ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಭೂಮಿ ಮತ್ತು ಚಂದ್ರನ ಅದ್ಭುತ ಚಿತ್ರ ಸೆರೆಹಿಡಿದ Aditya- L1

Twitter
Facebook
LinkedIn
WhatsApp
ಭೂಮಿ ಮತ್ತು ಚಂದ್ರನ ಅದ್ಭುತ ಚಿತ್ರ ಸೆರೆಹಿಡಿದ Aditya- L1

ದೆಹಲಿ ಸೆಪ್ಟೆಂಬರ್ 07: ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ನೌಕೆ, ಆದಿತ್ಯ-ಎಲ್ 1 ( Aditya-L1), ಗುರುವಾರ ಭೂಮಿಯಿಂದ 1.5 ಮಿಲಿಯನ್ ಕಿಮೀ ದೂರದಲ್ಲಿರುವ ತನ್ನ ಗಮ್ಯಸ್ಥಾನವಾದ ಲಗ್ರಾಂಜಿಯನ್ ಪಾಯಿಂಟ್ (L1) ಗೆ ಹೋಗುತ್ತಿರುವಾಗ ಭೂಮಿ (Earth) ಮತ್ತು ಚಂದ್ರ (Chandra) ಫೋಟೊ ಕ್ಲಿಕ್ ಮಾಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಟ್ವಿಟರ್‌ನಲ್ಲಿ ಆದಿತ್ಯ-ಎಲ್ 1 ಕ್ಲಿಕ್ ಮಾಡಿದ ಸೆಲ್ಫಿಯೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದೆ.

ಸೆಪ್ಟೆಂಬರ್ 2 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಮಿಷನ್ ಉಡಾವಣೆಯಾಗಿತ್ತು.

ಬಾಹ್ಯಾಕಾಶ ನೌಕೆಯು ಈಗಾಗಲೇ ಎರಡು ಭೂಮಿಗೆ ಸುತ್ತುವರಿದ ಕಕ್ಷೆಯನ್ನು ಪೂರ್ಣಗೊಳಿಸಿದೆ ಮತ್ತು ಲ್ಯಾಗ್ರೇಂಜ್ ಪಾಯಿಂಟ್ L1 ಕಡೆಗೆ ವರ್ಗಾವಣೆ ಕಕ್ಷೆಯಲ್ಲಿ ಇರಿಸುವ ಮೊದಲು ಇನ್ನೆರಡನ್ನು ನಿರ್ವಹಿಸುತ್ತದೆ. ಆದಿತ್ಯ-L1 125 ದಿನಗಳ ನಂತರ L1 ಪಾಯಿಂಟ್‌ನಲ್ಲಿ ಉದ್ದೇಶಿತ ಕಕ್ಷೆಗೆ ಆಗಮಿಸುವ ನಿರೀಕ್ಷೆಯಿದೆ.

ಆಗಸ್ಟ್ ಅಂತ್ಯದಲ್ಲಿ ಭಾರತ ಚಂದ್ರಯಾನದ ವಿಕ್ರಮ್ ಲ್ಯಾಂಡರ್ ದಕ್ಷಿಣ ಧ್ರುವಕ್ಕೆ ಇಳಿದ ನಂತರ ಸೌರಯಾನ ನಡೆಸುವ ಮೂಲಕ ಒಂದು ತಿಂಗಳೊಳಗೆ ಇಸ್ರೋ ತನ್ನ ಎರಡನೇ ಸಾಧನೆಯನ್ನು ಮಾಡಿದೆ.

ಭಾರತದ ಇತರ ಚಾಲ್ತಿಯಲ್ಲಿರುವ ಯೋಜನೆಗಳು ಮಾನವ ಬಾಹ್ಯಾಕಾಶ ಯಾನ ಕಾರ್ಯಕ್ರಮವನ್ನು ಒಳಗೊಂಡಿವ. ಇದು ಗಗನಯಾತ್ರಿಗಳನ್ನು ಮೊದಲ ಬಾರಿಗೆ 2025 ರ ವೇಳೆಗೆ ಕಕ್ಷೆಗೆ ಸೇರಿಸುವ ಗುರಿಯನ್ನು ಹೊಂದಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.

ಜಿ20 ಶೃಂಗಸಭೆ: ಪ್ರವಾಸಿ ಸ್ಮಾರ್ಟ್​ ಕಾರ್ಡ್​ ಬಿಡುಗಡೆ ಮಾಡಿದ ದೆಹಲಿ ಮೆಟ್ರೋ

ದೆಹಲಿ ಮೆಟ್ರೋ ಕೂಡ ಜಿ20ಗೆ ಸಂಬಂಧಿಸಿದ ಸಿದ್ಧತೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಭಾರತವು ಸೆಪ್ಟೆಂಬರ್ 9 ಹಾಗೂ 10ರಂದು ದೆಹಲಿಯಲ್ಲಿ ಜಿ20 ಶೃಂಗಸಭೆಯನ್ನು ಆಯೋಜಿಸುತ್ತಿದೆ. ಭದ್ರತೆಯ ದೃಷ್ಟಿಯಿಂದ ದೆಹಲಿಯನ್ನು ಅಜೇಯ ಕೋಟೆಯಾಗಿ ಪರಿವರ್ತಿಸಲಾಗುತ್ತಿದೆ ಮತ್ತೊಂದೆಡೆ, ವಿಶ್ವದ ಅತಿದೊಡ್ಡ ಮೆಟ್ರೋ ನೆಟ್‌ವರ್ಕ್‌ಗಳಲ್ಲಿ ಒಂದಾದ ದೆಹಲಿ ಮೆಟ್ರೋ, G-20 ಪ್ರತಿನಿಧಿಗಳು, ಅಂತಾರಾರಾಷ್ಟ್ರೀಯ ಅತಿಥಿಗಳು ಮತ್ತು ಸಾಮಾನ್ಯ ಪ್ರಯಾಣಿಕರಿಗೆ ಅತ್ಯುತ್ತಮ ಪ್ರವಾಸಿ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡುತ್ತಿದೆ.

ಈ ಕಾರ್ಡ್ ಮೂಲಕ ಪ್ರಯಾಣಿಕರು ದೆಹಲಿಯಾದ್ಯಂತ ಅನಿಯಮಿತವಾಗಿ ಪ್ರಯಾಣಿಸಬಹುದು. ಪ್ರವಾಸಿಗರು ಈ ಕಾರ್ಡ್ ಅನ್ನು ರಾಜಧಾನಿಯ ವಿವಿಧ ಮೆಟ್ರೋ ನಿಲ್ದಾಣಗಳಿಂದ 10 ದಿನಗಳವರೆಗೆ ಖರೀದಿಸಬಹುದು ಮತ್ತು ಕಡಿಮೆ ಹಣದಲ್ಲಿ ಮೆಟ್ರೋದಲ್ಲಿ ಇಡೀ ದೆಹಲಿಯನ್ನು ಸುತ್ತಾಡಬಹುದು.

ಸ್ಮಾರ್ಟ್​ ಕಾರ್ಡ್​ಗಳಲ್ಲಿ ಎರಡು ವಿಧ, ಒಂದು ದಿನದ ಮಾನ್ಯತೆ ಮತ್ತು ಮೂರು ದಿನಗಳ ಮಾನ್ಯತೆ ಹೊಂದಿರುವ ಪ್ರವಾಸಿ ಸ್ಮಾರ್ಟ್ ಕಾರ್ಡ್‌ಗಳಿವೆ. ಒಂದು ದಿನದ ವ್ಯಾಲಿಡಿಟಿಯ ಟೂರಿಸ್ಟ್ ಸ್ಮಾರ್ಟ್ ಕಾರ್ಡ್ ಬೆಲೆ 200 ರೂಪಾಯಿ ಆಗಿದ್ದರೆ, ಮೂರು ದಿನಗಳ ವ್ಯಾಲಿಡಿಟಿಯ ಟೂರಿಸ್ಟ್ ಸ್ಮಾರ್ಟ್ ಕಾರ್ಡ್ 500 ರೂಪಾಯಿಗೆ ಲಭ್ಯವಿರುತ್ತದೆ. ಇದು 50 ರೂ ಮರುಪಾವತಿಸಬಹುದಾದ ಭದ್ರತಾ ಠೇವಣಿ ಒಳಗೊಂಡಿದೆ.

ಈ ಮೆಟ್ರೋ ನಿಲ್ದಾಣಗಳಲ್ಲಿ ಸ್ಮಾರ್ಟ್ ಕಾರ್ಡ್‌ಗಳು ಲಭ್ಯವಿರುತ್ತವೆ ಪ್ರವಾಸಿ ಸ್ಮಾರ್ಟ್ ಕಾರ್ಡ್ ಪಟೇಲ್ ಚೌಕ್, ಕೇಂದ್ರ ಸಚಿವಾಲಯ, ಉದ್ಯೋಗ ಭವನ, ಲೋಕ ಕಲ್ಯಾಣ ಮಾರ್ಗ, ಜೋರ್ ಬಾಗ್, ದೆಹಲಿ ಹಾತ್ INA, ಕಾಶ್ಮೀರ ಗೇಟ್, ಚಾಂದಿನಿ ಚೌಕ್, ಚಾವ್ರಿ ಬಜಾರ್, ನವದೆಹಲಿ, ರಾಜೀವ್ ಚೌಕ್, ಕೆಂಪು ಕೋಟೆ, ಜಾಮಾ ಮಸೀದಿ, ದೆಹಲಿ ಗೇಟ್, ಐಟಿ, ಮಂಡಿ ಹೌಸ್, ಜನಪಥ್, ಖಾನ್ ಮಾರ್ಕೆಟ್, JLN ಸ್ಟೇಡಿಯಂ, ಜಂಗ್‌ಪುರ, ಲಜಪತ್ ನಗರ, ಬರಖಾಂಬ ರಸ್ತೆ, ರಾಮಕೃಷ್ಣ ಆಶ್ರಮ ಮಾರ್ಗ, ಝಂಡೆವಾಲನ್, ಸುಪ್ರೀಂ ಕೋರ್ಟ್, ಇಂದ್ರಪ್ರಸ್ಥ, ಅಕ್ಷರಧಾಮ, ಟರ್ಮಿನಲ್ 1 IGI ವಿಮಾನ ನಿಲ್ದಾಣ, ಕರೋಲ್ ಬಾಗ್ , ಸರೋಜಿನಿ ನಗರ, ಛತ್ತರ್‌ಪುರ, ಕುತುಬ್ ಮಿನಾರ್, ಟಿಕೆಟ್‌ಗಳು ಹೌಜ್ ಖಾಸ್, ನೆಹರು ಪ್ಲೇಸ್, ಕಲ್ಕಾಜಿ ದೇವಸ್ಥಾನದ ಕೌಂಟರ್​ನಲ್ಲಿ ಲಭ್ಯವಿರಲಿದೆ.

ಮೆಟ್ರೋ ಸ್ಮಾರ್ಟ್ ಕಾರ್ಡ್‌ನ ಪ್ರಯೋಜನಗಳು ಮೊದಲ ಮೆಟ್ರೋ ನಿಲ್ದಾಣದಿಂದ ಕೊನೆಯ ಮೆಟ್ರೋ ಸೇವೆಯವರೆಗೆ ಪ್ರಯಾಣಿಕರು ಯಾವುದೇ ಅಡೆತಡೆಯಿಲ್ಲದೆ ಪ್ರಯಾಣಿಸಲು ಸಾಧ್ಯವಾಗುವುದು ಈ ಟೂರಿಸ್ಟ್ ಕಾರ್ಡ್‌ನ ಪ್ರಯೋಜನವಾಗಿದೆ.

ಯಾವುದೇ ನಿಲ್ದಾಣದಲ್ಲಿ ಪ್ರವೇಶ/ನಿರ್ಗಮನ, ವ್ಯವಸ್ಥೆಯಲ್ಲಿ ವಿಸ್ತೃತ ತಂಗುವಿಕೆ, ದೂರದ ಪ್ರಯಾಣ ಇತ್ಯಾದಿಗಳಿಗಾಗಿ ಪ್ರವಾಸಿ ಸ್ಮಾರ್ಟ್ ಕಾರ್ಡ್‌ಗೆ ಯಾವುದೇ ದಂಡ ಅಥವಾ ಹೆಚ್ಚುವರಿ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist