ಗುರುವಾರ, ಮಾರ್ಚ್ 13, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಬಡಗುತಿಟ್ಟು ಯಕ್ಷಗಾನದ ಆರ್ಗೋಡು ಮೋಹನ್ದಾಸ್ ಶೆಣೈಗೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ

Twitter
Facebook
LinkedIn
WhatsApp
ಬಡಗುತಿಟ್ಟು ಯಕ್ಷಗಾನದ ಆರ್ಗೋಡು ಮೋಹನ್ದಾಸ್ ಶೆಣೈಗೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ

ಮೋಹನದಾಸ ಶೆಣೈ: ಕುಂದಾಪುರ ತಾಲೂಕಿನ ಕಮಲಶಿಲೆ ಬಳಿಯ ಅರ್ಗೋಡು ಮೋಹನದಾಸ ಶೆಣೈ ಸುಮಾರು ೪ ದಶಕಗಳಿಂದ ಯಕ್ಷಗಾನ ಕಲಾಸೇವೆಯಲ್ಲಿದ್ದಾರೆ.
ಹಿರಿಯಡಕ ಮೇಳದಲ್ಲಿ ಕಲಾವಿದನಾಗಿ ಸೇರ್ಪಡೆಗೊಳ್ಳುವ ಮೂಲಕ ಕಲಾಸೇವೆ ಆರಂಭಿಸಿ ಪೆರ್ಡೂರು, ಸಾಲಿಗ್ರಾಮ, ಕಮಲಶಿಲೆ, ಕುಮಟಾ, ಅಮೃತೇಶ್ವರಿ ಮೇಳಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸುಧನ್ವ, ದಶರಥ, ಭೀಷ್ಮ, ಶ್ರೀರಾಮ, ಶಂತನು, ನಾರದ, ಭೀಮ, ಅರ್ಜುನ, ಹನುಮಂತ ಮೊದಲಾದ ಪಾತ್ರಗಳು ಅವರಿಗೆ ಖ್ಯಾ ತಂದಿತ್ತ ಪಾತ್ರಗಳು, ಜೊತೆಗೆ ಐತಿಹಾಸಿಕ ಮತ್ತು ಸಾಮಾಜಿಕ ಪ್ರಸಂಗಗಳ ಪಾತ್ರಗಳಲ್ಲೂ ಅಭಿನಯಿಸಿದ್ದಾರೆ.
ಯಕ್ಷಗಾನ ಪ್ರಸಂಗಕರ್ತರೂ ಆಗಿರುವ ಮೋಹನದಾಸ ಶೆಣೈ, ಯಾವುದೇ ಪೂರ್ವತಯಾರಿ ಇಲ್ಲದೇ ನಿರರ್ಗಳವಾಗಿ ಅಹೋರಾತ್ರಿ ಅರ್ಥ ಹೇಳಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ವಿವಿಧ ಸಂಘಸಂಸ್ಥೆಗಳು ಅವರನ್ನು ಗೌರವಿಸಿವೆ.

150ಕ್ಕಿಂತ ಅಧಿಕ ವರ್ಷಗಳಿಂದ ಅವರ ಮನೆಯಲ್ಲಿ ಗಣೇಶ ಹಬ್ಬ ಆಚರಿಸಲಾಗುತ್ತಿತ್ತು. ಈ ವೇಳೆ ನಡೆಯುತ್ತಿದ್ದ ಯಕ್ಷಗಾನ ತಾಳಮದ್ದಳೆ, ತಂದೆಯ ಕಲಾಸಕ್ತಿ ಪ್ರೇರಣೆಗಳ ಅವರನ್ನು ಯಕ್ಷರಂಗಕ್ಕೆ ಕರೆದು ತಂದಿತ್ತು ಯಕ್ಷಗಾನದ ಕಷ್ಟ ಪರಸಿದ ಮನೆಯೇ ಮೋಷನ್ದಾಸ್ ಶೆಣೈ ಅವರಲ್ಲಿ ಹುದುಗಿದ್ದ ಯಕ್ಷಗಾನ ಸೇವಾಸಕ್ತಿಗೆ ಆಡಂಬೊಲವಾಗಿತ್ತು. ತಂದೆ ಆರ್ಗೋಡು ಗೋವಿಂದರಾಯ್ ಶೆಣೈ ಅವರು 50 ವರ್ಷಗಳ ಕಾಲ ಯಕ್ಷಗಾನ ಸೇವೆ ಸಲ್ಲಿಸಿದ ಭಾಗವತರು, ತಾಯಿ ಮುಕ್ತಾಬಾಯಿ ಕಲಾ ಪೋಷಕರಾಗಿದ್ದರು. ಈ ಕಾರಣದಿಂದಲೋ ಏನೋ ಮೋಹನದಾಸ್ ಅವರು ಪಿಯುಸಿ ನಂತರದ ವಿದ್ಯಾಭ್ಯಾಸಕ್ಕೆ ಶಡಿವಾಣ ಹಾಕಿಯಸೇವೆಗೆ ಅರ್ಪಿಸಿಕೊಳ್ಳುವ ನಿರ್ಧಾರ ಮಾಡಿದ್ದರು.

ದೊಡ್ಡಪ್ಪಂದಿರಾದ ರಾಮಚಂದ್ರ ಶೆಣೈ, ನರಸಿಂಹ ಶೆಣೈ ಅವರಿಂದ ಮಾತುಗಾರಿಕೆ ಕಲಿತ ಅವರಿಗೆ ಹೆಜ್ಜೆ ಕಲಿಸಿದವರು ಪ್ರಸಿದ್ಧ ಹಾಸ್ಯ ಕಲಾವಿದರಾಗಿದ್ದ ಕಮಲಶಿಲೆ ಮಹಾಬಲ ದೇವಾಡಿಗ, ಮೋಹನದಾಸ್ ಅವರ 13 ವರ್ಷಗಳ ಯಕ್ಷಸೇವೆಯಲ್ಲಿ ಹಿರಿಯಡಕ, ಪೆರ್ಡೂರು, ಸಾಲಿಗ್ರಾಮ, ಶಿರಸಿ, ಕುಮಟಾ, ಅಮೃತೇಶ್ವರಿ ಹಾಗೂ ಕಮಲಶಿಲೆ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸುಧನ್ವದಿಂದ ಆರಂಭವಾದ ಅವರ ವೇಷಾನೆಯ ದಶರಥ, ಭಿಷ್ಯ, ರಾಮ, ಪರಶುರಾಮ, ಶಂತನು ದೇವವೃತ, ಉಗ್ರಸೇನ, ಅಕ್ರೂರ, ನಾರದ, ಭೀಮ, ನಗರ, ನಳ, ಋತುವರ್ಣ, ಮಾಯಕಾ ವೀರಮಣಿ, ಮುಕ್ಕಾಂಗದ, ವಿಶ್ರವಸು, ಜಮದಗ್ನಿ, ಮೈತ್ರೇಯ (ವಸಂತ ಐತಿಹಾಸಿಕ) ಸೇರಿದಂತೆ ಬಹತಹ ಬಿರಾಜ್, ಸಾಮಾಜಿಕ ಹಾಗೂ ಐತಿಹಾಸಿಕ ಪಾತ್ರಗಳಿಗೆ ಬಣ್ಣ ಹಾಕಿದ್ದಾರೆ.
ಪ್ರಶಸ್ತಿಗಳು

ಕೆ.ಎಸ್. ನಿಡಂಬೂರು ಪ್ರಶಸ್ತಿ, ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ, ಶಿರಿಯಾರ ಮಂಜುನಾಥ ನಾಯ್ಕ ಪ್ರಶಸ್ತಿ, ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ, ಬೈಕಾಡಿ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ, ಜಿ.ಎಸ್.ಬಿ ಕಲಾರತ್ನ, ಡೊಂಬಿವಿಲಿ ಕರ್ನಾಟಕ ಸಂಘ ಮುಂಬೈ, ಬಂಟರ ಸಂಘ ಮುಂಬೈ, ಮೊಗವೀರ ಸಂಘ ಬೆಂಗಳೂರು, ಅಗ್ನಿಸೇವಾ ಟ್ರಸ್ಟ್, ನವನೀತ ಯಕ್ಷಗಾನ ಮಂಡಳಿ, ಶೇಣಿ ಕಲೋತ್ಸದ ಪ್ರಶಸ್ತಿಗಳು ಸೇರಿ ಅನೇಕ ಪ್ರಶಸ್ತಿ, ಸನ್ಯಾಸಿಗಳು ಅವರ ಮುಡಿಗೇರಿದೆ.

ಶೋತೃಗಳ ಆಸಕ್ತಿಗೆ ಅನುಗುಣವಾಗಿ ಗಾನ್ಯ, ನಾಟ್ಯ, ಮಾತುಗಾರಿಕೆ, ವೇಷ, ಲಯ, ತಾಳ ಎಲ್ಲವನ್ನೂ ಮೇಲೈಸಿಕೊಂಡಿರುವ ಕರಾವಳಿಯ ಗಂಡುಕಲೆ ಎನಿಸಿಕೊಂಡಿರುವ ಯಕ್ಷಗಾನದಲ್ಲಿ ಯಾವುದೇ ಪೂರ್ವ ತಯಾರಿ ಇಲ್ಲದೆ, ಶುದ್ಧ, ಸರಳ ನಿರರ್ಗಳವಾಗಿ ಕನ್ನಡದಲ್ಲಿ ಅಹೋರಾತ್ರಿ ಮಾತನಾಡಿ ಶೋತ್ರಗಳ ಮನಗೆಲ್ಲುವ ಯಕ್ಷಗಾನ ಕಲಾವಿದರ ಪರಂಪರೆಯಲ್ಲಿ ಕಲಾವಿದ ಎನ್ನುವ ಹೆಗ್ಗಳಿಕೆ ಜೊತೆ ಯಕ್ಷ ಸಾಹಿತಿಯಾಗಿಯೂ ಗುರುತಿಸಿಕೊಂಡಿರುವ ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಅವರ ಅಭಿಮಾನಿಗಳಿಗೆ ಹರ್ಷ ತಂದಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist