ಗೆಳೆಯರ ಬಳಗ ಸೇವಾಸಂಸ್ಥೆ ನೈನಾಡು ಇದರ ವತಿಯಿಂದ ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಪಾಲೆದು ಇಲ್ಲಿನ ಬಡತನ ರೇಖೆಗಿಂತ ಕೆಳಗಿರುವ 10 ಪ್ರತಿಭಾವಂತ ವಿದ್ಯಾರ್ಥಿಗಳಿಗೆ 1000 ರೂ ನಂತೆ ಒಟ್ಟು 10000 ರೂಪಾಯಿ ವಿದ್ಯಾರ್ಥಿವೇತನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಿಲಾತಬೆಟ್ಟು ಗ್ರಾಮ ಪಂಚಾಯತ್ ಸದಸ್ಯ ಹಾಗೂ ನಯನ್ ಬೇಕರಿ ಮಾಲಕರಾದ ನೆಲ್ವಿಸ್ಟರ್ ಪಿಂಟೋ ರವರು ಗೆಳೆಯರ ಬಳಗ ಸೇವಾ ಸಂಸ್ಥೆ ನೈನಾಡು ಸದಾ ಬಡವರ ಪರ ಕಾಳಜಿಯುಳ್ಳ ಸಂಸ್ಥೆಯಾಗಿದ್ದು ಸಣ್ಣ ಹಳ್ಳಿ ಯಲ್ಲಿ ಇರುವ ಸಂಸ್ಥೆಯ ಸದಸ್ಯರು ಹಾಗೂ ದಾನಿಗಳ ನೆರವಿನಿಂದ ಸದಾ ಸಮಾಜಕ್ಕಾಗಿ ಒಳ್ಳೆತನ ಮಾಡುತ್ತ ಬಂದಿದೆ. ಗೆಳೆಯರ ಬಳಗವು ಸೇವೆಯನ್ನು ಮಾಡುವ ಒಂದು ಸಂಸ್ಥೆ, ಈ ಸೇವೆಯನು ಮನದಲ್ಲಿ ಇಟ್ಟುಕೊಂಡು ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಸಣ್ಣ ಕೊಡುಗೆ ಎಂದು ಹೇಳಿದರು. ಮುಂಬರುವ ದಿನಗಳಲ್ಲಿ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರ್ಪಡೆಯಾಗಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಪಂಚಾಯತ್ ಸದಸ್ಯರಾದ ಅನಿಲ್ ಮತ್ತು ರುಕೇಶ್ , SDMC ಅದ್ಯಕರು ನೊಣಯ್ಯ ಪೂಜಾರಿ, ಶಿಕ್ಷಕರಾದ ಮಂಜುಳ ಮತ್ತು ಅತಿಥಿ ಶಿಕ್ಷಕರು ತುಳಸಿ ಹಾಗೂ ಗೆಳೆಯರ ಬಳಗದ ಅಧ್ಯಕ್ಷರಾದ ಶ್ರಿ ಡೋನ್ ಪ್ರವೀಣ್ ಕ್ರಾಸ್ತಾ, ಕಾರ್ಯದರ್ಶಿ ಯಾದ ಅನಿಲ್ ಮೋರಸ್, ಶಾಲೆಯ ಮುಖ್ಯೋಪಾಧ್ಯಾಯಿನಿ ಗೀತಾ, ಸಾಕ್ರೆಡ್ ಹಾರ್ಟ್ ಸೊಸೈಟಿಯ ಸಿಬಂದಿ ರಮೇಶ್ ಪೂಜಾರಿ ಕಟ್ಟಜೆ ಹಾಗೂ ನಿರ್ದೇಶಕರುಗಳಾದ ವಸಂತ್ ಸಾಲ್ಯಾನ್, ಮೇಲ್ವಿನ್ ರೊಡ್ರಿಗಸ್, ವಿನ್ಸ್ oಟ್ ಫೆರ್ನಾಂಡಿಸ್, ನೆಲ್ಸನ್ ಫೆರ್ನಾಂಡಿಸ್, ಸಾಕ್ರೆಡ್ ಹಾರ್ಟ್ ಕಾಲೇಜು ಉಪನ್ಯಾಸಕ ಎಮರ್ಸನ್ ಕ್ರಾಸ್ತಾ, ಸಮಿತಿಯ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.
ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ
ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?