ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಅಮೇರಿಕಾ : ತಿಮಿಂಗಲದ ಬಾಯಿಗೆ ತುತ್ತಾಗಿದ್ದ ವ್ಯಕ್ತಿಯೋರ್ವ ಪವಾಡ ಸದೃಶವಾಗಿ ತಿಮಿಂಗಲದ ಬಾಯಿಯಿಂದ ಹೊರ ಬಂದ ಘಟನೆ ಅಮೇರಿಕಾದ ಮಸ್ಸಾಚುಸೆಟ್ಸ್ ನಲ್ಲಿ ನಡೆದಿದೆ.
56 ವರ್ಷದ ಲ್ಯಾಬಸ್ಟರ್ ಡ್ರೈವರ್ ಆಗಿರುವ ಮೈಕಲ್ ಪ್ಯಾಕಾರ್ಡ್ ಎಂಬವರೇ ತಿಮಿಂಗಲದ ಬಾಯಿಯಿಂದ ಹೊರ ಬಂದವರು.
ಸಮುದ್ರದಲ್ಲಿ ಸುಮಾರು 45 ಅಡಿ ಆಳದಲ್ಲಿ ಈಜುತ್ತಿರುವ ವೇಳೆಯಲ್ಲಿ ತಿಮಿಂಗಲವೊಂದು ಪ್ಯಾಕಾರ್ಡ್ ಮೇಲೆ ದಾಳಿ ನಡೆಸಿ ನುಂಗಿ ಹಾಕಿತ್ತು.
ಅರೆಕ್ಷಣ ಮೈಕಲ್ ಫ್ಯಾಕಾರ್ಡ್ ಭಯಗೊಂಡಿದ್ದರು. ತನ್ನ ಮೇಲೆ ಶಾರ್ಕ್ ದಾಳಿ ನಡೆಸಿರಬಹುದು ಅಂದುಕೊಂಡಿದ್ದರು. ಆದ್ರೆ ಸ್ವಲ್ಪ ಹೊತ್ತಲೇ ಶಾರ್ಕ್ ಅಲ್ಲಾ ತಿಮಿಂಗಿಲ ಅನ್ನೋದು ಅವರ ಅರಿವಿಗೆ ಬಂದಿತ್ತು. ತಿಮಿಂಗಲದ ಹೊಟ್ಟೆಯೊಳಗೆ ಸೇರುತ್ತಿದ್ದಂತೆಯೇ ಇನ್ನೇನು ತಾನು ಬದುಕೋದೇ ಇಲ್ಲಾ ಅಂತಾ ಡಿಸೈಡ್ ಮಾಡಿಕೊಂಡಿದ್ದಾರೆ.
ಆದ್ರೆ ಸ್ವಲ್ಪ ಹೊತ್ತಲೇ ತಿಮಿಂಗಲ ನೀರಿನ ಮೇಲಕ್ಕೆ ಬಂದು ಬಾಯಿ ಕಳೆದು ಉಸಿರಾಡಿದೆ. ಈ ವೇಳೆಯಲ್ಲಿ ಮೈಕಲ್ ಫ್ಯಾಕಾರ್ಡ್ ಗಾಳಿಯಲ್ಲಿ ತೇಲುತ್ತಾ ಸಮುದ್ರದ ಮೇಲ್ಬಾಗದಲ್ಲಿ ಬಿದ್ದಿದ್ದಾರೆ. ಅಲ್ಲದಿದ್ದವರು ಫ್ಯಾಕಾರ್ಡ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಫ್ಯಾಕಾರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಅವರೇ ಹೇಳುವ ಪ್ರಕಾರ ಸುಮಾರು 30 ಸೆಕೆಂಡ್ ಗಳ ಕಾಲಷ್ಟೇ ಅವರು ತಿಮಿಂಗಲದ ಬಾಯಿಯಲ್ಲಿದ್ದರು. ಅಷ್ಟೇ ಅಲ್ಲಾ ತನ್ನ ಕೈಕಾಲು ಮುರಿದು ಹೋಗಿರ ಬಹುದು ಅಂತಾ ಅಂದುಕೊಂಡಿದ್ದರು. ಆದರೆ ಅದೃಷ್ಟವಶಾತ್ ದೇಹದ ಯಾವುದೇ ಭಾಗಕ್ಕೂ ಹಾನಿಯಾಗಿಲ್ಲ. ಇದೊಂದು ಪವಾಡ ದ ಘಟನೆ ಎಂದು ಎಲ್ಲರೂ ವಿಶ್ಲೇಷಿಸಿದ್ದಾರೆ.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?