ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಪಪ್ಪಾಯ ಮರಗಳನ್ನು ಸಣ್ಣ ಗುಂಡಿಗಳನ್ನು ಮಾಡುವ ಮೂಲಕ ನೆಡಲಾಗುತ್ತದೆ. ಬೀಜಗಳನ್ನು ಬಿತ್ತಿದ 10 ರಿಂದ 12 ದಿನಗಳ ನಂತರ ಅವು ಮೊಳಕೆಯೊಡೆಯುತ್ತವೆ. ಪಪ್ಪಾಯಿ ಮರಕ್ಕೆ ಹೆಚ್ಚು ನೀರು ಮತ್ತು ಸೂರ್ಯನ ಬೆಳಕು ಬೇಕು. ಆದ್ದರಿಂದ, ನೀರು ಮತ್ತು ಸೂರ್ಯನ ಬೆಳಕು ಎರಡನ್ನೂ ಸುಲಭವಾಗಿ ಸಿಗುವ ಪ್ರದೇಶದಲ್ಲಿ ಅದನ್ನು ನೆಡಬೇಕು. ಇದಕ್ಕಾಗಿ ಗರಿಷ್ಠ ತಾಪಮಾನವು 38 ಡಿಗ್ರಿಯಿಂದ 44 ಡಿಗ್ರಿ ಸೆಲ್ಸಿಯಸ್ ಆಗಿರಬೇಕು. ಈ ಬೆಳೆ ಶಾಖ ಮತ್ತು ಹಿಮದಿಂದ ಹಾನಿಗೊಳಗಾಗುತ್ತದೆ.
ಪಪಾಯ ಬೆಳೆ ಗಂಡು, ಹೆಣ್ಣು ಮತ್ತು ದ್ವಿಲಿಂಗ ಜಾತಿಯ ಹೂಗಳನ್ನು ಮತ್ತು ಸಂಯುಕ್ತ ಜಾತಿಯ ಗಿಡಗಳನ್ನು ಹೊಂದಿದೆ. ಗಂಡು ಜಾತಿಯ ಗಿಡಗಳು ಹೂ ಬಿಡಲಾರವು, ಹೆಣ್ಣು ಜಾತಿಯಿಂದ ಬಿಡುವ ಹಣ್ಣುಗಳು ಸಣ್ಣದಾಗಿರುತ್ತವೆ ಮತ್ತು ದ್ವಿಲಿಂಗ ಜಾತಿಯಿಂದ ಉತ್ಪತ್ತಿಯಾದ ಹಣ್ಣುಗಳು ಉದ್ದವಾಗಿರುತ್ತದೆ. ನೀರು ನಿಲುಗಡೆಯಾಗುವ ಮತ್ತು ಜೋರು ಗಾಳಿ ಬಿಸುವ ಪ್ರದೇಶಗಳು ಹೊಂದಿಕೆಯಾಗುವುದಿಲ್ಲ ಮತ್ತು ಅತೀ ಆಳದ ಕಪ್ಪು ಭೂಮಿ ಈ ಬೆಳೆಗೆ ಯೋಗ್ಯವಲ್ಲ. ಪಪಾಯ ಹಣ್ಣನ್ನು ಹಲವಾರು ವಿಧದ ಮಣ್ಣುಗಳಲ್ಲಿ ಬೆಳೆಯಬಹುದು .
ಚೆನ್ನಾಗಿ ನೀರು ಬಸಿದು ಹೋಗುವಂತಹ ಮಧ್ಯಮ ಕಪ್ಪು ಮಣ್ಣಿನಿಂದ ಹಿಡಿದು ಕೆಂಪುಗೋಡು ಮಣ್ಣು ಈ ಬೆಳೆಗೆ ಅತಿ ಸೂಕ್ತ . ನೀರು ನಿಲ್ಲುವಂತಹ ತಗ್ಗು ಕೆಳ ಪ್ರದೇಶಗಳು ಮತ್ತು ಅತೀ ಆಳದ ಕಪ್ಪು ಭೂಮಿ ಈ ಬೆಳೆಗೆ ಯೋಗ್ಯವಲ್ಲ.
ಪಪಾಯ ಬೀಜಗಳನ್ನು ಬಿತ್ತುವ ಪೂರ್ವದಲ್ಲಿ ರಾತ್ರಿಯಿಡಿ ಬೀಜಗಳನ್ನು ಗೋಮೂತ್ರದಲ್ಲಿ ನೆನೆಸಿ ನಂತರ ಬಿತ್ತನೆ ಮಾಡುವುದರಿಂದ ಬೀಜಗಳು ಸಮನಾಗಿ ಹಾಗೂ ಉತ್ತಮವಾಗಿ ಮೊಳಕೆಯೊಡೆಯುತ್ತವೆ. ಮಾರ್ಚ-ಏಪ್ರೀಲ್ ತಿಂಗಳುಗಳಲ್ಲಿ ಬೀಜ ಬಿತ್ತನೆ ಮಾಡುವುದು ಒಳಿತು. ಇದರಿಂದ ಜೂನ್-ಜುಲೈ ತಿಂಗಳಲ್ಲಿ ನಾಟಿ ಮಾಡಲು ಅನುಕೂಲವಾಗುತ್ತದೆ. ಸಸಿ ಮಡಿಗಳಿಗೆ ನಿಯಮಿತವಾಗಿ ನೀರು ಒದಗಿಸಿ. ಚಿಕ್ಕ ಸಸಿಗಳಿಗೆ ಬೇಸಿಗೆಯಲ್ಲಿ ನೆರಳು ಒದಗಿಸಬೇಕು. ಗಿಡ ನೆಟ್ಟು ಹಣ್ಣು ಬಿಡುವ ಮೊದಲ ತಿಂಗಳಿಂದ ಹಿಡಿದು ಆರು ತಿಂಗಳ ತನಕ ತೋಟದಲ್ಲಿ ಅಂತರ್ ಬೆಳೆಯಾಗಿ ಅಲ್ಪಾವಧಿ ತರಕಾರಿ (ಕುಂಬಳ ಜಾತಿಗೆ ಸೇರಿದ ತರಕಾರಿ ಹೊರತುಪಡಿಸಿ) ಬೆಳೆಗಳನ್ನು ಬೆಳೆಯಬಹುದು. ಒಮ್ಮೆ ಪಪಾಯ ಫಸಲು ಕೊಡಲು ಪ್ರಾರಂಭಿಸಿದ ಬಳಿಕ ಗಿಡದ ನೆರಳಿನಿಂದಾಗಿ ಅಂತರ ಬೆಳೆಯನ್ನು ಬೆಳೆಯುವುದು ಕಷ್ಟವಾಗುತ್ತದೆ. ಪಪಾಯವನ್ನು ಮಾವು, ಚಿಕ್ಕು ಇತ್ಯಾದಿ ತೋಟಗಳಲ್ಲಿ ಅಂತರ ಬೆಳೆಯಾಗಿ ಕೂಡ ಬೆಳೆಯಬಹುದು.
ವೇಗವಾಗಿ ಹಣ್ಣುಗಳ ಬೆಳವಣಿಗೆಗೆ ಮತ್ತು ಉತ್ತಮ ಫಸಲಿಗಾಗಿ ಪಪಾಯ ಗಿಡಕ್ಕೆ ನಿರಂತರ ನೀರು ಬೇಕಾಗುತ್ತದೆ. ಬೇಸಿಗೆಯಲ್ಲಿ ವಾರಕೊಮ್ಮೆ ಮತ್ತು ಚಳಿಗಾಲದಲ್ಲಿ 8-10 ದಿನಗಳಿಗೊಮ್ಮೆ ನೀರು ಒದಗಿಸಬೇಕಾಗಿರುವುದು ಅವಶ್ಯಕ. ರಿಂಗ್ ಮತ್ತು ಹನಿ ನೀರಾವರಿ ವಿಧಾನಗಳು ಇದರ ನೀರಾವರಿಗೆ ಅತೀ ಯೋಗ್ಯವೆಂದು ಪರಿಗಣಿಸಲ್ಪಟ್ಟಿವೆ. ಪ್ರತಿ ಗಿಡಕ್ಕೆ ಪ್ರತಿ ದಿನಕ್ಕೆ ಹನಿ ನೀರಾವರಿ ಮೂಲಕ 6-8 ಲೀಟರ್ ನೀಡಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ವಾತಾವರಣದಲ್ಲಿ ವಿಶೇಷವಾಗಿ ಗಿಡದ ಹಾಗೂ ಹೂವಿನ ಸುತ್ತಮುತ್ತಲಿನ ತಾಪಮಾನವು ಶೇ. 20- 30 ಡಿಗ್ರಿ ಹಾಗೂ ಸಾಪೇಕ್ಷ ಆದ್ರ್ರತೆ 70-85 % ಇರಬೇಕು. ಇದಕ್ಕಿಂತ ಹೆಚ್ಚಿ ಅಥವಾ ಕಡಿಮೆ ಇದ್ದಾಗ, ಇದು ಹೂವುಗಳ ಪರಾಗಸ್ಪರ್ಶದ (ಪೊಲಿನೇಶನ್) ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಹಣ್ಣು ಕಟ್ಟದೆ ಹೂವುಗಳು ಉದಿರಿಹೊಗುತ್ತವೆ.
ವರ್ಷ ಪೂರ್ತಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಪಪಾಯ ಉಳಿದ ಹಣ್ಣುಗಳಿಗೆ ಹೋಲಿಸಿದರೆ, ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು. ಇದು ಹೃದಯ ಸಂಬಂಧಿ ಕಾಯಿಲೆಯಿಂದ ಹಿಡಿದು ಕರುಳಿನ ಆರೋಗ್ಯದವರೆಗೆ ಹಲವು ರೀತಿಯಲ್ಲಿ ಆರೋಗ್ಯವನ್ನು ಕಾಪಾಡುತ್ತದೆ. ಪರಂಗಿ ಹಣ್ಣಿನಲ್ಲಿ ನಾರಿನ ಅಂಶ ಹೆಚ್ಚು ಸಿಗುವುದರಿಂದ ಬೇರೆ ಬಗೆಯ ಅನಾರೋಗ್ಯಕರ ಆಹಾರಗಳನ್ನು ತಿನ್ನಬೇಕು ಎನ್ನುವ ನಿಮ್ಮ ಭಾವನೆಗಳಿಗೆ ಕಡಿವಾಣ ಹಾಕಿ ನಿಮ್ಮ ದೇಹದ ತೂಕವನ್ನು ನಿರ್ವಹಣೆ ಮಾಡುತ್ತದೆ. ಹಾಗಾಗಿ ದಪ್ಪ ಇರುವವರು ಸಣ್ಣ ಆಗಲು ಪರಂಗಿಹಣ್ಣನ್ನು ಪ್ರತಿದಿನ ಮಧ್ಯಾಹ್ನ ಊಟ ಆದ ಮೇಲೆ ಸೇವಿಸುವ ಅಭ್ಯಾಸ ಇಟ್ಟುಕೊಳ್ಳಿ.
ಕಣ್ಣುಗಳ ಒಳಪದರವನ್ನು ತಂಪಾಗಿ ನೋಡಿಕೊಂಡು ದೃಷ್ಟಿಯನ್ನು ಹೆಚ್ಚು ಮಾಡುವ ಗುಣ ಪರಂಗಿ ಹಣ್ಣಿನಲ್ಲಿ ಕಂಡು ಬರುತ್ತದೆ. ವಯಸ್ಸಾದಂತೆ ಉಂಟಾಗುವ ಕಣ್ಣಿನ ಪೊರೆ ಸಮಸ್ಯೆಯನ್ನು ಪರಂಗಿ ಹಣ್ಣು ಬರಲು ಬಿಡುವುದಿಲ್ಲ.
ಪಪ್ಪಾಯ ಹಣ್ಣು ಉಪಯೋಗಿಸಿದರೆ ಮನುಷ್ಯನ ಚರ್ಮದ ಸೌಂದರ್ಯ ಹೆಚ್ಚಿಸಿಕೊಳ್ಳುತ್ತದೆ. ಇದರ ಸೇವನೆಯಿಂದ ಹೆಚ್ಚಿನ ಜೀವಸತ್ವ ಮತ್ತು ಖನಿಜಾಂಶಗಳನ್ನು ಹೊಂದಬಹುದು. ಅಲ್ಲದೇ ಕ್ಯಾನ್ಸರ್, ಅಸ್ತಮಾ, ಮಧುಮೇಹ ರೋಗ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.
ಇದರಲ್ಲಿರುವ ಪೋಟ್ಯಾಷಿಯಂ ಅಂಶದಿಂದಾಗಿ ಸಂಧಿವಾತ ರೋಗ ನಿವಾರಣೆಗೆ ಸಹಕಾರಿ. ಉತ್ತಮ ಜೀರ್ಣ ಶಕ್ತಿಯನ್ನು ಮತ್ತು ಹೃದಯ ರೋಗಗಳನ್ನು ನಿವಾರಿಸುವಲ್ಲಿ ತುಂಬಾ ಸಹಕಾರಿಯಾಗಿದೆ.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?