ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ದೀಪಾವಳಿ ಹಬ್ಬಕ್ಕೆ ಜನತೆಯ ಅನುಕೂಲಕ್ಕಾಗಿ 4 ವಿಶೇಷ ರೈಲಿನ ವ್ಯವಸ್ಥೆ; ಬೆಂಗಳೂರು, ಬೀದರ್​ ಜನತೆಗೆ ಅನುಕೂಲ!

Twitter
Facebook
LinkedIn
WhatsApp
ದೀಪಾವಳಿ ಹಬ್ಬಕ್ಕೆ ಜನತೆಯ ಅನುಕೂಲಕ್ಕಾಗಿ 4 ವಿಶೇಷ ರೈಲಿನ ವ್ಯವಸ್ಥೆ; ಬೆಂಗಳೂರು, ಬೀದರ್​ ಜನತೆಗೆ ಅನುಕೂಲ!

ಬೀದರ್: ದೀಪಾವಳಿ ಹಬ್ಬಕ್ಕಾಗಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯು ಸುಮಾರು 600 ಹೆಚ್ಚುವರಿ ಬಸ್‌ಗಳ ಸೌಲಭ್ಯ ಕಲ್ಪಿಸಿರುವ ಬೆನ್ನಲೆ ರೈಲ್ವೆ ಇಲಾಖೆಯೂ ಸಹ ಪ್ರಯಾಣಿಕರ ಅನುಕೂಲಕ್ಕಾಗಿ ನಾಲ್ಕು ರೈಲುಗಳ ಅನುಕೂಲ ಮಾಡಿಕೊಟ್ಟಿದೆ.

ದೀಪಾವಳಿ ಹಬ್ಬದ ನಿಮಿತ್ತ ಬೆಂಗಳೂರು, ಹುಬ್ಬಳ್ಳಿಯಲ್ಲಿರುವ ಬೀದರ್ ಲೋಕಸಭಾ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಈ ವಿಶೇಷ ರೈಲು ಇಂದು (ನವೆಂಬರ್‌ 10ರ ಶುಕ್ರವಾರ) ಹುಬ್ಬಳ್ಳಿ ಯಿಂದ ಬೀದರ್​​​​ಗೆ ವಾಯಾ ಯಶವಂತಪುರ, ಕಲಬುರಗಿ, ಹುಮನಾಬಾದ ಮಾರ್ಗವಾಗಿ ಚಲಿಸಲಿದೆ. ಹಾಗೆ ನ. 14 ರಂದು ಬೀದರನಿಂದ ಯಶವಂತಪುರ ವಾಯಾ ಹುಮನಾಬಾದ, ಕಲಬುರಗಿ ಮಾರ್ಗವಾಗಿ ಚಲಿಸಲಿದೆ.

ನ. 10 ರಂದು ರೈಲು ಸಂಖ್ಯೆ: 06505, ಹುಬ್ಬಳ್ಳಿ-ಬೀದರ್​​ ವಾಯಾ ಯಶವಂತಪುರ, ಹುಮನಾಬಾದ ರೈಲು ಮಹ್ನಾಹ್ನ 2.30ಕ್ಕೆ ಹುಬ್ಬಳ್ಳಿಯಿಂದ ಹೊರಟು, ಯಶವಂತಪುರಕ್ಕೆ ರಾತ್ರಿ 11.15ಕ್ಕೆ ಬರಲಿದ್ದು, ಅಲ್ಲಿಂದ ಹೊರಟು ಯಾದಗಿರ, ಕಲಬುರಗಿ, ತಾಜಸುಲ್ತಾನಪುರ ಮಾರ್ಗವಾಗಿ ಹುಮನಾಬಾದಗೆ ಶನಿವಾರ ಬೆಳಗ್ಗೆ 10.49ಕ್ಕೆ ಹಾಗೂ ಬೀದರಗೆ 12.15ಕ್ಕೆ ತಲುಪಲಿದೆ.

ರೈಲು ಸಂಖ್ಯೆ: 06506, ನ.14 ರಂದು ಮಂಗಳವಾರ ಮಧ್ಯಾಹ್ನ 2.30ಕ್ಕೆ ಬೀದರನಿಂದ ಹೊರಟು, ಹುಮನಾಬಾದ್​​​ಗೆ ಮಧ್ಯಾಹ್ನ 3ಕ್ಕೆ ತಲುಪಲಿದೆ ಅಲ್ಲಿಂದ ಬಂದ ಮಾರ್ಗವಾಗಿ ಮರುದಿನ ಬೆಳಗ್ಗೆ ಬುಧವಾರ ನಸುಕಿನ ಜಾವ 4ಗಂಟೆಗ ಯಶವಂತಪೂರವರೆಗೆ ಮಾತ್ರ ಚಲಿಸಲಿದೆ.

ಇದರ ಜೊತೆ ಕಳೆದ ವಾರ ಪ್ರಾರಂಭಗೊಂಡ ಬೀದರ್​​-ಯಶವಂತಪುರ ವಾಯಾ ಹುಮನಾಬಾದ ಹೊಸ ರೈಲಿನ ಸೇವೆಯೂ ಯತಾಸ್ಥಿತಿಯಲ್ಲಿರಲಿದೆ. ಈ ಹೊಸ ರೈಲು ಶನಿವಾರ ರಾತ್ರಿ11.15ಕ್ಕೆ ಯಶವಂತಪುರನಿಂದ ಬಿಟ್ಟು ಮರುದಿನ ರವಿವಾರ ಮಧ್ಹಾಹ್ನ 1.30ಕ್ಕೆ ಬೀದರ್​​ ತಲುಪಲಿದೆ ಮತ್ತು ಅದೇ ದಿನ ಮಧ್ಯಾಹ್ನ 2.30ಕ್ಕೆ ಬೀದರ್​​​ನಿಂದ ಹೊರಟು ಸೊಮುವಾರ ನಸುಕಿನ ಜಾವ 4 ಗಂಟೆಗೆ ಯಶವಂತಪುರ ತಲುಪಲಿದೆ.

ದೀಪಾವಳಿ ಹಬ್ಬಕ್ಕೆ ಬೀದರ್‌ ಲೋಕಸಭಾ ಕ್ಷೇತ್ರದ ಜನತೆಗೆ ಕಲಬುರಗಿ, ಹುಮನಾಬಾದ ಮಾರ್ಗವಾಗಿ 2 ರೈಲುಗಳು ಹಾಗೂ ವಾಯಾ ವಿಕಾರಬಾದ ಜಹಿರಾಬಾದ ಮಾರ್ಗವಾಗಿ ದಿನನಿತ್ಯ ಇರುವ ರೈಲುಗಳು ಒಟ್ಟು 4 ರೈಲುಗಳಿವೆ, ಜನತೆ ಈ ನಾಲ್ಕು ರೈಲುಗಳ ಮೂಲಕ ಸುರಕ್ಷಿತವಾಗಿ, ಬೀದರ್​​ಗೆ ಬಂದು ಕುಟುಂಬದೊಂದಿಗೆ ಹಬ್ಬದ ಕ್ಷಣಗಳು ಕಳೆಯಲು ಜನತೆಯಲ್ಲಿ ಕೇಂದ್ರ ಸಚಿವ ಸಚಿವ ಭಗವಂತ ಖೂಬಾ ಮನವಿ ಮಾಡಿದ್ದಾರೆ.

ಈ ರೈಲುಗಳ ಮೂಲಕ ನಮ್ಮ ಜನರ ಸಾವಿರಾರು ರೂಪಾಯಿಗಳು ಉಳಿತಾಯವಾಗಲಿದೆ ಹಾಗೂ ಸುಖಕರ ಪ್ರಯಾಣವು ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ನಮ್ಮ ಭಾಗದ ಜನತೆಗೆ ರೈಲಿನ ವ್ಯವಸ್ಥೆ ಮಾಡಿಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿಜಿಯವರಿಗೆ, ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್​ ಅವರಿಗೆ ಮತ್ತು ರೈಲ್ವೆ ಅಧಿಕಾರಿಗಳಿಗೆ ಸಚಿವ ಭಗವಂತ ಖೂಬಾ ಧನ್ಯವಾದಗಳು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist