ಮಂಗಳವಾರ, ಡಿಸೆಂಬರ್ 5, 2023
ರಾಜ್ಯದ 13 ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಡೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಹಣ ಸೀಝ್..!-ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವಾಯುಭಾರ ಕುಸಿತ ; ನವೆಂಬರ್ 14 ರಿಂದ ಮತ್ತೆ 5 ದಿನಗಳ ಕಾಲ ಮಳೆಯಾಗುವ ಸಂಭವ..!

Twitter
Facebook
LinkedIn
WhatsApp
ವಾಯುಭಾರ ಕುಸಿತ ; ನವೆಂಬರ್ 14 ರಿಂದ ಮತ್ತೆ 5 ದಿನಗಳ ಕಾಲ ಮಳೆಯಾಗುವ ಸಂಭವ..!

ನವದೆಹಲಿ, ನವೆಂಬರ್ 12: ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ಮುಂದಿನ 48 ಗಂಟೆಗಳಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗುವ ಮುನ್ಸೂಚನೆ ಇದೆ. ಇದರಿಂದ ದಕ್ಷಿಣ ಭಾರತದ ಕರಾವಳಿಯ ಒಂದೆರಡು ರಾಜ್ಯಗಳಲ್ಲಿ ಮಳೆಯ ವಾತಾವರಣ ಸೃಷ್ಟಿಯಾಗುವ ಸಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ತೀವ್ರಗೊಂಡಿದೆ. ಇದು ನವೆಂಬರ್ 14 ರ ಸುಮಾರಿಗೆ ಮತ್ತಷ್ಟು ತೀವ್ರಗೊಂಡು ಕಡಿಮೆ ಒತ್ತಡದ ಪ್ರದೇಶವಾಗಿ ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ಈ ವಾಯುಭಾರ ಕುಸಿತವು ನವೆಂಬರ್ 16ರ ಹೊತ್ತಿಗೆ ತಮ್ಮ ಮೂಲ ಸ್ಥಾನದಿಂದ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸಲಿದೆ. ಈ ವೇಳೆ ದಕ್ಷಿಣ ಬಂಗಾಳ ಕೊಲ್ಲಿಯ ವಾತಾವರಣದಲ್ಲಿ ವೈಪರಿತ್ಯಗಳು ಉಂಟಾಗಲಿದೆ ಎಂದು ಐಎಂಡಿ ತಿಳಿಸಿದೆ.

ಈ ಕುರಿತು ಓಡಿಶಾ ರಾಜಧಾನಿ ಬುವನೇಶ್ವರ ಹವಾಮಾನ ಕೇಂದ್ರದ ತಜ್ಞರ ಸಂಜೀವ್ ದ್ವಿವೇದಿ ಅವರು ಪ್ರತಿಕ್ರಿಯಿಸಿ, ಸೈಕ್ಲೋನಿಕ್ ಪರಿಚಲನೆಯು ಥಾಯ್ಲೆಂಡ್ ಕೊಲ್ಲಿಯ ಮೇಲೆ ಇದೆ. ಮಧ್ಯ-ಟ್ರೋಪೋಸ್ಪಿಯರ್ ಮಟ್ಟಗಳವರೆಗೆ ಎತ್ತರದೊಂದಿಗೆ ಈ ವಾಯುಭಾರತ ಕುಸಿತ ನೈಋತ್ಯ ದಿಕ್ಕಿನೆಡೆಗೆ ಸಂಚರಿಸುವ ಲಕ್ಷಣಗಳು ಇವೆ.

ಒಡಿಶಾಗೆ ಹವಾಮಾನ ವರದಿ

ನವೆಂಬರ್ 13 ರಂದು ಅಂಡಮಾನ್ ಸಮುದ್ರ ಹಾಗೂ ಅದರ ವ್ಯಾಪ್ತಿಯಲ್ಲಿ ತೀವ್ರ ಸುಳಿಗಾಳಿ ಕಂಡು ಬಂದರೆ, ನವೆಂಬರ್ 14 ರ ಸುಮಾರಿಗೆ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳಬಹುದು ಎಂದು ಅಂದಾಜಿಸಲಾಗಿದೆ ಎಂದರು.

ಕಳೆದ ಕೆಲವು ದಿನಗಳಿಂದ ಒಡಿಶಾದ ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣ ಕಂಡು ಬಂದಿದೆ. ದಕ್ಷಿಣ ಒಳಭಾಗ ಒಡಿಶಾದ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಕನಿಷ್ಠ ತಾಪಮಾನ ಕುಸಿತ ಕಂಡಿದೆ. ಒಡಿಶಾ ಭಾಗದ ಜಿಲ್ಲೆಗಳಲ್ಲಿ ಮಹತ್ವದ ಬದಲಾವಣೆ ಮುನ್ಸೂಚನೆ ಸದ್ಯಕ್ಕೆ ಇಲ್ಲ. ಐಎಂಡಿ ಪ್ರಕಾರ, ಓಡಿಶಾದ ಪರಲೇಖೆಮುಂಡಿಯಲ್ಲಿ ಗರಿಷ್ಠ ಗರಿಷ್ಠ ತಾಪಮಾನ 34.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇನ್ನು ಅತೀ ಕಡಿಮೆ (ಕನಿಷ್ಠ) ತಾಪಮಾನ 14 ಡಿಗ್ರಿ ಸೆಲ್ಸಿಯಸ್ ಒಡಿಶಾದ ಬಯಲು ಪ್ರದೇಶದ ಫುಲ್ಬಾನಿಯಲ್ಲಿ ಕಂಡು ಬಂದಿದೆ.

ಈ ರಾಜ್ಯಗಳಿಗೆ ಮಳೆ?

ಸದ್ಯಕ್ಕೆ ದೇಶದ ಮಳೆ ವಾತಾವರಣದಲ್ಲಿ ಗಂಭೀರ ರೂಪದ ಬದಲಾವಣೆಗಳು ಕಂಡು ಬಂದಿಲ್ಲ. ಈಗಾಗಲೇ ಹಿಂಗಾರು ಆರಂಭವಾಗಿದ್ದು, ಆರಂಭದಲ್ಲಿ ದುರ್ಬಲವಾಗಿತ್ತು,ನಂತರ ಒಂದೆರಡು ಕಡೆಗಳಲ್ಲಿ ಅಬ್ಬರಿಸಿದ್ದು, ಇದೀಗ ಮತ್ತೆ ತಣ್ಣಗಾಗಿದೆ. ಒಂದು ವೇಳೆ ಈ ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತವು ನಿರೀಕ್ಷೆಯಂತೆ ತೀವ್ರಗೊಂಡಿದ್ದೇ ಆದಲ್ಲಿ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಕರ್ನಾಟಕ, ಆಂಧ್ರ ಪ್ರದೇಶ ರಾಜ್ಯಗಳು ಮತ್ತೆ ಭಾರಿ ಮಳೆ ಕಾಣಲಿವೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ