ಶನಿವಾರ, ಮೇ 18, 2024
ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಭಾರತೀಯರಿಗೆ ಜಪಾನ್‌ನಲ್ಲಿ ಹೆಚ್ಚಿನ ಉದ್ಯೋಗಾವಕಾಶ; ಹಿಂದಿ ಭಾಷೆಯಲ್ಲಿ ಜಪಾನೀಸ್‌ ಕಲಿಕೆಯ ಪುಸ್ತಕ ಮಾಂತೇನ್‌ ಬಿಡುಗಡೆ.

Twitter
Facebook
LinkedIn
WhatsApp
ಭಾರತೀಯರಿಗೆ ಜಪಾನ್‌ನಲ್ಲಿ ಹೆಚ್ಚಿನ ಉದ್ಯೋಗಾವಕಾಶ; ಹಿಂದಿ ಭಾಷೆಯಲ್ಲಿ ಜಪಾನೀಸ್‌ ಕಲಿಕೆಯ ಪುಸ್ತಕ ಮಾಂತೇನ್‌ ಬಿಡುಗಡೆ.

ಬೆಂಗಳೂರು: ಜಪಾನ್‌ ದೇಶದಲ್ಲಿ ವೃದ್ದಾಪ್ಯದಲ್ಲಿ ಇರುವವರ ಸಂಖ್ಯೆ ಹೆಚ್ಚಿದೆ. ಇವರ ಆರೈಕೆ, ಹಾಸ್ಪಿಟಾಲಿಟಿ, ಕೃಷಿ ಮತ್ತು ಇತರೆ ಕ್ಷೇತ್ರಗಳಲ್ಲೂ ಉದ್ಯೋಗಾವಕಾಶಗಳು ಹೆಚ್ಚಿದೆ. ಭಾರತೀಯರು ಈ ಅವಕಾಶಗಳ ಸದುಪಯೋಗ ಪಡೆದುಕೊಳ್ಳಲು ನಾವೀಸ್‌ ಸಂಸ್ಥೆ ಹೊರ ತಂದಿರುವ ಹಿಂದಿ ಭಾಷೆಯಲ್ಲಿ ಜಪಾನೀಸ್‌ ಕಲಿಕೆಯ ವಿಶ್ವದಲ್ಲೇ ಪ್ರಪ್ರಥಮ ಪುಸ್ತಕ ಮಾಂತೇನ್‌ ನಂತಹ ಭಾರತೀಯ ಭಾಷೆಯ ಪುಸ್ತಕಗಳು ಸಹಾಯ ಮಾಡಲಿವೆ ಎಂದು ಜಪಾನ್‌ ದೇಶದ ರಾಯಭಾರಿ ಎಚ್‌. ಇ. ಸತೋಷಿ ಸುಜುಕಿ ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿ ‘ನಾವೀಸ್‌ ಹ್ಯೂಮನ್‌ ರಿಸೋರ್ಸಸ್‌ ಪ್ರೈವೇಟ್‌ ಲಿಮಿಟೆಡ್‌ʼ ಸಂಸ್ಥೆಯು ಹೊರ ತಂದಿರುವ ಹಿಂದಿ ಭಾಷೆಯ ಮೂಲಕ ಜಪಾನೀಸ್‌ ಕಲಿಕೆಯ ವಿಶ್ವದ ಪ್ರಪ್ರಥಮ ಪುಸ್ತಕ ‘ಮಾಂತೇನ್‌ʼ ಎನ್ನುವ ಪುಸ್ತಕವನ್ನು ಬುಧವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಜಪಾನ್‌ ಹಾಗೂ ಭಾರತ ದೇಶ ಬಹಳ ಆತ್ಮೀಯ ಸಂಬಂಧವನ್ನು ಹೊಂದಿವೆ. ದಶಕಗಳ ಈ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಜಪಾನ್‌ ದೇಶದಲ್ಲಿ ವೃದ್ದರ ಸಂಖ್ಯೆ ಹೆಚ್ಚಿದೆ. ಅವರ ಆರೈಕೆಗೆ ಅಗತ್ಯವಿರುವ ಕೌಶಲ್ಯ ಹೊಂದಿರುವ ಮಾನವ ಸಂಪನ್ಮೂಲದ ಅಗತ್ಯತೆ ಹೆಚ್ಚಾಗಿದೆ. ಅದರಲ್ಲೂ ಜಪಾನೀಸ್‌ ಭಾಷೆಯನ್ನು ಕಲಿತಿರುವಂತಹ ಆರೈಕೆ ಕ್ಷೇತ್ರದ ಜನರಿಗೆ ಉತ್ತಮ ಬೇಡಿಕೆಯೂ ಇದೆ. ಜಪಾನ್‌ ದೇಶದಲ್ಲಿ ಉದ್ಯೋಗ ಪಡೆಯಲು ಜಪಾನೀಸ್‌ ಭಾಷೆಯನ್ನು ಕಲಿತಿರುವುದು ಕಡ್ಡಾಯ. ಆ ಭಾಷೆಯನ್ನು ಸುಲಭವಾಗಿ ಕಲಿಯುವ ನಿಟ್ಟಿನಲ್ಲಿ ಪ್ರಪ್ರಥಮವಾಗಿ ಭಾರತೀಯ ಭಾಷೆ ಹಿಂದಿಯಲ್ಲಿ ಹೊರ ತಂದಿರುವ ಮಾಂತೇನ್‌ (ಹಿಂದಿ-ಜಪಾನೀಸ್) ಪುಸ್ತಕ ಬಹಳಷ್ಟು ಅನುಕೂಲಕಾರಿಯಾಗಲಿದೆ. ಭಾರತೀಯ ಯುವ ಜನತೆ ಈ ಉದ್ಯೋಗಾವಕಾಶಗಳ ಸದುಪಯೋಗ ಪಡೆದುಕೊಳ್ಳುವಂತೆ ಜಪಾನ್‌ ದೇಶದ ರಾಯಭಾರಿ ಎಚ್‌. ಇ. ಸತೋಷಿ ಸುಜುಕಿ ಕರೆ ನೀಡಿದರು.

ನಾವೀಸ್‌ ಸಂಸ್ಥೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಸಂಬಂದಮ್‌ ರಾಜಕುಮಾರ್‌ ಮಾತನಾಡಿ, ನಮ್ಮ ಸಂಸ್ಥೆ ಜಪಾನ್‌ ದೇಶದ ಜೊತೆ ಉತ್ತಮ ಸಂಬಂಧ ಹೊಂದಿದೆ. ಭಾರತದಲ್ಲಿ ಜಪಾನ್‌ ಭಾಷೆ ಕಲಿಸುವ ತರಬೇತಿ ಕೇಂದ್ರವಾಗಿರುವ ನಾವೀಸ್‌, ಕಳೆದ 20 ವರ್ಷಗಳಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿಗೆ ಜಪಾನ್‌ ಭಾಷೆಯ ತರಬೇತಿ ನೀಡಿದೆ. ನಾವೀಸ್‌ ಸಂಸ್ಥೆಯಲ್ಲಿ ಜಪಾನ್‌ ಭಾಷೆ ಕಲಿಸುವ 13 ಬೋಧಕರಿದ್ದು ಎಲ್ಲರೂ ಜಪಾನ್ ದೇಶಿಯರಾಗಿದ್ದಾರೆ. ಹಾಗೆಯೇ, ಜಪಾನೀಸ್ ಭಾಷೆಯಲ್ಲಿ ತರಬೇತಿ ಪಡೆದ ಶಿಕ್ಷಕರಾಗಿದ್ದಾರೆ. ಜಪಾನ್‌ ಭಾಷೆಯನ್ನು ಹೆಚ್ಚು ಹೆಚ್ಚು ಜನರಿಗೆ ಕಲಿಸಬೇಕು ಎನ್ನುವ ಮಹಾತ್ವಾಕಾಂಕ್ಷೆ ಹೊಂದಿರುವ ಸಂಸ್ಥೆ, ಫೆಬ್ರುವರಿ 2021 ರಲ್ಲಿ ಇಂಗ್ಲಿಷ್‌ – ಜಪಾನೀಸ್ ಪುಸ್ತಕದ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ವಿಶೇಷ ಕೌಶಲ ಬಯಸುವ ಉದ್ಯಮದಲ್ಲಿ ತೊಡಗಿರುವವರಿಗಾಗಿ ಇಂಗ್ಲಿಷ್‌ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದ ಸಂಸ್ಥೆಯು ಇದೀಗ ಹಿಂದಿ ಮಾತೃ ಭಾಷಿಗರಿಗೆ ಸುಲಭವಾಗಲೆಂದು ಹಿಂದಿ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಬಂಟ್ವಾಳ:ನೇತ್ರಾವತಿ ನದಿಗೆ ಕಾಲು ಜಾರಿ ಬಿದ್ದ ಪಿಯುಸಿ ವಿದ್ಯಾರ್ಥಿ

ಅಂಕಣ