ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

2025ರ ವೇಳೆಗೆ ಭಾರತದಲ್ಲಿ ಅಂತರ್ಜಲ ಮಟ್ಟ ತೀರಾ ಕುಸಿತ ಸಾಧ್ಯತೆ ; ವಿಶ್ವಸಂಸ್ಥೆ

Twitter
Facebook
LinkedIn
WhatsApp
2025ರ ವೇಳೆಗೆ ಭಾರತದಲ್ಲಿ ಅಂತರ್ಜಲ ಮಟ್ಟ ತೀರಾ ಕುಸಿತ ಸಾಧ್ಯತೆ ; ವಿಶ್ವಸಂಸ್ಥೆ

ಹೊಸದಿಲ್ಲಿ: ಭಾರತದಲ್ಲಿನ ಇಂಡೋ- ಗಂಗಾ (Indo Ganges) ಜಲಾನಯನ ಪ್ರಾಂತ್ಯದ ಕೆಲವು ಪ್ರದೇಶಗಳು ಈಗಾಗಲೇ ಅಂತರ್ಜಲ (Groundwater Level) ಕುಸಿತದ ಮಿತಿಯನ್ನು ದಾಟಿವೆ ಮತ್ತು ದೇಶದ ಸಂಪೂರ್ಣ ವಾಯುವ್ಯ ಪ್ರದೇಶ 2025ರ ವೇಳೆಗೆ ತುಂಬಾ ಕಡಿಮೆ ಅಂತರ್ಜಲ ಲಭ್ಯತೆಯನ್ನು ಅನುಭವಿಸುತ್ತದೆ (Groundwater scarcity) ಎಂದು ವಿಶ್ವಸಂಸ್ಥೆಯ ಹೊಸ ವರದಿ (UN report) ತರ್ಕಿಸಿದೆ.

ಸೌದಿ ಅರೇಬಿಯಾದಂತಹ ಕೆಲವು ದೇಶಗಳು ಈಗಾಗಲೇ ಅಂತರ್ಜಲ ಕೊರತೆಯ ಅಪಾಯದ ತುದಿಯನ್ನು ಮೀರಿವೆ. ಭಾರತ ಸೇರಿದಂತೆ ಇತರರೂ ಈ ಅಪಾಯದಿಂದ ದೂರವಿಲ್ಲ. “ಇಂಟರ್‌ಕನೆಕ್ಟೆಡ್ ಡಿಸಾಸ್ಟರ್ ರಿಸ್ಕ್ ರಿಪೋರ್ಟ್ 2023” ಎಂಬ ಶೀರ್ಷಿಕೆಯಡಿ ವಿಶ್ವಸಂಸ್ಥೆಯ ಇನ್‌ಸ್ಟಿಟ್ಯೂಟ್ ಫಾರ್ ಎನ್ವಿರಾನ್‌ಮೆಂಟ್ ಅಂಡ್ ಹ್ಯೂಮನ್ ಸೆಕ್ಯುರಿಟಿ (ಯುಎನ್‌ಯು-ಇಹೆಚ್‌ಎಸ್) ಇದರಿಂದ ವರದಿ ಪ್ರಕಟವಾಗಿದೆ.

ವರದಿಯಲ್ಲಿ ಪ್ರಪಂಚ ಎದುರಿಸಲಿರುವ ಆರು ಪಾರಿಸರಿಕ ಅಪಾಯಗಳನ್ನು ತೋರಿಸಲಾಗಿದೆ- ಜೀವಪ್ರಭೇದಗಳ ಅಳಿವಿನ ಹೆಚ್ಚಳ, ಅಂತರ್ಜಲ ಕುಸಿತ, ಪರ್ವತ ಹಿಮನದಿಗಳ ಕರಗುವಿಕೆ, ಬಾಹ್ಯಾಕಾಶ ಅವಶೇಷಗಳ ಹೆಚ್ಚಳ, ಅಸಹನೀಯ ಶಾಖ ಮತ್ತು ಊಹಿಸಲಾಗದ ಭವಿಷ್ಯ.

ಪರಿಸರದ ಟಿಪ್ಪಿಂಗ್ ಪಾಯಿಂಟ್‌ಗಳು ಭೂಮಿಯ ವ್ಯವಸ್ಥೆಗಳಲ್ಲಿ ನಿರ್ಣಾಯಕ ಮಿತಿಗಳಾಗಿವೆ. ಅದನ್ನು ಮೀರಿ ಹಠಾತ್ ಬದಲಾವಣೆಗಳು ಸಂಭವಿಸುತ್ತಿವೆ. ಇದು ಪರಿಸರ ವ್ಯವಸ್ಥೆಗಳು, ಹವಾಮಾನ ಮಾದರಿಗಳು ಮತ್ತು ಒಟ್ಟಾರೆ ಪರಿಸರದಲ್ಲಿ ಆಳವಾದ ಮತ್ತು ಕೆಲವೊಮ್ಮೆ ದುರಂತಗಳಿಗೆ ಕಾರಣವಾಗುತ್ತವೆ.

ಅಂತರ್ಜಲದಲ್ಲಿ ಸುಮಾರು 70 ಪ್ರತಿಶತವನ್ನು ಕೃಷಿಗಾಗಿ, ನೆಲದ ಮೇಲಿನ ನೀರಿನ ಮೂಲಗಳು ಸಾಕಷ್ಟಿಲ್ಲದಿದ್ದಾಗ ಬಳಸಲಾಗುತ್ತಿದೆ. ಜಲಕ್ಷಾಮದಿಂದ ಉಂಟಾಗುವ ಕೃಷಿ ನಷ್ಟವನ್ನು ತಗ್ಗಿಸುವಲ್ಲಿ ಜಲಸೆಲೆಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಹವಾಮಾನ ಬದಲಾವಣೆಯಿಂದಾಗಿ ಈ ಸವಾಲು ಉಲ್ಬಣಗೊಳ್ಳುವ ನಿರೀಕ್ಷೆಯಿದೆ.

ಪ್ರಪಂಚದ ಅರ್ಧಕ್ಕಿಂತ ಹೆಚ್ಚು ಪ್ರಮುಖ ಜಲಸೆಲೆಗಳು ನೈಸರ್ಗಿಕವಾಗಿ ಮರುಪೂರಣಗೊಳ್ಳುವುದಕ್ಕಿಂತ ವೇಗವಾಗಿ ಕ್ಷೀಣಿಸುತ್ತಿವೆ. ಅಸ್ತಿತ್ವದಲ್ಲಿರುವ ಬಾವಿ ಕೆರೆಗಳಿಂದ ನೀರಿನ ಮಟ್ಟ ಮತ್ತೂ ಕಡಿಮೆಯಾದಾಗ ರೈತರು ನೀರಿನ ನೆಲೆಯನ್ನೇ ಕಳೆದುಕೊಳ್ಳಬಹುದು. ಇದು ಸಂಪೂರ್ಣ ಆಹಾರ ಉತ್ಪಾದನಾ ವ್ಯವಸ್ಥೆಗೆ ಅಪಾಯವನ್ನುಂಟುಮಾಡುತ್ತದೆ. ಸೌದಿ ಅರೇಬಿಯಾದಂತಹ ಕೆಲವು ದೇಶಗಳು ಈಗಾಗಲೇ ಅಂತರ್ಜಲ ಅಪಾಯದ ತುದಿಯನ್ನು ಮೀರಿವೆ. ಭಾರತ ಸೇರಿದಂತೆ ಇತರ ದೇಶಗಳೂ ಅದರಿಂದ ದೂರವಿಲ್ಲ.

“ಭಾರತವು ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾದ ನಂತರ ಅಂತರ್ಜಲದ ಅತಿದೊಡ್ಡ ಬಳಕೆದಾರನಾಗಿದೆ. ಭಾರತದ ವಾಯುವ್ಯ ಪ್ರದೇಶವು ರಾಷ್ಟ್ರದ ಬೆಳೆಯುತ್ತಿರುವ 140 ಕೋಟಿ ಜನರಿಗೆ ಆಹಾರಮೂಲವಾಗಿ ಕಾರ್ಯನಿರ್ವಹಿಸುತ್ತಿದೆ. ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ದೇಶದ ಅಕ್ಕಿ ಪೂರೈಕೆಯ 50 ಶೇಕಡಾ ಮತ್ತು ಶೇ.85 ಗೋಧಿ ಉತ್ಪಾದಿಸುತ್ತವೆ.

“ಆದಾಗ್ಯೂ, ಪಂಜಾಬ್‌ನ ಶೇಕಡಾ 78ರಷ್ಟು ಬಾವಿಗಳನ್ನು ಅತಿಯಾಗಿ ಬಳಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ವಾಯುವ್ಯ ಪ್ರದೇಶವು 2025ರ ವೇಳೆಗೆ ತೀರಾ ಕಡಿಮೆ ಅಂತರ್ಜಲ ಲಭ್ಯತೆಯನ್ನು ಅನುಭವಿಸುವ ನಿರೀಕ್ಷೆಯಿದೆ” ಎಂದು ವರದಿ ಹೇಳಿದೆ.

ವರದಿಯ ಪ್ರಮುಖ ಲೇಖಕ ಮತ್ತು ಹಿರಿಯ ತಜ್ಞ ಜ್ಯಾಕ್ ಓ’ಕಾನರ್, “ನಾವು ಈ ಟಿಪ್ಪಿಂಗ್ ಪಾಯಿಂಟ್‌ಗಳನ್ನು ಸಮೀಪಿಸುತ್ತಿರುವಾಗ, ಈಗಾಗಲೇ ಪರಿಣಾಮಗಳನ್ನು ಅನುಭವಿಸಲು ಪ್ರಾರಂಭಿಸಿದ್ದೇವೆ. ಒಮ್ಮೆ ದಾಟಿದರೆ, ಹಿಂತಿರುಗಲು ಕಷ್ಟವಾಗುತ್ತದೆ. ನಮ್ಮ ಮುಂದಿರುವ ಅಪಾಯಗಳನ್ನು ಅರ್ಥ ಮಾಡಿಕೊಳ್ಳಲು, ಅವುಗಳ ಕಾರಣ ಅರಿಯಲು ಮತ್ತು ಅವುಗಳನ್ನು ತಪ್ಪಿಸಲು ಅಗತ್ಯವಾದ ತುರ್ತು ಬದಲಾವಣೆ ಮಾಡಲು ನಮ್ಮ ವರದಿ ಸಹಾಯ ಮಾಡಬಹುದುʼʼ ಎಂದಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist