ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಯುವ ಚುನಾವಣಾ ತಜ್ಞರೊಬ್ಬರು ನೀಡಿದ ಸಲಹೆಯನ್ನು ಪರಿಗಣಿಸದೆ, ಹೈಕಮಾಂಡ್ ನಿಂದ ನೀಡಲ್ಪಟ್ಟ ಬಂಟ್ವಾಳ ಟಿಕೆಟ್ ಕೈ ಚೆಲ್ಲಿದ್ದ ಪದ್ಮರಾಜ್ ಗೆ ಈ ಬಾರಿ ಕೈಗೂಡಬಹುದೇ ಲೋಕಸಭಾ ಟಿಕೆಟ್?

Twitter
Facebook
LinkedIn
WhatsApp
ಯುವ ಚುನಾವಣಾ ತಜ್ಞರೊಬ್ಬರು ನೀಡಿದ ಸಲಹೆಯನ್ನು ಪರಿಗಣಿಸದೆ, ಹೈಕಮಾಂಡ್ ನಿಂದ ನೀಡಲ್ಪಟ್ಟ ಬಂಟ್ವಾಳ ಟಿಕೆಟ್ ಕೈ ಚೆಲ್ಲಿದ್ದ ಪದ್ಮರಾಜ್ ಗೆ ಈ ಬಾರಿ ಕೈಗೂಡಬಹುದೇ ಲೋಕಸಭಾ ಟಿಕೆಟ್?

ಮಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯ ಕಾಂಗ್ರೆಸ್ ಯವ ಅಭ್ಯರ್ಥಿ ರೊಬ್ಬರಿಗೆ ಚುನಾವಣಾ ತಂತ್ರಗಾರಿಕೆ ನಡೆಸಿ, ಆ ಮೂಲಕ ಕೊಡಗಿನ ಅಭೇದ್ಯ ವಿಧಾನಸಭಾ ಕ್ಷೇತ್ರವನ್ನು ಭೇದಿಸುವಲ್ಲಿ ಯಶಸ್ವಿಯಾಗಿಸಿ, ಅಭ್ಯರ್ಥಿ ಗೆಲ್ಲುವಲ್ಲಿ ಸಹಾಯ ಮಾಡಿದ್ದ ಮಂಗಳೂರು ಮೂಲದ ಯುವ ಚುನಾವಣಾ ತಜ್ಞರೊಬ್ಬರು ಅಲ್ಲಿಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅದೇ ಸಂದರ್ಭದಲ್ಲಿ ಆ ಚುನಾವಣಾ ತಜ್ಞರು ಬಂಟ್ವಾಳದಲ್ಲಿ ಸಹ ಯುವ ನಾಯಕ ಪದ್ಮರಾಜ್ ಪರವಾಗಿ ನಾಲ್ಕು ತಿಂಗಳುಗಳ ಕಾಲ ತಂತ್ರಗಾರಿಕೆ ನಡೆಸಿದ್ದರು ಎಂಬ ವಿಷಯ ಈಗ ಬಹಿರಂಗವಾಗಿದೆ.

ಆ ತಂತ್ರಗಾರಿಕೆಯ ಫಲದಿಂದ ಇಡೀ ಕಾಂಗ್ರೆಸ್ಸಿನ ಜಿಲ್ಲೆಯ ನಾಯಕರಿಗೆ ಶಾಕ್ ನೀಡುವಂತೆ ಪದ್ಮರಾಜ್ ಮುಂಚೂಣಿ ಪ್ರಬಲ ಅಭ್ಯರ್ಥಿಯಾಗಿ ಒಮ್ಮಿಂದೊಮ್ಮೆಲೇ ಹೊರಹೊಮ್ಮಿದ್ದರು ಎಂದು ತಿಳಿದು ಬಂದಿದೆ.

ಇದರ ಫಲವಾಗಿ ಪದ್ಮ ರಾಜ್ ರವರಿಗೆ ಕಾಂಗ್ರೆಸ್ ಹೈಕಮಾಂಡ್ ಬಂಟ್ವಾಳ ಕ್ಷೇತ್ರದ ಟಿಕೆಟ್ ಆಫರ್ ಮಾಡಿತ್ತು. ಆದರೆ ನಾನು ಮಂಗಳೂರು ದಕ್ಷಿಣದ ಬಗ್ಗೆ ಆಸಕ್ತಿ ಹೊಂದಿದ್ದೇನೆ ಎಂದು ಹೈಕಮಾಂಡಿಗೆ ತಿಳಿಸಿದ ಪದ್ಮರಾಜ್ ಬಂಟ್ವಾಳದ ಟಿಕೆಟ್ ಯನ್ನು ತಿರಸ್ಕರಿಸಿದ್ದರು.

ಇತ್ತೀಚಿಗೆ ಖಾಸಗಿ ವಾಹಿನಿ ನಡೆಸಿದ ಸಂದರ್ಶನದಲ್ಲಿ ನನಗೆ ಹೈಕಮಾಂಡ್ ನೀಡಲ್ಪಟ್ಟ ಬೇರೆ ಕ್ಷೇತ್ರದ ಟಿಕೆಟ್ ಯನ್ನು
ತ್ಯಾಗ ಮಾಡಿದ್ದೇನೆ ಎಂದು ಸ್ವತಃ ಮಾಧ್ಯಮದ ಮುಂದೆ ಪದ್ಮರಾಜ್ ಹೇಳಿಕೊಂಡಿದ್ದರು.

ಈ ಸಂದರ್ಶನದ ನಂತರ ಬಂಟ್ವಾಳದ ಟಿಕೆಟ್ ತಿರಸ್ಕರಿಸಿದ ಬಗ್ಗೆ ಚರ್ಚೆಗಳು ಭುಗಿಲೆದ್ದಿವೆ.

ಯುವ ಚುನಾವಣಾ ತಜ್ಞರೊಬ್ಬರ ನಾಲ್ಕು ತಿಂಗಳಗಳ ಕಾಲದ ಅದ್ಭುತ ತಂತ್ರಗಾರಿಕೆ ಅದ್ಭುತ ಫಲವನ್ನು ನೀಡಿತು. ಆದರೆ ಕೊನೆ ಹಂತದಲ್ಲಿ ಅವರ ಗಂಭೀರ ಸಲಹೆಯನ್ನು ಪರಿಗಣಿಸದೆ ಪದ್ಮರಾಜ್ ಬಂಟ್ವಾಳದ ಟಿಕೆಟ್ ಯನ್ನು ತಪ್ಪಿಸಿಕೊಂಡು ವಿಧಾನಸಭೆಗೆ ಪ್ರವೇಶಿಸುವ ಅವಕಾಶವನ್ನು ಕಳೆದ ಬಾರಿ ಕಳೆದುಕೊಂಡಿದ್ದರು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.


ಬಂಟ್ವಾಳ ಟಿಕೆಟ್ ಯನ್ನು ಸ್ವತಹ ತಿರಸ್ಕರಿಸಿದ ಪದ್ಮರಾಜ್ ರವರಿಗೆ ನಂತರ ವಿಶ್ವಾಸದಲ್ಲಿದ್ದ ಮಂಗಳೂರು ದಕ್ಷಿಣದ ಟಿಕೆಟ್ ಸಹ ತಪ್ಪಿ ಹೋಗಿತ್ತು.

ಯಾರು ಊಹಿಸಿದ ರೀತಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಗ್ಗೆ ತಂತ್ರಗಾರಿಕೆ ನಡೆಸಿದ್ದ ಯುವ ಚುನಾವಣಾ ತಜ್ಞರೊಬ್ಬರು ಪದ್ಮರಾಜ್ ಹೆಸರು ಬಂಟ್ವಾಳದ ಟಿಕೇಟ್ ನೀಡುವವರೆಗೆ ತಂದು ನಿಲ್ಲಿಸಿ
ಇಡೀ ಜಿಲ್ಲೆಯ ಕಾಂಗ್ರೆಸ್ ಪಕ್ಷದ ನಾಯಕರನ್ನು ಅಚ್ಚರಿಗೆ ಒಳಪಡಿಸಿದ್ದರು.

ಈ ಮೂಲಕ ಬಂಟ್ವಾಳ ಟಿಕೆಟ್ ಕೈ ಚೆಲ್ಲಿದ್ದ ಪದ್ಮರಾಜ್ ಗೆ ಈ ಬಾರಿ ಲೋಕಸಭೆಯ ಚುನಾವಣೆಯ ಟಿಕೆಟ್ ಸಿಗಬಹುದು ಎಂಬುದು ಒಂದು ಮೂಲಗಳಿಂದ ತಿಳಿದು ಬಂದಿದೆ.

ಮಾಜಿ ಸಚಿವ ವಿನಯಕುಮಾರ್ ಸೂರಕೆ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ನಡುವೆ
ಟಿಕೆಟಿಗಾಗಿ ಬಹಳಷ್ಟು ಪೈಪೋಟಿ ನಡೆಯುತ್ತಿದೆ ಎಂದು ಇನ್ನೊಂದು ಮೂಲಗಳು ಸ್ಪಷ್ಟಪಡಿಸಿವೆ.


ಅಂದು ಕೈ ಚೆಲ್ಲಿದ್ದ ಟಿಕೆಟ್ ಈ ಬಾರಿ ಕೈಗೂಡಬಹುದೇ ಎಂಬುದು ಈಗ ಕುತೂಹಲದ ಪ್ರಶ್ನೆಯಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist