗ್‌ಮಾಂಗ್ ಹೋಕಿಪ್ (35) ಅವರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ