ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಕರಿಮೆಣಸು ವಿಶ್ವದ ತುಂಬೆಲ್ಲ ಅತಿ ಹೆಚ್ಚು ಬೇಡಿಕೆಯಲ್ಲಿರುವ ಒಂದು ಪದಾರ್ಥ. ಕರಿ ಮೆಣಸಿಗೆ ಯುರೋಪಿಯನ್ ಮಾರುಕಟ್ಟೆ ಬಹುದೊಡ್ಡ ಮಾರುಕಟ್ಟೆ. ದೇಶದಲ್ಲಿ ಬೆಳೆಯಲಾಗುತ್ತಿದೆ ಬಹುತೇಕ ಕರಿಮೆಣಸು ವಿದೇಶಕ್ಕೆ ರಫ್ತಾಗುತ್ತಿದೆ. ದೇಶದಲ್ಲಿ ಕರಿ ಮೆಣಸು ಬೆಳೆಯುವ ರಾಜ್ಯಗಳಲ್ಲಿ ಕೇರಳ ಪ್ರಥಮ ಸ್ಥಾನದಲ್ಲಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆಸ್ಥಾನವನ್ನು ಕರ್ನಾಟಕ ಪಡೆದುಕೊಂಡಿದೆ.
ದೇಶದಲ್ಲಿ ಕರಿ ಮೆಣಸು ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ. ದೇಶದ ಒಟ್ಟು ಉತ್ಪಾದನೆಯ 43 ಶೇಕಡ ಭಾಗ ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಸಕಲೇಶಪುರ, ಕೊಡಗು, ದಕ್ಷ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಗಳಲ್ಲಿ ಅತಿ ಹೆಚ್ಚು ಕರಿಮೆಣಸು ಬೆಳೆಯಲಾಗುತ್ತಿದೆ. ಅದೇ ರೀತಿ ಚಿಕ್ಕಮಂಗಳೂರಿನಲ್ಲಿ ಸಹ ಕರಿ ಮೆಣಸು ಬೆಳೆಯಲಾಗುತ್ತದೆ.
ರಾಜ್ಯದ ಕರಿಮೆಣಸು ಉತ್ತಮ ಗುಣಮಟ್ಟ ಹೊಂದಿದ್ದು ಅತ್ಯಧಿಕ ಬೇಡಿಕೆಯನ್ನು ಪಡೆದುಕೊಂಡಿದೆ. ಕೊಡಗು ಅತಿಹೆಚ್ಚು ಕರಿಮೆಣಸು ಬೆಳೆಸುವ ಪ್ರದೇಶಗಳಲ್ಲಿ ಒಂದು. ಕರಿಮೆಣಸು ಬಹಳಷ್ಟು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಸಂದರ್ಭದಲ್ಲಿ ಅದರ ಬೇಡಿಕೆ ಹಿಂದಿಗಿಂತಲೂ ಹೆಚ್ಚಾಗಿದೆ.
ಕರಿಮೆಣಸು ವಿದೇಶಗಳಲ್ಲಿ ವೇಗವಾಗಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಒಂದು ಕಾಲದಲ್ಲಿ ಕೇರಳ ರಾಜ್ಯ ಅತಿ ಹೆಚ್ಚು ಕಡಿಮೆ ಬೆಳೆಯುವ ಪ್ರದೇಶವಾಗಿತ್ತು. ಆದರೆ ಕರ್ನಾಟಕದ ಕೆಲವು ಜಿಲ್ಲೆಗಳು ಅತಿ ಹೆಚ್ಚು ಉತ್ಪಾದನೆ ಮಾಡಿರುವುದರಿಂದ ಕೇರಳ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಬ್ಲಾಕ್ ಗೋಲ್ಡ್ ಎಂದು ಕರೆಯಲಾಗುವ ಕರಿಮೆಣಸು ಬೆಲೆಯಲ್ಲೂ ಆಗಾಗ ಬದಲಾವಣೆಗಳನ್ನು ಕಾಣುತ್ತದೆ. ರೈತರಿಗೆ ಉತ್ತಮ ಆದಾಯ ಕರಿಮೆಣಸು ತರಬಲ್ಲದು.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?