ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Talakaveri : ಪರಿಸರ ಸೂಕ್ಷ್ಮ ಭಾಗಮಂಡಲ- ತಲಕಾವೇರಿಯಲ್ಲಿ ಎಗ್ಗಿಲ್ಲದೆ ಸಾಗಿದೆ ಅನಧಿಕೃತ ಕಟ್ಟಡಗಳ ನಿರ್ಮಾಣ. ಅಪಾಯದಲ್ಲಿ ಇದೆಯೇ ಈ ಪ್ರದೇಶ?

Twitter
Facebook
LinkedIn
WhatsApp
Talakaveri : ಪರಿಸರ ಸೂಕ್ಷ್ಮ ಭಾಗಮಂಡಲ- ತಲಕಾವೇರಿಯಲ್ಲಿ ಎಗ್ಗಿಲ್ಲದೆ ಸಾಗಿದೆ ಅನಧಿಕೃತ ಕಟ್ಟಡಗಳ ನಿರ್ಮಾಣ. ಅಪಾಯದಲ್ಲಿ ಇದೆಯೇ ಈ ಪ್ರದೇಶ?

Talakaveri : 

ಮಡಿಕೇರಿ: ದೇಶದ ಬಹುದೊಡ್ಡ ಸೂಕ್ಷ್ಮ ಪ್ರದೇಶ ಎಂದು ಪರಿಗಣಿತವಾಗಿರುವ ಜೀವನದಿ ಕಾವೇರಿಯ ಮುಖ್ಯ ಉದ್ಭವದ ಸ್ಥಳವಾಗಿರುವ ಭಾಗಮಂಡಲ ತಲಕಾವೇರಿ (Talakaveri) ಪ್ರದೇಶದಲ್ಲಿ ಅನಧಿಕೃತ ವಾಣಿಜ್ಯದ ಕಟ್ಟಡಗಳು ನಿರ್ಮಾಣಗೊಂಡಿರುವುದು ಈ ಪ್ರದೇಶದ ಪರಿಸರದ ಮೇಲೆ ವ್ಯಾಪಕ ಪರಿಣಾಮ ಬೀರಬಹುದು ಎಂದು ಪರಿಸರ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಗುಡ್ಡಗಳನ್ನು ಕೊರೆದು ವಾಣಿಜ್ಯ ಕಟ್ಟಡಗಳನ್ನು ಹೆಜ್ಜೆ ಹೆಜ್ಜೆಗೆ ನಿರ್ಮಾಣ ಮಾಡಲಾಗಿದ್ದು ಇಲ್ಲಿ ಸೂಕ್ಷ್ಮ ಪರಿಸರ ವಲಯದ ಪ್ರಮುಖ ಕಾನೂನು ಹಾಗೂ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಮೊದಲು ಈ ಪ್ರದೇಶದಲ್ಲಿ ಪ್ರಾಕೃತಿಕ ವಿಕೋಪಗಳು ನಡೆದಿದ್ದು, ಇದು ಸೂಕ್ಷ್ಮ ಪ್ರದೇಶ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಭಾಗಮಂಡಲದಿಂದ ತಲಕಾವೇರಿ ಪ್ರದೇಶ ದಲ್ಲಿ ಬಹುದೊಡ್ಡ ವಾಣಿಜ್ಯ ಕಟ್ಟಡಗಳು ತಲೆಯೆತ್ತಿರುವುದು ಈ ಪ್ರದೇಶ ಪರಿಸರದ ಬಹುದೊಡ್ಡ ಅಪಾಯಗಳನ್ನು ಎದುರಿಸುವುದರಲ್ಲಿ ಎರಡು ಮಾತಿಲ್ಲ ಎಂದು ಸ್ಥಳೀಯರು ಸಹ ಅಭಿಪ್ರಾಯ ಪಡುತ್ತಿದ್ದಾರೆ. ಸರ್ಕಾರ ಈ ವಿಷಯದ ಬಗ್ಗೆ ಕೂಲಂಕುಶವಾಗಿ ಗಮನ ಹರಿಸಬೇಕು ಎಂದು ಸ್ಥಳೀಯರು ಸಹ ಅಗ್ರಹ ವ್ಯಕ್ತಪಡಿಸಿದ್ದಾರೆ.

ಪತ್ನಿಯ ಪ್ರಿಯಕರನನ್ನು ಕೊಲೆಗೈದ ಪತಿ

ಕೋಲಾರ ಅ.31: ಪತಿಯನ್ನು ಬಿಟ್ಟು ಬಂದು ಹಳೆ ಪ್ರಿಯಕರನೊಂದಿಗೆ ಸುಖವಾಗಿ ಜೀವನ ಸಾಗಿಸಬೇಕು ಎಂದುಕೊಂಡಿದ್ದ ಮಹಿಳೆಯ ಬಾಳಲ್ಲಿ ಅದೊಂದು ಘನಘೋರ ಘಟನೆ ನಡೆದಿದೆ. ಪತ್ನಿಯು ಪ್ರಿಯಕರನೊಂದಿಗೆ ಇದ್ದಿದ್ದನ್ನು ಸಹಿಸಲಾಗದೆ ಪತಿ ಹಾಗೂ ಪತ್ನಿಯ ತವರು ಮನೆಯವರು ಪ್ರಿಯಕರನನ್ನು ಕೊಲೆ ಮಾಡಿರುವ ಘಟನೆ ಕೋಲಾರ (Kolar) ಜಿಲ್ಲೆ ಬಂಗಾರಪೇಟೆ (Bangarpete) ಪಟ್ಟಣದಲ್ಲಿ ನಡೆದಿದೆ. ದಂಪತಿ ಎರಡು ವರ್ಷ ಸಂಸಾರ ಮಾಡಿದ್ದರು.

ಆದರೆ ಸಂಸಾರ ಯಾಕೋ ಸರಿಹೋಗಿಲ್ಲ ಎಂದು ಪತ್ನಿ ಪತಿಯನ್ನು ಬಿಟ್ಟು, ಒಂಟಿಯಾಗಿದ್ದ ತನ್ನ ಹಳೆ ಪ್ರೇಮಿಯೊಂದಿಗೆ ವಾಸವಾಗಿದ್ದಳು. ಆದರೆ ಇದನ್ನು ಸಹಿಸದ ಪತಿ ಹಳೆ ಪ್ರಿಯಕರನನ್ನೇ ಕೊಲೆ ಮಾಡಿದ್ದಾನೆ. 

ಅಕ್ಟೋಬರ್​15 ರಂದು ಬಂಗಾರಪೇಟೆ ಕೆಂಪೇಗೌಡ ಸರ್ಕಲ್​ನಲ್ಲಿ ಬೆಂಗಳುರಿಗೆ ಹೋಗಲು ನಿಂತಿದ್ದ ಹೇಮಂತ್​ ಕುಮಾರ್​ನನ್ನು ಇನೋವಾ ಕಾರ್​ನಲ್ಲಿ ಕಿಡ್ನಾಪ್​ ಮಾಡಿ, ನಂತರ ಕೊಲೆ ಮಾಡಿ ಯಲಹಂಕ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬಿಸಾಡಿ ಹೋಗಿದ್ದರು. ಸದ್ಯ ಹೇಮಂತ್​ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ಬಯಲಾಗಿದೆ. 

ಸದ್ಯ ಪೊಲೀಸರು ಆಶಾ ಪತಿ ಭರತ್​, ಆಶಾ ತಾಯಿ ಪುಷ್ಪ, ಆಶಾ ತಮ್ಮ ಶ್ರೀಕಾಂತ್​, ಹಾಗೂ ಭರತ್ ಸ್ನೇಹಿತರಾದ ಮಹಾತ್ಮಗಾಂಧಿ, ಸುದರ್ಶನ್​, ಆನಂದ್, ಗಿರೀಶ್​, ಪ್ರಶಾಂತ್​ ಸೇರಿ ಒಟ್ಟು 8 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಒಟ್ಟಾರೆಯಾಗಿ ಇಲ್ಲಿ ಇಷ್ಟವಿಲ್ಲದವರ ಜೊತೆಗೆ ಬದುಕಲಾಗದೆ ಇಷ್ಟಪಟ್ಟವರ ಜೊತೆಗೆ ಬದುಕಲು ಹೋದ ಇಬ್ಬರು ಹಳೆಯ ಪ್ರೇಮಿಗಳಿಗೆ ಬದುಕಲು ಬಿಟ್ಟಿಲ್ಲ. ನಮಗೆ ಯಾರ ಸಹವಾಸವೂ ಬೇಡವೆಂದು ನೆಮ್ಮದಿಯಾಗಿದ್ದವರ ನೆಮ್ಮದಿಯನ್ನು ಆರೋಪಿಗಳು ಹಾಳು ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ