ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಾಕ್ಸರ್ ವಿಜೇಂದರ್ ಸಿಂಗ್
ದೆಹಲಿ: ಬಾಕ್ಸರ್ ವಿಜೇಂದರ್ ಸಿಂಗ್ ಅವರು ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ಈ ಮಹತ್ವದ ಬೆಳವಣಿಗೆ ನಡೆದಿದೆ. ಈ ಹಿಂದೆ ಕಾಂಗ್ರೆಸ್ನಲ್ಲಿದ್ದ ವಿಜೇಂದರ್ ಸಿಂಗ್ 2019 ರ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ದೆಹಲಿಯಿಂದ ಸ್ಪರ್ಧಿಸಿದ್ದರು ಆದರೆ ರಮೇಶ್ ಬಿಧುರಿ ವಿರುದ್ಧ ಸೋತಿದ್ದರು.ನಾನು ರಾಷ್ಟ್ರದ ಹಿತಾಸಕ್ತಿ ಮತ್ತು ಜನರ ಸೇವೆಗಾಗಿ ಬಿಜೆಪಿಗೆ ಸೇರಿದ್ದೇನೆ. ನಾನು ಈ ಮೂಲಕ ಹೆಚ್ಚು ಹೆಚ್ಚು ಜನರಿಗೆ ಸಹಾಯ ಮಾಡಲು ಬಯಸುತ್ತೇನೆ. ಈ ಹಿಂದೆ ಕಾಂಗ್ರೆಸ್ನಲ್ಲಿದ್ದ ಸಿಂಗ್, 2019 ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ದೆಹಲಿಯಿಂದ ಸ್ಪರ್ಧಿಸಿದ್ದರು ಆದರೆ ಬಿಜೆಪಿಯ ರಮೇಶ್ ಬಿಧುರಿ ವಿರುದ್ಧ ಸೋತರು, ನಂತರ ಆಮ್ ಆದ್ಮಿ ಪಕ್ಷದ (ಎಎಪಿ) ರಾಘವ್ ಚಡ್ಡಾ ವಿರುದ್ಧ ಗೆದ್ದರು.
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸಂಸದೆ ಮತ್ತು ನಟಿ ಹೇಮಾ ಮಾಲಿನಿ ಅವರು ಮಥುರಾದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಇಲ್ಲಿ ವಿಜೇಂದರ್ ಸಿಂಗ್ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದೆ. ವಿಜೇಂದರ್ ಸಿಂಗ್ ಜಾಟ್ ಸಮುದಾಯದವರಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಹಾಗೂ ಹರಿಯಾಣದಲ್ಲಿ ಬಿಜೆಪಿ ಪ್ರಭಾವವನ್ನು ಹೆಚ್ಚಿಸಲು ಇವರ ಸೇರ್ಪಡೆ ಬಿಜೆಪಿಗೆ ಮುಖ್ಯವಾಗಿದೆ.
ಬಾಕ್ಸರ್ ವಿಜೇಂದರ್ ಸಿಂಗ್ ಬಿಜೆಪಿ ಸೇರ್ಪಡೆ; ಮಥುರಾದಲ್ಲಿ ಹೇಮಮಾಲಿನಿ ಬದಲು ಅವರಿಗೆ ಟಿಕೆಟ್ ಸಾಧ್ಯತೆ
ಭಾರತದ ಮೊದಲ ವೃತ್ತಿಪರ ಬಾಕ್ಸರ್ ಆಗಿರುವ ವಿಜೇಂದರ್ ಸಿಂಗ್ (Vijender Singh) ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಚುನಾವಣೆಯ ಹೊಸ್ತಿಲಲ್ಲೇ ಈ ಬೆಳವಣಿಗೆ ಆಗಿದ್ದು, ವಿಜೇಂದರ್ ಅವರು ಮಥುರಾ ಕ್ಷೇತ್ರದಲ್ಲಿ (Lok Sabha elections) ಬಿಜೆಪಿ ಅಭ್ಯರ್ಥಿ ಆಗಬಹುದು ಎನ್ನಲಾಗುತ್ತಿದೆ. 2019ರಲ್ಲಿ ವಿಜೇಂದರ್ ಅವರು ಕಾಂಗ್ರೆಸ್ ಪಕ್ಷವನ್ನು ಸೇರಿ ದಕ್ಷಿಣ ದೆಹಲಿಯಲ್ಲಿ ಸ್ಪರ್ಧಿಸಿದ್ದರು. ಆಗ ಬಿಜೆಪಿಯ ರಮೇಶ್ ಬಿಧೂರಿ ಅವರ ಕೈಯಲ್ಲಿ ಪರಾಜಯಗೊಂಡಿದ್ದರು. ಈ ಬಾರಿ ಬಿಜೆಪಿಗೆ ಬಂದಿರುವ ಅವರು ಇದನ್ನು ಘರ್ ವಾಪ್ಸಿ ಎಂದು ಬಣ್ಣಿಸಿದ್ದಾರೆ.
‘ಇವತ್ತು ನಾನು ಬಿಜೆಪಿ ಸೇರುತ್ತಿದ್ದೇನೆ. ನನಗೆ ಇದು ಘರ್ ವಾಪ್ಸಿಯಂತೆ ಆಗಿದೆ. ನಾವು ಫೈಟ್ಗೆ ಬೇರೆ ದೇಶಕ್ಕೆ ಹೋದಾಗ ಏರ್ಪೋರ್ಟ್ಗಳಲ್ಲಿ ಸಮಸ್ಯೆಗಳಾಗುತ್ತಿದ್ದುವು. ಈ ಸರ್ಕಾರದ ದೆಸೆಯಿಂದ ನಮಗೆ ಎಲ್ಲಾ ಗೌರವಗಳೂ ಸಿಗುತ್ತಿವೆ,’ ಎಂದು ಅವರು ಇಂದು ಬುಧವಾರ ಹೇಳಿದ್ದಾರೆ.
ಉತ್ತರಪ್ರದೇಶದ ಮಥುರಾದಲ್ಲಿ ಹೇಮ ಮಾಲಿನಿ ಅವರು 2019ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನಿಂದ ಗೆದ್ದು ಸಂಸದೆಯಾಗಿದ್ದರು. ಅದೇ ಕ್ಷೇತ್ರದಲ್ಲಿ ವಿಜೇಂದರ್ ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್ ಕೊಡುವ ಸಾಧ್ಯತೆ ಇದೆ. ವಿಜೇಂದರ್ ಅವರು ಜಾಟ್ ಸಮುದಾಯದವರಾಗಿರುವುದು ಬಿಜೆಪಿಯ ಲೆಕ್ಕಾಚಾರ ಬದಲಿಸಲು ಕಾರಣ. ಮಥುರಾ ಕ್ಷೇತ್ರ ಪಶ್ಚಿಮ ಉತ್ತರಪ್ರದೇಶದಲ್ಲಿ ಬರುತ್ತದೆ. ಈ ಭಾಗ ಮತ್ತು ಹರ್ಯಾಣದಲ್ಲಿ ಜಾಟ್ ಜನರು ಸಾಕಷ್ಟಿದ್ದಾರೆ. ವಿಜೇಂದರ್ ಸೇರ್ಪಡೆಯಿಂದ ಜಾಟ್ ಸಮುದಾಯದವರ ಮತಗಳನ್ನು ಗಟ್ಟಿ ಮಾಡಿಕೊಳ್ಳಲು ಬಿಜೆಪಿಗೆ ಅನುಕೂಲವಾಗಬಹುದು.
ವಿಜೇಂದರ್ ಸಿಂಗ್ ಸಾಧಾರಣ ಬಾಕ್ಸರ್ ಅಲ್ಲ. ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಬಾಕ್ಸರ್ ಅವರು. 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು. ಅಲ್ಲಿಯವರೆಗೆ ಭಾರತದ ಯಾವ ಬಾಕ್ಸರ್ ಕೂಡ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿರಲಿಲ್ಲ. ವಿಜೇಂದರ್ ಅವರು ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲೂ ಬೆಳ್ಳಿ, ಕಂಚಿನ ಪದಕಗಳನ್ನು ಜಯಿಸಿದ್ದಾರೆ. ಬಳಿಕ ವೃತ್ತಿಪರ ಬಾಕ್ಸಿಂಗ್ ಕ್ಷೇತ್ರಕ್ಕೆ ಇಳಿದಿದ್ದಾರೆ. ಇವರು ಭಾರತದ ಮೊದಲ ವೃತ್ತಿಪರ ಬಾಕ್ಸರ್ ಕೂಡ ಹೌದು.